ಸಂಕೇಶ್ವರ : ವಿದ್ಯಾರ್ಥಿಗಳ ಮುಂದಿನ ಉಜ್ವಲ ಭವಿಷ್ಯತ್ತಿಗಾಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಫ್ಯೂಚರ್ ಸ್ಕಿಲ್ ಎಕ್ಸ್ ಪೋ ಮೇಳ ಸಹಾಯವಾಗಲಿದೆ ಎಂದು ಗಿರಿರಾಜ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಗಿರಿರಾಜ ಶಿರಗೆ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ರವಿವಾರ ಮುಂಜಾನೆ ೧೦ ಗಂಟೆಗೆ ಶ್ರೀ ದುರದುಂಡೇಶ್ವರ ಮಠದ ಕಾರ್ಯಾಲಯದಲ್ಲಿ “ಫ್ಯೂಚರ್ ಸ್ಕಿಲ್ ಎಕ್ಸ್ ಪೋ” ಮೇಳವು ಜರುಗಲಿದ್ದು.’ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ, ಎಲ್ಲ ವಿದ್ಯಾರ್ಥಿಗಳು
ಇಂತಹ ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಮೇಳದಲ್ಲಿ ಪಿಯುಸಿ ವಿಜ್ಞಾನ ೨ನೇ ವರ್ಷವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಮತ್ತು ಜೆಇಇ ಪ್ರಯತ್ನಿಸಿದ ಅಭ್ಯರ್ಥಿಗಳು ಪ್ರತಿಷ್ಠಿತ ಎಂಜಿನಿಯರಿಂಗ್, ಡಿಪ್ಲೋಮಾ, ಡಿ,ಪಾರ್ಮಾ ಹಾಗೂ ಬಿ ಪಾರ್ಮಾ ಕಾಲೇಜುಗಳಲ್ಲಿ ದಾಖಲಾತಿ ಅವಕಾಶಗಳನ್ನು ಪಡೆಯಲು ನಾವೂ ಅನುಕೂಲ ಮಾಡಿಕೊಡುತ್ತೇವೆ ಹಾಗೂ ಹೆಚ್ಚಿನ ಮಾಹಿತಿಗಾಗಿ ೮೧೯೭೭೭೧೧೧೯ ಸಂಪರ್ಕಿಸಬಹುದು ಎಂದರು