ಬೆಳಗಾವಿ: ೧೩ ನೆಯ ದಿನದ ಕೃಷಿ ಸಂಕಲ್ಪ ಅಭಿಯಾನದ ಅಂಗವಾಗಿ ದಿನಾಂಕ ೧೦.೦೬.೨೦೨೫ ರಂದು ಖಾನಾಪುರ ತಾಲೂಕಿನ ಚಿಕ್ಕಅಂಗರೊಳ್ಳಿ, ಹಿಂಡಲಗಿ ಬೀಡಿ, ಕೊಡಚವಾಡ, ಅವರೊಳ್ಳಿ, ಚಾಪಗಾಂವ ಗ್ರಾಮಗಳಲ್ಲಿನ ರೈತರಿಗೆ ಮುಂಗಾರು ಬೇಸಾಯ ಕ್ರಮಗಳು, ರಾಸುಗಳಿಗೆ ಪೋ?ಣೆ ಹಾಗೂ ಕೇಂದ್ರ ಸರಕಾರದ ಕೃಷಿ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ರೈತರಿಗೆ ಐಸಿಎಆರ್-ಕೆಎಲಇ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಶ್ರೀ ಎಸ್. ಎಮ್. ವಾರದ ತಿಳಿಸಿದರು. ಖಾನಾಪುರ ತಾಲೂಕಿನ ಕೃಷಿ ಭೂಮಿಯು ಅರೆಮಲೆನಾಡು, ಮಲೆನಾಡು ಪ್ರದೇಶದ ವಲಯವನ್ನು ಹೊಂದಿದ್ದು ಆಮ್ಲೀಯ ಮಣ್ಣು ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಹಾಗೂ ಈ ಮಣ್ಣಿನಲ್ಲಿ ಪೊಟ್ಯಾ? ಪ್ರಮಾಣವು ಕಡಿಮೆ ಇದ್ದು ಇದಕ್ಕೆ ಠಿಊ ಮಟ್ಟವನ್ನು ಹೆಚ್ಚಿಸುವ ಮೂಲಕ ಆಮ್ಲೀಯ ಮಣ್ಣನ್ನು ಸುಧಾರಿಸಬೇಕು. ಇದನ್ನು ಮಾಡಲು ರೈತರು ಮಣ್ಣಿಗೆ ಡೊಲೊಮೈಟ್ ಸುಣ್ಣದ ಅಂಶವನ್ನು ಹೊಂದಿದ ಗೊಬ್ಬರಗಳನ್ನು ಉಪಯೋಗಿಸಬೇಕು. ಆದ್ದರಿಂದ ರೈತರು ತಮ್ಮ ಮಣ್ಣನ್ನು ಪರೀಕ್ಷಿಸಿ ಮಣ್ಣಿನ ಸುಧಾರಣೆಯನ್ನು ಕೈಗೊಳ್ಳುವಂತೆ ಸಲಹೆ ನೀಡಿದರು. ಪೊಟ್ಯಾಸಿಯಮ್ ಕೊರತೆಯನ್ನು ಸರಿಪಡಿಸಲು ಮತ್ತು ಸಸ್ಯಗಳ ಬೆಳವಣಿಗೆಯನ್ನು ಬೆಂಬಲಿಸಲು ಸಾಕ? ಪ್ರಮಾಣದ ಪೊಟ್ಯಾಸಿಯಮ್ ಗೊಬ್ಬರಗಳನ್ನು ಒದಗಿಸಲು ಸಹ ಸಲಹೆ ನೀಡಲಾಯಿತು. ಭತ್ತದಲ್ಲಿ ಜಾಫಿ ಬೀಜಗಳನ್ನು ನಿಲ್ಲಿಸಲು, ಮಣ್ಣಿಗೆ ಬೊರನ್ ಅಂಶದ ಗೊಬ್ಬರಗಳನ್ನು ಹಾಗೂ ಎಲೆಗಳ ಸಿಂಪಡಣೆಯನ್ನು ತೆಗೆದುಕೊಳ್ಳಲು ಸಲಹೆ ನೀಡಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಮತ್ತೊರ್ವ ವಿಜ್ಞಾನಿಗಳಾದ ಶ್ರೀ ಪ್ರವೀಣ ಯಡಹಳ್ಳಿ ಅವರು ಎಎಮ್ಸಿ ಗೊಬ್ಬರವನ್ನು ಬಳಸಿಕೊಂಡು ಮೆಣಸಿನಕಾಯಿ ಬೆಳೆಯ ಉತ್ಪಾದನೆಯನ್ನು ಹೆಚ್ಚಿಸಬೇಕೆಂದು ತಿಳಿಸಿಕೊಟ್ಟರು. ಡಾ. ಎಸ್. ಎಸ್. ಹಿರೇಮಠ, ವಿಜ್ಞಾನಿ ಸಸ್ಯ ಸಂರಕ್ಷಣೆ ಭತ್ತದ ಬೆಳೆಯಲ್ಲಿ ಬರುವ ಕೀಟ ಮತ್ತು ರೋಗಗಳ ಬಗ್ಗೆ ಮಾಹಿತಿ ನೀಡಿದರು. ಜಿ. ಬಿ. ವಿಶ್ವನಾಥ, ವಿಜ್ಞಾನಿ ಬೇಸಾಯ ಶಾಸ್ತ್ರ ಭತ್ತ ಬೆಳೆಯ ಸಮಗ್ರ ಬೇಸಾಯ ಕ್ರಮಗಳ ಬಗ್ಗೆ ರೈತರೊಂದಿಗೆ ಚಚ್ಸಿದರು. ಭಾರತೀಯ ಕೃಷಿ ಅನುಸಂಧಾನ ಪರಿ?ತ್, ಬೆಂಗಳೂರು ವಿಜ್ಞಾನಿಗಳಾದ ಡಾ. ಆನಂದಕುಮಾರ ಮತ್ತು ಡಾ. ಅತುಲ್ ಕೊಲ್ಟೆ ಇವರು ರೈತರ ಸಮಸ್ಯೆಗಳನ್ನು ದಾಖಲಿಸಿಕೊಂಡರು. ಒಟ್ಟು ೧೨೦೦ ಕ್ಕೂ ಅಧಿಕ ರೈತರು ಭಾಗವಹಿಸಿದ್ದರು.
ಡಾ. ಮಂಜುನಾಥ ಚೌರಡ್ಡಿ
ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು