ಕುರುಗೋಡು, ಫೆ.09.: ತಾಲೂಕಿನ ಕೋಳೂರು ಗ್ರಾಮದ ಗಾಂಧಿ ತತ್ವ ಆಧಾರಿತ ಬಾಲಕಿಯರ ವಸತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಹೆಚ್ ವಿ ಗಾಯತ್ರಿ ಯು ಶಾಲಾ ಸಾಕ್ಷರತಾ ಇಲಾಖೆ, ಬೆಂಗಳೂರು ಅಪರ ಕಚೇರಿ, ಕಲಬುರ್ಗಿ ಜಿಲ್ಲಾ ಆಡಳಿತ ವತಿಯಿಂದ ಶನಿವಾರ ಕಲಬುರ್ಗಿಯಲ್ಲಿ ರಾಜ್ಯಮಟ್ಟದ ಕಥೋತ್ಸವ ಕಾರ್ಯಕ್ರಮದಲ್ಲಿ ಆಯೋಜಿದ ಜಾನಪದ ಗೀತೆ ಹಾಡುವ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾಳೆ. ವಸತಿ ಶಾಲೆಯ ಪ್ರಾಚಾರ್ಯ ವಿಶ್ವನಾಥ್ ಡಿ ಹಾಗೂ ಸಂಗೀತ ಮಾರ್ಗದರ್ಶಕರಾದ ವಸಂತ್ ಕುಮಾರ್ ಕೆ, ಶಿಕ್ಷಕ ಬಳಗವು ಅಭಿನಂದಿಸಿದ್ದಾರೆ


