ವಿಮೆ ಹಣ ತುಂಬಿದ ರೈತರಿಗೆ ಬೆಳೆ ಪರಿಹಾರ ಕೊಡುವ ಬದಲು ಮೋಸ!

Ravi Talawar
ವಿಮೆ ಹಣ ತುಂಬಿದ ರೈತರಿಗೆ ಬೆಳೆ ಪರಿಹಾರ ಕೊಡುವ ಬದಲು ಮೋಸ!
WhatsApp Group Join Now
Telegram Group Join Now

ಯಾದಗಿರಿ,17:  ಜಿಲ್ಲೆಯ ಹುಣಸಗಿ ತಾಲೂಕಿನೊಂದರಲ್ಲೇ 200 ಕ್ಕೂ ಅಧಿಕ ರೈತರಿಗೆ ಇದರಿಂದ ಅನ್ಯಾಯವಾಗಿದೆ.ರೈತರು ಅತಿವೃಷ್ಟಿ ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡಾಗ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಬೆಳೆಗೆ ವಿಮೆ  ಮಾಡಿಸುತ್ತಾರೆ. ಸಂಕಷ್ಟದಲ್ಲಿರುವ ರೈತರಿಗೆ ವಿಮೆಯ ಪರಿಹಾರ ಹಣ ತುಂಬಾ ನೆರವಿಗೆ ಬರುತ್ತದೆ. ಆದ್ರೆ ಜಿಲ್ಲೆಯಲ್ಲಿ  ವಿಮೆ ಹಣ ತುಂಬಿದ ರೈತರಿಗೆ ಬೆಳೆ ಪರಿಹಾರ ಕೊಡುವ ಬದಲು ಮೋಸ ಮಾಡಲಾಗಿದೆ. ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕಾದ ಕಂಪನಿ ನೇರವಾಗಿ ಮಕ್ಮಲ್‌ ಟೋಪಿ ಹಾಕಿದೆ.

ಈ ಬಾರಿ ಭೀಕರ ಬರಗಾಲ ಉಂಟಾಗಿದೆ. ಬಿತ್ತನೆ‌ ಮಾಡಿದ ಬೆಳೆಗೆ ಸರಿಯಾಗಿ ನೀರು ಸಿಗದ ಕಾರಣಕ್ಕೆ ಬಂಗಾರದಂತ ಬೆಳೆಗಳು ಒಣಗಿ ಹೋಗಿವೆ. ಎಕರೆಗೆ ಸಾವಿರಾರು ರೂ. ಖರ್ಚು ಮಾಡಿರುವ ರೈತರು ಕಂಗಲಾಗಿ ಹೋಗಿದ್ದಾರೆ. ರೈತರಿಗೆ ಇಂತಹ ಸಂಕಷ್ಟದ ಕಾಲ ಬಂದಾಗ ಸಹಕಾರ ಆಗಲಿ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (Pradhan Mantri Fasal Bima Yojana) ಜಾರಿಗೆ ತಂದಿದೆ. ಈ ಯೋಜನೆಯಡಿ ವರ್ಷಕ್ಕೆ ಕೋಟ್ಯಾಂತರ ರೈತರು ಬೆಳೆಗೆ ವಿಮೆಯನ್ನ ಪಾವತಿ ಮಾಡುತ್ತಾರೆ.

