ರೈತರು ಕೃಷಿ ನಡೆಸಿ ಹೆಚ್ಚಿನ ಇಳುವರಿ ಪಡೆಯಿರಿ: ಡಿಸಿ ಪ್ರಶಾಂತ ಕುಮಾರ್ ಮಿಶ್ರಾ

Ravi Talawar
ರೈತರು ಕೃಷಿ ನಡೆಸಿ ಹೆಚ್ಚಿನ ಇಳುವರಿ ಪಡೆಯಿರಿ: ಡಿಸಿ ಪ್ರಶಾಂತ ಕುಮಾರ್ ಮಿಶ್ರಾ
WhatsApp Group Join Now
Telegram Group Join Now

 

ಬಳ್ಳಾರಿ ಜೂನ್ 14 : ರೈತರು ಮಣ್ಣಿನ ಫಲವತ್ತತೆಯ ಆಧಾರದ ಮೇಲೆ ಬೆಳೆ ಪದ್ಧತಿಯನ್ನು ಅನುಸರಿಸಿ ಹೆಚ್ಚಿನ ಇಳುವರಿ ಪಡೆಯಲು ಆಧುನಿಕ ಕೃಷಿಯನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಅವರು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಬಳ್ಳಾರಿ , ಜಿಲ್ಲಾಪಂಚಾಯತಿ , ಕೃಷಿ ಮತ್ತು ತೋಟಗಾರಿಕೆ ಇಲಾಖೆ , ಜಿಲ್ಲಾ ಕಾಟನ್ ಅಸೋಸಿಯೇ?ನ್ ??, ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟ ಸಂಘದ ಜಿಲ್ಲಾ ಘಟಕ , ಬಳ್ಳಾರಿ ಎಪಿಎಂಸಿ ವರ್ತಕರ ಸಂಘ , ಮತ್ತು ಹತ್ತಿ ಬೆಳೆಯುವ ರೈತರ ಸಮೂಹ ಇವರ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ಚೇಂಬರ್ ಆಫ್ ಕಾಮರ್ಸ್ ಉಚಿತ ಆಸ್ಪತ್ರೆಯ ಮುಂಭಾಗದಲ್ಲಿ ಶುಕ್ರವಾರ ನಡೆದ ‘ ರೈತರ ಮೇಳವನ್ನು ಅವರು ಉದ್ಘಾಟಿಸಿದರು.

 

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಸಕಾಲಿಕವಾಗಿ – ನಿರೀಕ್ಷೆಗಿಂತ ದೊಡ್ಡ ಪ್ರಮಾಣದಲ್ಲಿ – ದೂರದೃಷ್ಟಿಯ ರೈತರ ಮೇಳವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ . ಈ ವಿಚಾರವನ್ನು ಚಿಂತಿಸಿ , ಮೇಳವನ್ನು ಏರ್ಪಡಿಸಿ ಯಶಸ್ವಿಗೊಳಿಸಲು ಶ್ರಮಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು . ಈ ಮೇಳವು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ ಅವರು ಪ್ರಾಸ್ತಾವಿಕ ಭಾ?ಣ ಮಾಡಿದರು , ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು , ನಮ್ಮ ದೇಶದ ಬೆನ್ನೆಲುಬಾಗಿರುವ ರೈತರನ್ನು ಮತ್ತು ಕೃಷಿಯನ್ನು ಅಪಾರವಾಗಿ ಗೌರವಿಸುತ್ತದೆ . ರೈತರಿಲ್ಲದೇ – ಕೃಷಿ ಇಲ್ಲದೇ ಕೈಗಾರಿಕೆಗಳು ಮತ್ತು ಉದ್ಯಮಗಳಿಲ್ಲ ಎನ್ನುವುದನ್ನು ಸ್ಪ?ವಾಗಿ ಅರ್ಥ ಮಾಡಿಕೊಂಡಿದೆ . ಈ ಕಾರಣಕ್ಕಾಗಿ ನಮ್ಮ ಸಂಸ್ಥೆಯು ರೈತಣ್ಣ ಊಟ , ರೈತಣ್ಣ ಕ್ಲಿನಿಕ್ , ರೈತಣ್ಣ ಹಾಸಿಗೆ ಹಾಗೂ ರೈತರ – ಕೃಷಿಕರ ಪರವಾದ ಅನೇಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ . ರೈತರು ‘ ರೈತರ ಮೇಳ ’ ದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ಮಾಡಿದರು.

