ಪರಿಸರ ಸಂರಕ್ಷಣೆ ಜಾಗೃತಿ ಅಗತ್ಯ: ಡಾ.ಟಿ.ಗಂಗಾಧರ ಗೌಡ

Ravi Talawar
ಪರಿಸರ ಸಂರಕ್ಷಣೆ ಜಾಗೃತಿ ಅಗತ್ಯ: ಡಾ.ಟಿ.ಗಂಗಾಧರ ಗೌಡ
WhatsApp Group Join Now
Telegram Group Join Now

ಬಳ್ಳಾರಿ,ಜೂ.12: ಪ್ರಸ್ತುತದಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಬದ್ಧ ಪ್ರಯತ್ನವಾಗಬೇಕಿದೆ ಎಂದು ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಟಿ.ಗಂಗಾಧರ ಗೌಡ ಹೇಳಿದರು.
ಕೆಎಸ್‌ಸಿಎಎಸ್‌ಐ ಬಳ್ಳಾರಿ ಶಾಖೆ ವತಿಯಿಂದ ರಾಷ್ಟಿçÃಯ ಶಸ್ತçಚಿಕಿತ್ಸಕ ವಾರಾಚರಣೆ ಅಂಗವಾಗಿ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನೀರೂಣಿಸಿ ಬಳಿಕ ಅವರು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಸುತ್ತ-ಮುತ್ತಲಿನ ಪರಿಸರ ರಕ್ಷಣೆ ಮಾಡುವ ಕಾಳಜಿ ವಹಿಸುವ ಮೂಲಕ ಪರಿಸರ ಹಾನಿ ಮಾಡದಂತೆ ನೋಡಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ಅಧೀಕ್ಷಕರಾದ ಡಾ.ಇಂಧುಮತಿ, ಶಸ್ತçಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಕಾಸಾ ಸೋಮಶೇಖರ್, ಎಎಸ್‌ಐ ರಾಷ್ಟಿçÃಯ ಕಾರ್ಯದರ್ಶಿ ಡಾ.ದಿವಾಕರ ರೆಡ್ಡಿ, ಖಜಾಂಚಿ ಡಾ.ವೈ.ಗುರುಬಸವನ ಗೌಡ, ಶಾಖಾ ಅಧ್ಯಕ್ಷ ಡಾ.ಶೇಖಪ್ಪ ಮಾಳಗಿಮನಿ, ನಗರದ ಹಿರಿಯ ವೈದ್ಯರುಗಳಾದ ಡಾ.ಸೋಮೇಶ್ವರ ಗಡ್ಡಿ, ಡಾ.ಅರುಣ್ ಎಸ್.ಕೆ., ಡಾ.ಅರುಣಾ ಕಾಮಿನೇನಿ, ಡಾ.ಅರವಿಂದ್ ಪಾಟೀಲ್ ಸೇರಿದಂತೆ ಜಿಲ್ಲಾ ಶಾಖೆಯ ಸದಸ್ಯರು, ಕೇಂದ್ರದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article