ವಿದ್ಯುತ್ ವ್ಯತ್ಯಯ ದಿನ ಕಾರ್ಯನಿರ್ವಹಿಸುತ್ತಿದ್ದ ಲೈನಮನಗೆ ವಿದ್ಯುತ್ ಸ್ಪರ್ಷ:ಸ್ಥಿತಿ ಚಿಂತಾಜನಕ

Pratibha Boi
ವಿದ್ಯುತ್ ವ್ಯತ್ಯಯ ದಿನ ಕಾರ್ಯನಿರ್ವಹಿಸುತ್ತಿದ್ದ ಲೈನಮನಗೆ ವಿದ್ಯುತ್ ಸ್ಪರ್ಷ:ಸ್ಥಿತಿ ಚಿಂತಾಜನಕ
WhatsApp Group Join Now
Telegram Group Join Now
ಕಾಗವಾಡ:ಉಗಾರ ಉಪವಿಭಾಗದ ಲೋಕುರ ಗ್ರಾಮ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಶನಿವಾರ ವಿದ್ಯುತ್ ವ್ಯತ್ಯಯ ಎಂದು ಉಗಾರ ಉಪವಿಭಾಗದ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು.
ಇದೆ ವೇಳೆ ಲೋಕುರ ಗ್ರಾಮದ ಲೈನಮನ್ ಬಸವರಾಜ ಬಾಳಪ್ಪ ಕಾಂಬಳೆ ವಿದ್ಯುತ್ ಕೆಲಸ ನಿರ್ವಹಿಸುತ್ತಿದ್ದ ಇದೆ ವೇಳೆ ಅಕಸ್ಮಾತ್ತಾಗಿ ವಿದ್ಯುತ್ ಸ್ಪರ್ಷವಾಗಿದೆ‌.ಕೈಗೆ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಮೇಲಿಂದ ಕೆಳಗೆ ಬಿದ್ದಾಗ ಸ್ಥಳೀಯರು ಅದನ್ನು ನೋಡಿ ಅಂಬ್ಯುಲೆನ್ ಕರೆ ಮಾಡಿ ಸಮೀಪದ ಮೀರಜ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಸವರಾಜ ಬಾಳಪ್ಪ ಕಾಂಬಳೆ(34) ಇತ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದವನಾಗಿದ್ದು ಲೋಕುರ ಗ್ರಾಮದ ಲೈನಮನ್ ಆಗಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ.
ಪೋನ ಕರೆ ಸ್ವೀಕರಿಸದ ಉಗಾರ ಉಪವಿಭಾಗದ ಅಧಿಕಾರಿ:ಇನ್ನು ಇದರ ಬಗ್ಗೆ ಮಾಹಿತಿಗಾಗಿ ಪತ್ರಕರ್ತರು ಪೋನ್ ಕರೆ ಮಾಡಿದರೆ ಸ್ವೀಕರಿಸದೇ ಇರುವದು ಈ ಘಟನೆಗೆ ಅನುಮಾನ ಎಡೆ ಮಾಡಿಕೊಟ್ಟಿದೆ.
ವಿದ್ಯುತ್ ವ್ಯತ್ಯಯವಿದ್ದರೂ ವಿದ್ಯುತ್ ಸ್ಪರ್ಷವಾಗಿದ್ದು ಇದು ಹಲವಾರು ಅನುಮಾನಗಳಿಗೆ ಅಧಿಕಾರಿಗಳೇ ಉತ್ತರಿಸಬೇಕಿದೆ.ಈ ಘಟನೆಯಿಂದ ಸಾವುಗಳಾದರೆ ಯಾರು ಹೊಣೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಾಗವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
WhatsApp Group Join Now
Telegram Group Join Now
Share This Article