ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ : ಕಲಾವಿದೆ ಡಾ.ಪಂಕಜಾ 

Ravi Talawar
ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ : ಕಲಾವಿದೆ ಡಾ.ಪಂಕಜಾ 
WhatsApp Group Join Now
Telegram Group Join Now
ಅಥಣಿ: ರಾಜ್ಯದಲ್ಲಿ ರಂಗಭೂಮಿ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸಲು ಆಶ್ರಮ ಕಟ್ಟುವ ಉದ್ದೇಶದಿಂದ ರಾಜ್ಯಾದ್ಯಂತ ನಾಟಕ ಪ್ರದರ್ಶನ ಮಾಡುತ್ತಿದ್ದೇವೆ. ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಹೊಸ ತಂತ್ರಜ್ಞಾನಗಳಿಂದ  ದಾರಿ ತಪ್ಪುತ್ತಿರುವ  ಇಂದಿನ ಯುವ ಪೀಳಿಗೆಗೆ ಸರಿಯಾದ ಮಾರ್ಗ ತೋರಿಸುವುದು  ಅಗತ್ಯವಾಗಿದೆ ಎಂದು  ಖ್ಯಾತ ರಂಗಭೂಮಿ ಕಲಾವಿದೆ ಡಾ. ಪಂಕಜ  ಹೇಳಿದರು.
  ಅವರು ಅಥಣಿ ಪಟ್ಟಣದಲ್ಲಿ  ಮಾತ್ರಶ್ರೀ ಕಲಾಸಂಘ, ಸಾಯಿ ಸೇವಾ ಕಲ್ಚರಲ್  ಟ್ರಸ್ಟ್ ವತಿಯಿಂದ ಕಲಾವಿದರ, ಅನಾಥ ಮಕ್ಕಳ ಸಂರಕ್ಷಣಾ ಸಹಾಯಾರ್ಥ  ಅಥಣಿ ಪಟ್ಟಣದಲ್ಲಿ ಶನಿವಾರ ದಿ. 14 ರಂದು  ಪ್ರದರ್ಶಿಸಲಿರುವ  “ಗೌಡರ ಗದ್ಲ ” ಹಾಸ್ಯಭರಿತ ನಾಟಕದ  ಬಿತ್ತಿ ಪತ್ರ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
 ಭಾರತೀಯ ಸಂಸ್ಕೃತಿಯ ಮೂಲ ಕಲೆ ರಂಗಭೂಮಿ ನಾಟಕ ಪ್ರದರ್ಶನಗಳು  ಇತ್ತೀಚಿಗೆ ಅಶ್ಲೀಲ, ಡಬಲ್ ಮೀನಿಂಗ್ ಸಂಭಾಷಣೆಗಳು, ನಂಗಾನಾಚ ಪ್ರದರ್ಶನ  ಇಂದಿನ ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿವೆ. ರಂಗಭೂಮಿ ಕಲೆಯ ಮೂಲಕ ಸಮಾಜವನ್ನು  ತಿದ್ದುವ ಕೆಲಸ ಕಲಾವಿದರಿಂದ ಆಗಬೇಕಾಗಿದೆ. ತಂತ್ರಜ್ಞಾನ ಬೆಳೆದಂತೆ  ಕಲಾವಿದರಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ. ಉತ್ತರ ಕರ್ನಾಟಕದ ಈ ಭಾಗದಲ್ಲಿ  ಸಾಕಷ್ಟು ಕಲಾವಿದರಿದ್ದು,  ಪ್ರೋತ್ಸಾಹದ ಕೊರತೆಯಿಂದ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಸಮಾಜವು ಕಲಾವಿದರ ಬದುಕಿಗೆ ಶಕ್ತಿಯನ್ನು ತುಂಬಿದಲ್ಲಿ ನಮ್ಮಂತ ಕಲಾವಿದರು ರಂಗಭೂಮಿಯನ್ನು ಉತ್ತುಂಗಕ್ಕೆ ಒಯ್ಯಲು ಸಂಪೂರ್ಣ ಶ್ರಮವಹಿಸುತ್ತಾರೆ.  ಉತ್ತರ ಕರ್ನಾಟಕದಲ್ಲಿ ಕಲಾವಿದರ ಬಗ್ಗೆ ಅತ್ಯಂತ ಗೌರವ ಅಭಿಮಾನವಿದ್ದು, ಯಾವುದೇ ಸ್ಥಳಗಳಲ್ಲಿ ಸಹಾಯಾರ್ಥವಾಗಿ ಪ್ರದರ್ಶನಗಳನ್ನು ಏರ್ಪಡಿಸಿದಲ್ಲಿ ಕಲಾವಿದರಿಗೆ  ಕಲಾ ಅಭಿಮಾನಿಗಳು, ಮಠಾಧೀಶರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಯ ಸದಸ್ಯರು  ಬೆನ್ನೆಲುಬಾಗಿ ನಿಂತು ಸಹಕಾರ ತೋರುತ್ತಿದ್ದಾರೆ ಎಂದು ಹೇಳಿದರು.
#######
 ಅಥಣಿಯಲ್ಲಿ ” ಗೌಡರ ಗದ್ಲ “
ಅಥಣಿಯ  ಸುಕ್ಷೇತ್ರ ಗಚ್ಚಿನಮಠದ ಸಭಾಂಗಣದಲ್ಲಿ  ಶನಿವಾರ ದಿ. 14 ರಂದು ಮಧ್ಯಾಹ್ನ 3:30ಕ್ಕೆ ಮತ್ತು ಸಾಯಂಕಾಲ 6 15ಕ್ಕೆ  ಪ್ರದರ್ಶನಗೊಳ್ಳಲಿರುವ  ಗೌಡರ ಗದ್ಲ ಎಂಬ ನಾಟಕದಲ್ಲಿ ನಾನು ಸಿನಿಮಾ ಮತ್ತು ರಂಗಭೂಮಿಯ ಮಹಿಳಾ ಕಲಾವಿದೆಯಾಗಿ   ಗೌಡನ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಅಥಣಿ  ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಕಲಾವಿದರು, ಕಲಾಭಿಮಾನಿಗಳು ಆಗಮಿಸಿ ಈ ನಾಟಕವನ್ನು ನೋಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕು. ರಂಗಭೂಮಿ ಕಲೆಯನ್ನ ಉಳಿಸಿ ಬೆಳೆಸಬೇಕೆಂದು  ಕಲಾವಿದೆ ಪಂಕಜಾ  ವಿನಂತಿಸಿದ್ದಾರೆ.
WhatsApp Group Join Now
Telegram Group Join Now
Share This Article