ಮುಖ್ಯ ಅತಿಥಿಗಳಾಗಿದ್ದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ . ಎಂ . ಸೋಮಸುಂದರ್ , ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಸಂತೋ? ಸಪ್ಪಂಡಿ ಅವರು ರೈತರು ಪ್ರಸ್ತುತವಾಗಿ ಪ್ರಮಾಣೀಕೃತ ಬೀಜಗಳನ್ನು ಆಯ್ಕೆ ಮಾಡಿದ್ದಾರೆ ಮಾಡಿ , ಮಾಡಿಸಿಕೊಳ್ಳುವ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಇಳುವರಿಯನ್ನು ಪಡೆಯಬೇಕು ಎಂದು ಹೇಳಿ , ಸರ್ಕಾರದ ವಿವಿಧ ಯೋಜನೆಗಳನ್ನು ವಿವರಿಸಿದರು .ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಸಿ . ಶ್ರೀನಿವಾಸರಾವ್ ಅವರು , ರೈತರು ಈ ಮೇಳದಲ್ಲಿ ಜ್ಞಾನವನ್ನು ಪಡೆಯುವ ಬೀಜ ಬಿತ್ತನೆ , ಬೆಳೆ ನಿರ್ವಹಣೆ ಮತ್ತು ಕಟಾವಿನಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಸಂಸ್ಥೆಯ ರೈತಪರ ಕಾಳಜಿಗೆ ಪ್ರೋತ್ಸಾಹ ನೀಡಿದರು .ಸಂಪನ್ಮೂಲ ವ್ಯಕ್ತಿಗಳಾಗಿದ್ದ ರಾಯಚೂರು ಕೆವಿಕೆಯ ಡಾ . ಭೀಮಣ್ಣ ಮತ್ತು ಹೈದರಾಬಾದ್‌ನ ಡಾ . ವೆಂಕಟೇಶ್ ಕುಲಕರ್ಣಿ ಅವರು , ಮಣ್ಣಿನ ಫಲವತ್ತತೆ , ಬೀಜಗಳ ಆಯ್ಕೆ , ಸೂಕ್ತವಾಗಿ ಬೀಜ ಬಿತ್ತನೆ , ನೀರುಣಿಸ , ಆಧುನಿಕ ತಂತ್ರಜ್ಞಾನಗಳು ಬಳಕೆ , ಯಂತ್ರಗಳ ಬಳಕೆ , ಸಂಪ್ರದಾಯಿಕ ಪದ್ಧತಿಯ ಕೃಷಿ ಮುಂತಾದವುಗಳ ಕುರಿತು ಸಮಗ್ರವಾಗಿ ಉಪನ್ಯಾಸ ನೀಡಿ , ರೈತರಿಂದ ಅಪಾರ ಮೆಚ್ಚುಗೆಯನ್ನು ಪಡೆದರು .
ಬಳ್ಳಾರಿ ಎಪಿಎಂಸಿ ಅಧ್ಯಕ್ಷ ಕಟ್ಟೆಮನಿ ನಾಗೇಂದ್ರ , ಕಾರ್ಯದರ್ಶಿ ಶ್ರೀಹರಿ , ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇ?ನ್ ??ಅಧ್ಯಕ್ಷ ದಂಡಿನ ತಿಪ್ಪೇಸ್ವಾಮಿ , ಬಿಡಿಸಿಸಿ & ಐನ ಹಿರಿಯ ಉಪಾಧ್ಯಕ್ಷರಾದ ಅವ್ವಾರು ಮಂಜುನಾಥ್ , ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎಚ್ . ತಿಮ್ಮನಗೌಡ , ಬಿಡಿಸಿ ನೇಮಕಾತಿ ನಿಕಟಪೂರ್ವ ಅಧ್ಯಕ್ಷರಾದ ಬಿ . ಮಹಾರುದ್ರಗೌಡರು , ಹಗರಿ ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ಡಾ . ರವಿಶಂಕರ್ , ಕೃಷಿ ಮಾರಾಟಗಾರರ ನೌಕರರ ಸಂಘದ ಅಧ್ಯಕ್ಷರ ಚೌವ್ಹಾಣ್, ಮಾಜಿ ಬುಡಾ ಅಧ್ಯಕ್ಷ ಪಾಲಣ್ಣ, ಎಪಿಎಂಸಿ ದಲ್ಲಾಲಿ ವರ್ತಕರ ಸಂಘದ ಅಧ್ಯಕ್ಷ ಅಂದ್ರಾಳ್ ಚಿದಾನಂದಪ್ಪ ಅವರು ವೇದಿಕೆಯಲ್ಲಿದ್ದರು. ಡಾ . ಶ್ರೀನಿವಾಸರೆಡ್ಡಿ ಅವರು ಕಾರ್ಯಕ್ರಮ ನಿರೂಪಿಸಿದರು . ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ . ಸಿ . ಸುರೇಶಬಾಬು ಅವರು ಉಡುಗೊರೆ . ರಾಯಚೂರಿನ ಪ್ರಗತಿಪರ ರೈತ ಸಿದ್ದನಗೌಡ ಅವರು ರೈತರ ಪರವಾಗಿ . ಬಳ್ಳಾರಿ , ಚಿತ್ರದುರ್ಗ , ವಿಜಯನಗರ ಮತ್ತು ಆಂಧ್ರಪ್ರದೇಶದ ಸಾವಿರಾರು ರೈತರು ಈ ಮೇಳದಲ್ಲಿ ಕಾಣಿಸಿಕೊಂಡಿದ್ದರು.

ಇಬ್ರಾಹಿಂಪುರದ ‘ ಚಿಗುರು ’ ತಂಡ , ವಿ ಡ್ರೀಮ್ಸ್ ಕ್ರೀವ್ ತಂಡ , ಇಂದ್ರಾಣಿ ಕಲಾ ಟ್ರಸ್ಟ್ , ಗಾಯಕಿ ಪಕೃತ್ರಿರೆಡ್ಡಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು . ರೈತರಿಗೆ ಮತ್ತು ಕೃಷಿಗೆ ಪೂರಕವಾದ ವಿವಿಧ ಯೋಜನೆಗಳು ಮತ್ತು ಉತ್ಪನ್ನಗಳ ಕುರಿತು ಮಾಹಿತಿ ನೀಡಲಿಕ್ಕಾಗಿಯೇ ೪೦ ಕ್ಕೂ ಹೆಚ್ಚಿನ ಮಳಿಗೆಗಳು? ಅಳವಡಿಸಿ , ಮಾಹಿತಿ ನೀಡಲಾಯಿತು.

 

WhatsApp Group Join Now
Telegram Group Join Now
Share This Article