ಪುಣೆಯಲ್ಲಿ ಎನ್​ಸಿಪಿಯ ಮಾಜಿ ಕೌನ್ಸಿಲರ್​ನನ್ನು ಗುಂಡಿಕ್ಕಿ ಹತ್ಯೆ

Ravi Talawar
ಪುಣೆಯಲ್ಲಿ ಎನ್​ಸಿಪಿಯ ಮಾಜಿ ಕೌನ್ಸಿಲರ್​ನನ್ನು ಗುಂಡಿಕ್ಕಿ ಹತ್ಯೆ
WhatsApp Group Join Now
Telegram Group Join Now

ಪುಣೆ: ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೆ ಒಂದೆಡೆ ಸಿದ್ಧತೆ ನಡೆಯುತ್ತಿದೆ, ಮತ್ತೊಂದೆಡೆ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಮಾಜಿ ಕೌನ್ಸಿಲರ್ ವನರಾಜ್ ಅಂದೇಕರ್ ​​ಅವರನ್ನು ಭಾನುವಾರ ರಾತ್ರಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ದಾಳಿಕೋರರು ಮೊದಲು ಮಾಜಿ ಕೌನ್ಸಿಲರ್ ವನರಾಜ್ ಮೇಲೆ ಹಲ್ಲೆ ನಡೆಸಿ ನಂತರ ಗುಂಡು ಹಾರಿಸಿದ್ದಾರೆ. ವನರಾಜ್ ಅಂದೇಕರ್ ​​ರಕ್ತದಲ್ಲಿ ತೊಯ್ದು ಬಿದ್ದಿದ್ದಾಗ ದಾಳಿಕೋರರು ಅಲ್ಲಿಂದ ಓಡಿ ಹೋಗಿದ್ದಾರೆ.
ವನರಾಜ್ ಅಂದೇಕರ್ ​​ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಸೂನ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ಸದ್ಯ ಪೊಲೀಸರು ಈ ಬಗ್ಗೆ ತನಿಖೆಯಲ್ಲಿ ನಿರತರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.

ಕೌಟುಂಬಿಕ ಕಲಹ ಹಾಗೂ ಹಣದ ಕಾರಣದಿಂದ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆದಿರುವ ಮೂವರ ವಿಚಾರಣೆ ನಡೆಯುತ್ತಿದೆ.

WhatsApp Group Join Now
Telegram Group Join Now
Share This Article