ಮೂಡಲಗಿ: ಖಾನಟ್ಟಿ ಗ್ರಾಮದ ಗುರುಭವನವನ್ನು ನಿರ್ಮಾಣ ಮಾಡುವ ಮೂಲಕ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಗುರುವಿನ ಸಂಸ್ಕಾರ ದೊರೆಯುವಂತಾಗಲಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಖಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ೧೫ ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಗುರು ಭವನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಸದರ ನಿಧಿಯು ಗ್ರಾಮೀಣ ಪ್ರದೇಶ ಜನರ ಅಗತ್ಯಗಳನ್ನು ತಕ್ಷಣ ಪೂರೈಸುವ ಒಂದು ಅಕ್ಷಯ ಪಾತ್ರೆಯಾಗಿದ್ದು ಈ ನಿಧಿ ಅಡಿಯಲ್ಲಿ ಖಾನಟ್ಟಿ ಗ್ರಾಮದಲ್ಲಿ ಗುರು ಭವನವನ್ನು ಅತ್ಯುತ್ತಮವಾಗಿ ನಿರ್ಮಿಸಿ, ಗ್ರಾಮಕ್ಕೆ ಒಂದು ಹೊಸ ಸೊಬಗನ್ನು ನೀಡಿದಂತಾಗಿದೆ. ಇಂತಹ ಮಹತ್ಕಾರ್ಯಕ್ಕೆ ಗ್ರಾಮದ ಜನರು ಕೈಜೋಡಿಸಿ ಶ್ರದ್ದಾಭಕ್ತಿಯಿಂದ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದಾಗ ಮಾತ್ರ ಅಭಿವೃದ್ಧಿ ಆಗಲು ಸಾಧ್ಯ ಎಂದರು.
ಘಟಪ್ರಭಾದ ಪೂಜ್ಯ ಶ್ರೀ ಭೀಮಾನಂದ ಸ್ವಾಮೀಜಿಗಳು ಹಾಗೂ ಲಕ್ಷ್ಮೇಶ್ವರದ ಗೀತಾ ಅಮ್ಮನವರು ದಿವ್ಯ ಸಾನಿಧ್ಯ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷೆ ಬಸಲಿಂಗವ್ವ ಮುಗಳಖೋಡ, ಉಪಾಧ್ಯಕ್ಷ ಗೋಪಾಲ್ ನಿಂಗನೂರು, ಪಿ.ಕೆ.ಪಿ.ಎಸ್ ಅಧ್ಯಕ್ಷ ಮಹಾಂತೇಶ ರಡೆರಟ್ಟಿ, ಮದನ ದಾನನ್ನವರ, ಚೇತನ ರಡೆರಟ್ಟಿ, ಮೇಘಾ ತುಪ್ಪದ, ವಂದನಾ ಸೋನಾರ್, ಮಾಂತಯ್ಯ ಪೂಜಾರಿ, ಶಿವಬಸು ತುಪ್ಪದ, ಶಿವನಪ್ಪ ಗುದಗನ್ನವರ, ರಾಮಣ್ಣ ಕುಂದರಗಿ, ಅಗ್ರಾಣಿ ದೊಣಿ, ರವಿ ತುಪ್ಪದ, ಶಿವಪ್ಪ ಜೋಡಟ್ಟಿ, ಸತ್ಯಪ್ಪ ರಡ್ಡೆರಟ್ಟಿ, ಅಜ್ಜಪ್ಪ ಲಂಗೋಟಿ, ಜಗದೀಶ ಬಳಿಗಾರ, ರಮೇಶ ಮೇತ್ರಿ ಪಂಚಾಯತ ಅಭಿವೃದ್ದಿ ಅಧಿಕಾರಿ ಅನುರಾಧಾ ಭಜಂತ್ರಿ ಸೇರಿದಂತೆ ಸ್ಥಳೀಯ ಮುಖಂಡರು, ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.