ಬಳ್ಳಾರಿ, ಮಾ.31.: ನಗರದ ಸಂಗನಕಲ್ಲು ರಸ್ತೆಯಲ್ಲಿರುವ ಶಂಕರ ಮಠದ ಸಭಾಂಗಣದಲ್ಲಿ ಮಾ.28 ರಂದು ಸಂಜೆ ನಡೆದ ಶಿಕ್ಷಣ ತಜ್ಞ ಗುರುರಾಜ್ ಕರಜಗಿ ಅವರ ಪ್ರೇರಣದಾಯಕ ಮಾತುಗಳು ನೆರೆದ ಶಿಕ್ಷಕ ಸಮುದಾಯವನ್ನು ಮನಸೂರೆಗೊಂಡವು.
ಶಿಕ್ಷಕರು ಹೇಗಿರಬೇಕು. ಅವರ ಪಾಠ ಇಂದಿನ ಮಕ್ಕಳ ಮನಸ್ಸನ್ನು ತಿದ್ದುವಲ್ಲಿ ಹೇಗೆ ಪರಿಣಾಮ ಬೀರಬೇಕು ಎಂಬುದನ್ನು ತಿಳಿಸಿಕೊಟ್ಟರು.
ರಾಜ್ಯ ಸಂಚಾಲಕ ಶಂಕರ ತತ್ವ ಪ್ರಚಾರ ಅಭಿಯಾನದ ತೇಜ ಶಂಕರ ಸೋಮಯಾಜೀ, ಶೃಂಗೇರಿ ಶಾರದಾ ಪೀಠದ ಉತ್ತರ ಕರ್ನಾಟಕ ಭಾಗದ ವಿಶೇಷ ಪ್ರತಿನಿಧಿ ದತ್ತಪ್ಪಯ್ಯ ಸ್ವಾಮೀಜಿ ಉಪಸ್ಥಿತರಿದ್ದರು. ಅಹಂ ಬ್ರಹ್ಮಾಸ್ಮಿ ಪ್ರತಿಷ್ಠಾನ ಸಹಕಾರ ನೀಡಿತ್ತು.


