ರನ್ನ ಬೆಳಗಲಿ: ಆ.೧೬ ಸರ್ವ ಕಲಾವಿದರ ಒಕ್ಕೂಟದಿಂದ ಶನಿ ವಾರ ದಂದು ಜಿಲ್ಲಾಧಿಕಾರಿಗಳ ಕಚೇರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರದ ಸಲ್ಲಿಕೆ.
ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮ ಮುಗಳಖೋಡ ಗ್ರಾಮದ ಶರಣಬಸವಶಾಸ್ತ್ರಿಗಳು ಜನಸಾಮಾನ್ಯರಿಗೆ ಇರುವ ಸೌಲಭ್ಯ ಕಲಾವಿದರಿಗೆ ಇಲ್ಲ ಕನಾ೯ಟಕ ಸಕಾ೯ರವು ಬಡವರಿಗೆ. ದೀನರಿಗೆ ದಲಿತರಿಗೆ.ಮಹಿಳೆಯರಿಗೆ. ವಯೋವೃದ್ಧರಿಗೆ ಸೇರಿದಂತೆ ಅನೇಕ ಅಸಹಾಯಕರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಆದರೆ ಅಂತಹ ವಿಶೇ? ಯೋಜನೆಯನ್ನು ಸರ್ಕಾರ ಕಲಾವಿದರಿಗೆ ನೀಡಿಲ್ಲ. ಆದ್ದರಿಂದ ಕಲೆಯಿಂದ ಉಪಜೀವನ ಮಾಡುತ್ತಿರುವ ಕಲಾವಿದರಿಗಾಗಿ ಕುಟುಂಬ ನಿರ್ವಹಣೆ ಮಾಡಲು ವಿಶೇ? ಯೋಜನೆಯನ್ನು ರೂಪಿಸಬೇಕೆಂದು ಎಂದು ತಿಳಿಸಿದರು.
ಬಾಗಲಕೋಟೆ ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಶ್ರೀಶೈಲ ಕಂಕಣವಾಡಿ ಕಲಾವಿದರ ಮನವಿಯನ್ನು ಸ್ವೀಕರಿಸಿ ತುರ್ತಾಗಿ ತಮ್ಮ ಮನವಿ ಪತ್ರವನ್ನು ಮಾನ್ಯ ಮುಖ್ಯಮಂತ್ರಿಗಳ ಕಛೇರಿಗೆ ಕಳಿಸುತ್ತೇನೆ ಎಂದು ತಿಳಿಸಿದರು.
ಒಕ್ಕೂಟದ ಕಾರ್ಯದರ್ಶಿಗಳಾದ ಪವಿತ್ರ ಜಕ್ಕಪ್ಪನವರ ರಾಜ್ಯದ ಎಲ್ಲ ಜನಪದರಿಗೆ.ಸಂಗೀತಗಾರಿಗೆ ವಾದ್ಯ ಕಲಾವಿದರಿಗೆ ಹಾಗೂ ಬಯಲು ರಂಗಭೂಮಿ ಮತ್ತು ವೃತ್ತಿ ರಂಗಭೂಮಿಯ ಕಲಾವಿದರಿಗೆ ಹಾಗೂ ಅವರ ಕುಟುಂಬಕ್ಕೆ ನೆರವಾಗುವ ಐದು ಬೇಡಿಕೆಯನ್ನು ಪೂರೈಸಲು ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷರಾದ ಶಂಕರಪ್ಪ ತಂಬಾಕದ.ಗೌರವಾಧ್ಯಕ್ಷ ಚಿನ್ನಪ್ಪ ಗೌಡ್ರು ಜಲಗೇರಿ. ಯಲ್ಲಪ್ಪ ಪೂಜಾರ್.ಈಶ್ವರ ಹೊರಟ್ಟಿ. ಶಂಕರ ಲಮಾಣಿ
ಬಾಗಲಕೋಟೆಯ ಜನಪದ ಕಲೆ ಕಲಾವಿದರು,
ಸೋಬಾನೆ ಪದಗಳ ಕಲಾವಿದರು, ಸೇರಿದಂತೆ,ಡೊಳ್ಳಿನಪದ, ಭಜನೆ,ಕರಡಿವಾದನ,ಸಂಬಾಳವಾದನ,ಖಣಿ ವಾದನ, ಹಲಗೆವಾದನ,ತಾಸೆವಾದನ,ಡೊಳ್ಳಿನ ವಾಲಗ,ಡೊಳ್ಳಿನ ಕೈ ಪೆಟ್ಟು ,ಪಾರಿಜಾತ, ಬಯಲಾಟ,ನಾಟಕ,ಸಂಗೀತ ಸೇರಿದಂತೆ ವಿವಿಧ ಕ್ಷೇತ್ರದ ಕಲಾವಿದರು ಉಪಸ್ಥಿತರಿದ್ದರು.