ಸವದತ್ತಿ : ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣದ ಮೋದಿ ಸರ್ಕಾರದ ೧೧ ನೇ ವ?ಚರಣೆ ಸಭೆಯಲ್ಲಿ ಭಾಗವಹಿಸಿ ವಿಕಸಿತ ಭಾರತ ಸಂಕಲ್ಪ ಸಭೆಯನ್ನು ಉದ್ದೇಶಿಸಿ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಕುರಿತು
ಕೇಂದ್ರ ಸರ್ಕಾರವು ಜಾರಿಗೆ
ತಂದಿರುವ ಜನಪ್ರಿಯ ಯೋಜನೆಗಳನ್ನು ದೇಶದ ಎಲ್ಲಾ ಮನೆಗಳಿಗೆ ತಲುಪಿಸುವ ಉದ್ದೇಶವನ್ನು ವಿಕಸಿತ ಭಾರತ ಸಂಕಲ್ಪ ಹೊಂದಿದೆ ಎಂದು ಬಿಜೆಪಿ ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ ಹೇಳಿದರು.
ನಗರದ ಮಾಮನಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದೆ. ದೇಶದ ಎಲ್ಲಾ ನಾಗರಿಕರಿಗೂ ಹಲವು ಕಾರ್ಯಕ್ರಮಗಳನ್ನು ನೀಡಬೇಕೆನನ್ನುವುದು ವಿಕಸಿತ ಭಾರತ ಸಂಕಲ್ಪದ ಉದೇಶ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಸಂದೀಪ ದೇಶಪಾಂಡೆ, ಜಿಲ್ಲಾ ವಕ್ತಾರು ಶಿವಾನಂದ ಹನಮಸಾಗರ, ಜಿಲ್ಲಾ ಉಪಾಧ್ಯಕ್ಷರಾದ ರತ್ನಾಕ್ಕ ಮಾಮನಿ, ಬಸನಗೌಡ, ಕೊಳದೂರ, ಪ್ರಮುಖರಾದ ಬಿ. ವ್ಹಿ. ಮಲ್ಲಗೌಡ್ರ, ಜಗದೀಶ ಶಿಂತ್ರಿ, ಬಸಯ್ಯಜ್ಜ ಹಿರೇಮಠ, ಬಸವರಾಜ ಕಾರದಗಿ, ಗುರುನಾಥ ಗಂಗಲ, ಪುಂಡಲೀಕ ಮೇಟಿ, ಮಹಾಂತೇಶ ಗೋಡಿ, ಈರಣ್ಣ ಚಂದರಗಿ, ನಯನಾ ಭಸ್ಮೆ ಹಾಗೂ ಬಿಜೆಪಿ ಪಕ್ಷದ ಪದಾಧಿಕಾರಗಳು, ಮುಖಂಡರು, ಹಿರಿಯರು, ಕಾರ್ಯಕರ್ತರು ಉಪಸ್ಥಿತರಿದ್ದರು.