ಅದರಂತೆ ಯಾದಗಿರಿ ಜಿಲ್ಲೆಯ ರೈತರು ಸಹ ಫಸಲ್ ಭೀಮಾ ಯೋಜನೆಯಡಿ ಬೆಳೆಗೆ ವಿಮೆ ಮಾಡಿಸಿದ್ದಾರೆ. ಹೆಚ್ಚಾಗಿ ರೈತರು ತೊಗರಿ ಹಾಗೂ ಹತ್ತಿ ಬೆಳೆಗೆ ವಿಮೆಯನ್ನ ಮಾಡಿಸಿದ್ದಾರೆ. ಬೆಳೆ ಹಾಳಾದ ಸಂದರ್ಭದಲ್ಲಿ ವಿಮೆ ಕಂಪನಿ ಪಾವತಿಸಿದ ವಿಮೆ ಹಣಕ್ಕೆ 20 ಪಟ್ಟಿನಷ್ಟು ಪರಿಹಾರದ ರೂಪದಲ್ಲಿ ಹಣವನ್ನ ನೀಡಬೇಕು. ಆದ್ರೆ ಈ ಬಾರಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನೊಂದರಲ್ಲೇ 200 ಕ್ಕೂ ಅಧಿಕ ರೈತರು ಮೋಸ ಹೋಗಿದ್ದಾರೆ. ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ನೂರಕ್ಕೆ ಹತ್ತೆನರಡು ಜನರಿಗೆ ಮಾತ್ರ ಪರಿಹಾರ ನೀಡಿದ್ರೆ‌ ಉಳಿದವರಿಗೆ ನಾನಾ ಕಾರಣಗಳನ್ನ ಹೇಳಿ ಪರಿಹಾರ ಬಾರದಂತೆ ಮಾಡಿದ್ದಾರೆ ಎಂಬುದು ರೈತರ ಆರೋಪವಾಗಿದೆ.

ಈ ಬಾರಿ ಭೀಕರ ಬರಗಾಲ ಆವರಿಸಿಕೊಂಡಿದೆ. ರೈತರು ಪ್ರತಿ ಎಕರೆಗೆ ಸಮಾರು 20 ರಿಂದ 25 ಸಾವಿರ ಖರ್ಚು ಮಾಡಿ ತೊಗರಿ ಹಾಗೂ ಹತ್ತಿ‌ ಬೆಳೆಯನ್ನ ಬೆಳೆದಿದ್ರು. ಆದ್ರೆ ಸರಿಯಾಗಿ ಮಳೆ ಆಗದ ಕಾರಣಕ್ಕೆ ಬೆಳೆ ಹಾಳಾಗಿ ಹೋಗಿದೆ. ಬೆಳೆಯನ್ನ ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟದಲ್ಲಿರು ರೈತರಿಗೆ ವಿಮೆ ಹಣ ಸಹಕಾರಿಯಾಗಬೇಕಿತ್ತು. ಆದ್ರೆ ಇಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ಸರಿಯಾಗಿ ಪರಿಶೀಲನೆ ಮಾಡದೆ ಪರಿಹಾರ ನೀಡಿಲ್ಲ.

ಓರ್ವ ರೈತ ಒಂದು ಎಕರೆಗೆ ರೈತರು ಒಂದು ಸಾವಿರ ರೂ. ವಿಮೆ ಮಾಡಿಸಿದ್ದರೆ ಇನ್ನು ಐದು ಎಕರೆಗೆ 5 ಸಾವಿರ ಹಣವನ್ನ ವಿಮೆ ಪಾವತಿಸಿದ್ದಾರೆ. ಈಗ ಬೆಳೆ ಹಾಳಾಗಿದ್ದರಿಂದ ರೈತನಿಗೆ ವಿಮೆ ಕಂಪನಿ ತಮ್ಮ ನಿಯಮದ ಪ್ರಕಾರವೇ 1 ಲಕ್ಷ ಪರಿಹಾರವನ್ನ ನೀಡಬೇಕು. ಹೀಗೆ ಸಾಕಷ್ಟು ರೈತರು ತಮಗೆ ಬೇಕಾದಷ್ಟು ವಿಮೆಯನ್ನ ಮಾಡಿಸಿಕೊಂಡಿದ್ದಾರೆ. ವಿಮೆ ಪ್ರೀಮಿಯಂ ಹಣಕ್ಕೆ 20 ಪಟ್ಟು ಸೇರಿಸಿ ಕಂಪನಿಗೆ ರೈತರಿಗೆ ಬೆಳೆ ಪರಿಹಾರದ ರೂಪದಲ್ಲಿ ಕೊಡಬೇಕು.

WhatsApp Group Join Now
Telegram Group Join Now
Share This Article