ಕೇರಂ ಬೋರ್ಡ್ ಸ್ಪರ್ಧೆಯಲ್ಲಿ ಜಿ.ಚಂದ್ರಕಾಂತ್ ಪ್ರಥಮ ಸ್ಥಾನ

Ravi Talawar
ಕೇರಂ ಬೋರ್ಡ್ ಸ್ಪರ್ಧೆಯಲ್ಲಿ ಜಿ.ಚಂದ್ರಕಾಂತ್ ಪ್ರಥಮ ಸ್ಥಾನ
WhatsApp Group Join Now
Telegram Group Join Now
ಹೈದರಾಬಾದ್, ಮೇ 28.-ಕೇರಂ ಬೋರ್ಡ್ ಒಂದು ಮೋಜಿನ ಮತ್ತು ರೋಮಾಂಚಕಾರಿ ಆಟವಾಗಿದ್ದು, ಮಕ್ಕಳು ಮತ್ತು ವಯಸ್ಕರಿಗೆ ಇದು ಬಹಳ ಚೆನ್ನಾಗಿ ಸ್ಥಾಪಿತವಾದ ಆಟವಾಗಿದೆ. ಹೈದ್ರಾಬಾದದ ಪ್ರಗತಿನಗರದಲ್ಲಿ ಹಿರಿಯ ನಾಗರಿಕರ ಸಂಘವು ಆಯೋಜಿಸಿದ್ದ ಕೇರಂ ಬೋರ್ಡ್ ಸ್ಪರ್ಧೆಯ ಹಿರಿಯರ “ಎ” ತಂಡದಲ್ಲಿ ಸಂಘದ ಆಜೀವ ಸದಸ್ಯ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಜಿ. ಚಂದ್ರಕಾಂತ್ ಪ್ರಥಮ ಸ್ಥಾನ ಪಡೆದಿದ್ದಾರೆ.
               ಚಂದ್ರಕಾಂತ ಅವರು ಕೇವಲ 9.35 ನಿಮಿಷಗಳಲ್ಲಿ  ಬೋರ್ಡಿನ ಎಲ್ಲ ಒಂಬತ್ತು  ಕಾಯಿನ್ ಗಳನ್ನು  ಪ್ಯಾಕೆಟಿನಲ್ಲಿ ಹಾಕಿ ರೋಮಾಂಚಕ ಗೆಲುವು ಪಡೆದು ವಿಜಯೋತ್ಸವದ ನಗೆ ಬೀರಿದರು. ಸಂಘದ ಮತ್ತೊಬ್ಬ ಸದಸ್ಯ ಪಿ.ವಿ. ಸೀತಾರಾಮರಾವ್ ಎರಡನೇ ಬಹುಮಾನ ಮತ್ತು ಬಿಲ್ಲಾ ಕೋಟೇಶ್ವರರಾವ್ ಮೂರನೇ ಬಹುಮಾನ ಪಡೆದರು.ಇವರು ಕ್ರಮವಾಗಿ 10.35 ಮತ್ತು 10.51 ನಿಮಿಷಗಳಲ್ಲಿ ಎಲ್ಲ 9  ಕಾಯಿಲೆಗಳನ್ನು ಪ್ಯಾಕೆಟ್‌ಗೆ ಹಾಕಿದರು.
             ಸ್ಪರ್ಧೆಯ ಜೂನಿಯರ್ಸ್ “ಬಿ” ತಂಡದಲ್ಲಿ  ಕೆ.ಎಸ್.ಎಲ್. ಶಾಸ್ತ್ರಿ ಪ್ರಥಮ, ಜೆ.ನಾಗಿರೆಡ್ಡಿ ದ್ವಿತೀಯ ಹಾಗೂ ಸಂಘದ ಕಾರ್ಯದರ್ಶಿ ವಿ.ಪುಲ್ಲಯ್ಯ ತೃತೀಯ ಬಹುಮಾನ ಪಡೆದರು. ಕೇರಂ ಬೋರ್ಡ್ ಸ್ಪರ್ಧೆಯ “ಎ” ತಂಡದಲ್ಲಿ 14 ಸ್ಪರ್ಧಿಗಳು ಮತ್ತು “ಬಿ” ತಂಡದಲ್ಲಿ 15 ಸ್ಪರ್ಧಿಗಳು ಭಾಗವಹಿಸಿದ್ದರು. ಸಂಘದ ಸದಸ್ಯರಾದ ಕಾಮೇಶ್ವರರಾವ್ ಮತ್ತು ಹರನಾಥ್ ಸ್ಪರ್ಧೆಯ ಸಂಯೋಜಕರಾಗಿದ್ದರು. ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಕಾಮಯ್ಯ ವಿಜೇತರಿಗೆ ಬಹುಮಾನ ವಿತರಿಸಿದರು.
WhatsApp Group Join Now
Telegram Group Join Now
Share This Article