ರಾಯಲ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಿಂದ ಉಚಿತವಾಗಿ ಸಸಿ ನೀಡಿ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ

Ravi Talawar
ರಾಯಲ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಿಂದ ಉಚಿತವಾಗಿ ಸಸಿ ನೀಡಿ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ
WhatsApp Group Join Now
Telegram Group Join Now

ಅಥಣಿ: ರಾಯಲ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಿAದ ಸಾರ್ವಜನಿಕರಿಗೆ ಉಚಿತ ಶಶಿ ನೀಡುವುದರ ಮೂಲಕ ಪರಿಸರ ಜಾಗೃತಿ ಮೂಡಿಸಲಾಗಿದೆ ಎಂದು ರಾಯಲ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಫೀಕ ಡಾಂಗೆ ಹೇಳಿದರು
ಪಟ್ಟಣದ ಶಿಕ್ಷಣ ಸಂಸ್ಥೆಯಾದ ರಾಯಲ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆ ಪ್ರಯುಕ್ತವಾಗಿ ವಿದ್ಯಾರ್ಥಿಗಳಿಂದ ಬಿಜಿ ನಾಟಕದ ಜೊತೆಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷ ರಫೀಕ ಡಾಂಗೆ ಅವರು ಕಾಡು ಉಳಿಸಿ ನಾಡು ಬೆಳೆಸಿ, ನಮ್ಮ ಉಸಿರಿಗಾಗಿ ಪರಿಸರ, ಪ್ರತಿಯೊಬ್ಬರು ಒಂದೊAದು ಗಿಡವನ್ನು ನೆಡುವುದರ ಮೂಲಕ ಪರಿಸರ ರಕ್ಷಣೆ ಮಾಡೋಣ, ಅವಶ್ಯಕತೆ ಇದ್ದಷ್ಟು ನೀರನ್ನು ಬಳಕೆ ಮಾಡುವುದು ಹಾಗೂ ಪ್ಲಾಸ್ಟಿಕ್ ಒಂದು ಹಾನಿಕಾರಕ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಿಕೆಯನ್ನು ನಿಷೇಧಿಸಬೇಕು ಎಂದು ಕರೆ ನೀಡಿದರು.
ವಲಯ ಅರಣ್ಯ ಇಲಾಖೆ ಅಧಿಕಾರಿಯಾದ ಪ್ರಶಾಂತ ಗೌರಾನಿ ಮಾತನಾಡಿ, ಒಂದು ಮರ 10 ಜೀವಗಳ ಸಮ, ಒಂದು ಮರ ಕಡಿದರೆ ಹತ್ತು ಜೀವಗಳ ಬಲಿ ಪಡೆದಂತಾಗುತ್ತದೆ. ಗಿಡ ಮರಗಳನ್ನು ಬೆಳೆಸಿ ಉಳಿಸುವುದರಿಂದ ಉಷ್ಣತೆಯ ಪ್ರಮಾಣ ಕಡಿಮೆಯಾಗುವುದು, ಮತ್ತು ಮಳೆ ಪ್ರಮಾಣ ಹೆಚ್ಚಾಗುವುದು,ಮತ್ತು ಮನುಷ್ಯನ ಆರೋಗ್ಯ ಸುಧಾರಿಸಬಹುದು, ಸ್ವಚ್ಛ ಪರಿಸರ ಸುಂದರ ಜೀವನ, ಜೀವನಕ್ಕೆ ಇನ್ನೊಂದು ಪದ ನೀರು, ಕಾಡು ಉಳಿಸಿ ನಾಡು ಬೆಳೆಸಿ,ಅರಣ್ಯನಾಶ ನಮ್ಮೆಲ್ಲರ ವಿನಾಶ,ಹಸಿರೇ ಉಸಿರು, ಇವುಗಳನ್ನು ಪಾಲಿಸುವುದರ ಜೊತೆಗೆ ಪ್ರತಿಯೊಬ್ಬರು ಪರಿಸರವನ್ನು ರಕ್ಷಿಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಿದರು
ಅಗ್ರಾಣಿ ನದಿ ಪುನರ್ ಚೇತನ ಕಾರ್ಯಪಡೆಯ ಸಂಚಾಲಕರಾದ ಅಣ್ಣಸಾಹೇಬ ಅಡಹಳ್ಳಿ ಮಾತನಾಡಿದರು
ಈ ವೇಳೆ ಮೊಹಮ್ಮದ ಜಹಾಂಗೀರ್, ಎ ಎಚ್ ಮುಲ್ಲಾ, ರಿಹಾನ್ ಡಾಂಗೆ, ಸುರೇಶ ಬುರ್ಲಿ, ಶ್ರೀಮತಿ ಆಸಿಯಾ ಪಟೇಲ್, ಪರಶುರಾಮ ನಾಟೇಕರ, ಶೀಲ್ಪಾ ಯಲ್ಲಟ್ಟಿ, ಅಜೀತ ದೇವಕರ, ಸಂಜಯ ಮಮದಾಪುರ, ಉಮೇಶ ಬಂಜತ್ರಿ, ಅಂಜನಾ ನಾದ್ರೇ, ಅಮೃತಾ ಕುಲಕರ್ಣಿ, ಸುಜಾತಾ ಕುಲಗುಡೆ, ಅಧಿüಕಾರಿಗಳು ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿಗಳು, ಪಾಲಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article