ಬಳ್ಳಾರಿ, ಮಾ.30..: ಪ್ರಥಮಚಿಕಿತ್ಸೆ ಮತ್ತು ಪ್ರಕೃತಿ ವಿಕೋಪದ ಬಗ್ಗೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲುತರಬೇತಿ ಬಹಳ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರು ಈ ತರಹದ ತರಬೇತಿಯನ್ನು ಪಡೆದರೆ ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಜೀವರಕ್ಷಣೆ ಮಾಡಿ ಅನೇಕ ಜನರ ಪ್ರಾಣ ಮತ್ತು ಆಸ್ತಿಯನ್ನು ಉಳಿಸಬಹುದು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾದ .ಭಾಸ್ಕರ್ ರಾವ್, ಐ.ಪಿ.ಎಸ್.(ನಿ) ತಿಳಿಸಿದರು.
ಅವರು ಭಾರತೀಯ ರೆಡ್ಕ್ರಾ ಸ್ ಸಂಸ್ಥೆ, ರಾಜ್ಯ ಶಾಖೆ ಮತ್ತು ಬಳ್ಳಾರಿ ಜಿಲ್ಲಾ ಶಾಖೆಯ ವತಿಯಿಂದ ಕಲಬುರಗಿ ವಿಭಾಗ ಮಟ್ಟದ ಯುವ ರೆಡ್ಕ್ರಾ ಸ್ ಮೂರು ದಿನಗಳ ಶಿಬಿರವನ್ನು ರೆಡ್ಕ್ರಾ ಸ್ ಭವನ್, ಬಳ್ಳಾರಿಯಲ್ಲಿ ನಡೆದ .
ಈ ಶಿಬಿರದಲ್ಲಿ ಕಲಬುರಗಿ ವಿಭಾಗದ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಕೊಪ್ಪಳ, ಬೀದರ್, ಯಾದಗಿರಿ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆ ಯ ಕಲಬುರ್ಗಿ ಜಿಲ್ಲಾ ವಿಭಾಗ ಮಟ್ಟದ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಕಲಬುರಗಿ ವಿಭಾಗದಎಲ್ಲಾ ಜಿಲ್ಲೆಗಳ ಸುಮಾರು 160 ಜನ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಭಾಗವಹಿಸಿದ್ದು ಮತ್ತು ವಿವಿಧತರಬೇತಿಯನ್ನು ಪಡೆಯುತ್ತಿರುವುದುತುಂಬ ಸಂತೋಷದ ವಿಷಯವಾಗಿದೆಎಂದು ತಿಳಿಸಿದರು ಮತ್ತು ಈ ಶೀಬಿರದಲ್ಲು ಎಲ್ಲಾರೀತಿಯಿಂದ ಭಾಗವಹಿಸಿ ತಮ್ಮಜಿಲ್ಲೆಯ ಹೆಸರನ್ನುಉನ್ನತ ಮಟ್ಟಕ್ಕೆಏರಿಸಲು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಡಾ||.ಎಸ್.ಜೆ.ವಿ.ಮಹಪಾಲ್, ಉಪ ಸಭಾಪತಿ ರೆಡ್ಕ್ರಾ ಸ್ ಸಂಸ್ಥೆ, ಇವರು ಮಾತನಾಡುತ್ತಾ, 03 ದಿನಗಳ ಶಿಬಿರದಲ್ಲಿ ವಿದ್ಯಾರ್ಥಿಗಳು ಪ್ರಥಮಚಿಕಿತ್ಸೆ, ಪ್ರಕೃತಿ ವಿಕೋಪದ, ರಕ್ತದಾಣ ಶಿಬಿರ, ಸಾಂಕೃತಿಕ ಕಾರ್ಯಕ್ರಮಗಳು, ಸಂಗೀತ ಕಾರ್ಯಕ್ರಮ ಮತ್ತು ಅನೇಕ ಸ್ಪರ್ದೆಯನ್ನು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹವನ್ನು ನೀಡಿದರು.
ಇದೇ ಶಿಬಿರದಲ್ಲಿ ಅಗ್ನಿಶಾಮಕ ಇಲಾಖೆ ಮತ್ತು ಅನೇಕ ಇಲಾಖೆಯಿಂದ ಅತಿಥಿ ಉಪನ್ಯಾಸವನ್ನು ನೀಡಿದರು. ಎಂ.ಎ.ಷಕೀಬ್, ಕಾರ್ಯದರ್ಶಿಗಳು, ರೆಡ್ಕ್ರಾ ಸ್ ಸಂಸ್ಥೆ, ಇವರು ಪ್ರಥಮಚಿಕಿತ್ಸೆ ಮತ್ತು ಪ್ರಕೃತಿ ವಿಕೋಪದ ಬಗ್ಗೆ ವಿಷೇಶ ಕಾರ್ಯಗಾರ ನಡೆಸಿದರು.ಡಾ||.ಗಂಗಾಧರ್ ಗೌಡ ನಿದೇರ್ಶಕರು, ಬಿಮ್ಸ್ ಮತ್ತು ಸಭಾಪತಿಗಳು ರೆಡ್ಕ್ರಾ ಸ್ ಸಂಸ್ಥೆ, ಪೊಲಾ ರಾಧಾಗೃಷ್ಣ, ಖಜಾಂಚಿ, ಪ್ರೋಫೇಸರ್ಕದಪ್ಪುಗಲ್ಲು ವಿರೇಶ್, ಈ.ಸಿ ಸದಸ್ಯರು, ರೆಡ್ಕ್ರಾ ಸ್ ಸಂಸ್ಥೆ, ಬಳ್ಳಾರಿ. ಬಿ.ದೇವಣ್ಣ ಮತ್ತುಎಸ್.ಬಿ.ಐ ಮೇನ್ ಬ್ರಾಂಚ್ಇುವರು ಸಹಕರಿಸಿದರು. ಡಾ||.ಪಲ್ಲವಿ, ಯುವರೆಡ್ಕ್ರಾಳಸ್ಕಾಗರ್ಯಕ್ರಮ ಅಧಿಕಾರಿಗಳು, ಸರಳಾ ದೇವಿ ಕಾಲೇಜು, ಶ್ರೀಮತಿ.ಚಿತ್ರಾ, ಪಿ.ವಾಸು, ಅಶೋಕ್ ಜೇನ್, ಮಹಬೂಬ್ ಬಾಷಾ, ಮಹಾಂತೇಶ್ ಮತ್ತು 07 ಜಿಲ್ಲೆಗಳ ಕಾರ್ಯಕ್ರಮಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


