ಬಳ್ಳಾರಿ. ಮೇ. 05.: ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ 34ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ರಾಜೇಶ್ವರಿ ಸುಬ್ಬರಾಯುಡು ಇವರ ಹುಟ್ಟು ಹಬ್ಬವನ್ನು ಇಂದು ನಗರದ ಶಾಂತಿನಗರದಲ್ಲಿ, ಫುಡ್ ಕೋರ್ಟ್, ಬತ್ರಿ ಕೆನಾಲ್ ಪ್ರದೇಶ, ರಾಜೀವ್ ಗಾಂಧಿನಗರ ಸೇರಿದಂತೆ ಹಲವಾರು ಕಡೆಗಳಲ್ಲಿ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಅವರ ಪತಿಯಾದ ಸುಬ್ಬರಾಯುಡು ಅವರ ಆಪ್ತರು ಕೇಕ್ ಕತ್ತರಿಸಿ ರಾಜೇಶ್ವರಿ ಸುಬ್ಬರಾಯ್ಡು ಅವರ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.
ಕುರುಗೋಡು ತಾಲೂಕಿನ ಬಾದನಹಟ್ಟ ಗ್ರಾಮದಲ್ಲಿ ಮಾಜಿ ಅಧ್ಯಕ್ಷ ಹನುಮಂತ್ ರೆಡ್ಡಿ, ಊರಿನ ಮುಖಂಡರಾದ ಬಸಪ್ಪಯ್ಯ, ದಳಪತಿ ತಿಮ್ಮಯ್ಯ, ಸಕ್ರೆ ತಿಮ್ಮಪ್ಪ, ವೆಂಕಟರೆಡ್ಡಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಕರಿಬಸಮ್ಮ ಸೇರಿದಂತೆ ಗ್ರಾಮದ ನೂರಾರು ಜನ ಅವರ ಅಭಿಮಾನಿಗಳು ಉಡುಸಲಮ್ಮ ದೇವಸ್ಥಾನದ ಹತ್ತಿರ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮುಂಜಾನೆ ವಿದ್ಯಾನಗರದ ಅಭಯ ಆಂಜನೇಯ ದೇವಸ್ಥಾನದಲ್ಲಿ ವಿವಿಧ ಪೂಜೆಗಳನ್ನು ನೆರವೇರಿಸಿ ಸ್ವಾಮಿಯ ಆಶೀರ್ವಾದವನ್ನು ಪಡೆದುಕೊಂಡರು. ಈ ದೇವಸ್ಥಾನದಲ್ಲಿ ಅವರ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಅವರ ಫಾರ್ಮ ಹೌಸ್ ನಲ್ಲಿ ಹುಟ್ಟುಹಬ್ಬವನ್ನು ಆಚರಿಕೊಂಡು ನೆರೆದಂತ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ರಾಜೇಶ್ವರಿ ಸುಬ್ಬರಾಯರು ಅವರ ಅಭಿಮಾನಿಗಳು ಸ್ನೇಹಿತರು ಬಂಧು ಬಾಂಧವರು ಶುಭ ಕೋರಿದರು.