ಶ್ರೀಮತಿ ಹೇಮಾವತಿ ಹೆಗ್ಗೆಡೆಯವರ  ಹುಟ್ಟು ಹಬ್ಬದ ಪ್ರಯುಕ್ತ  ಹಣ್ಣು ಹಂಪಲು  ವಿತರಣೆ.

MK HasiruKranti
ಶ್ರೀಮತಿ ಹೇಮಾವತಿ ಹೆಗ್ಗೆಡೆಯವರ  ಹುಟ್ಟು ಹಬ್ಬದ ಪ್ರಯುಕ್ತ  ಹಣ್ಣು ಹಂಪಲು  ವಿತರಣೆ.
WhatsApp Group Join Now
Telegram Group Join Now
 ಪಾಶ್ಚಾಪೂರ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹಾಗೂ ಧರ್ಮಸ್ಥಳದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ  ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಪಾಶ್ಚಾಪೂರ ಗ್ರಾಮದಲ್ಲಿ ಧರ್ಮಸ್ಥಳದಿಂದ ಪ್ರತಿ  ತಿಂಗಳು ಮಾಸಾಶನ ಪಡೆಯುತ್ತಿರುವ ನಿರ್ಗತಿಕ ವಾತ್ಸಲ್ಯ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಣ್ಣು ಹಂಪಲು ವಿತರಣೆ ಮಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶ್ರೀಕಾಂತ ನಾಯ್ಕ್ ಮಾತನಾಡಿ, ಹುಕ್ಕೇರಿ ಹಾಗೂ ಸಂಕೇಶ್ವರ ವ್ಯಾಪ್ತಿಯ ಗ್ರಾಮಗಳಲ್ಲಿ  ನಿರ್ಗತಿಕ ವಾತ್ಸಲ್ಯ ಕುಟುಂಬಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರತಿ  ತಿಂಗಳು ಅವರ ಜೀವನ ನಿರ್ವಹಣೆ ಹಾಗೂ ಅನಾರೋಗ್ಯದ ಸಂದರ್ಭದಲ್ಲಿ ಅನುಕೂಲವಾಗಲು ಮಾಸಾಶನ ಹಾಗೂ ವರ್ಷಕ್ಕೊಮ್ಮೆ ಮನೆ ಬಳಕೆಗೆ ಪಾತ್ರೆ ಪರಿಕರಗಳು, ಉಡುಗೆ ಹಾಗೂ ಹಾಸಿಗೆಗಳನ್ನು ನೀಡುವುದರ ಜೊತೆಗೆ, ತಾಲೂಕಿನ 3 ಗ್ರಾಮಗಳಲ್ಲಿರುವ ಮೂರು ಜನ ನಿರ್ಗತಿಕ ವಾತ್ಸಲ್ಯ ಫಲಾನುಭವಿಗಳಿಗೆ ವಾಸಿಸಲು ಸೂರು ಇಲ್ಲದ್ದರಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ  3 ಹೊಸ ಮನೆ ನಿರ್ಮಾಣ ಮಾಡಿ ಕೊಡಲಾಗಿದ್ದು, ಹಾಗೂ ಧರ್ಮಸ್ಥಳದ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರು ಸ್ವಾವಲಂಬಗೆ ಜೀವನ ನಡೆಸಲು ಅನುಕೂಲವಾಗುವಂತೆ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಹೊಲಿಗೆ ತರಬೇತಿಯಂತಹ ಕೌಶಲ್ಯ ಆಧಾರಿತ ತರಬೇತಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
     ಈ  ಸಂದರ್ಭದಲ್ಲಿ ಪಾಶ್ಚಾಪೂರ ವಿಭಾಗದ ಮೇಲ್ವಿಚಾರಕ ಚಂದ್ರಶೇಖರ ಹಲಸಗಿ, ಹುಕ್ಕೇರಿ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಸರಿತಾ ವಿನಾಯಕ, ಗೌರವ್ವ ಕುಡಜೋಗಿ, ಅಕ್ಷತಾ ಸುಲಧಾಳ,  ಚಂದ್ರಕಲಾ ಹಿರೇಮಠ, ಲಲಿತಾ ಚಂದ್ರಪ್ಪಗೋಳ, ಬಸವ್ವ ಬೆಳವಿ ವಿದ್ಯಾಶ್ರೀ ಮುನ್ನೋಳಿ, ಸುನಿತಾ ಹಿರೇಮಠ, ಮುತ್ತಪ್ಪ ಕೀಳ್ಳಿಕೇತ್ರ, ಶೋಭಾ ಜಿಡ್ಡಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article