ದೆಹಲಿಯಲ್ಲಿ ಎಎಪಿ ನಾಯಕ ಸೌರಭ್​ ಭಾರದ್ವಾಜ್​ ಮನೆ ಮೇಲೆ ಇ.ಡಿ. ದಾಳಿ

Ravi Talawar
ದೆಹಲಿಯಲ್ಲಿ ಎಎಪಿ ನಾಯಕ ಸೌರಭ್​ ಭಾರದ್ವಾಜ್​ ಮನೆ ಮೇಲೆ ಇ.ಡಿ. ದಾಳಿ
WhatsApp Group Join Now
Telegram Group Join Now

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ ಮಾಜಿ ಸಚಿವ ಹಾಗೂ ಹಿರಿಯ ಆಮ್ ಆದ್ಮಿ ಪಕ್ಷ (ಎಎಪಿ)ದ ನಾಯಕ ಸೌರಭ್​​ ಭಾರದ್ವಾಜ್​ ಅವರಿಗೆ ಸೇರಿದ ಸ್ಥಳಗಳ ಮೇಲೆ ಇಂದು ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಸೌರಭ್ ಭಾರದ್ವಾಜ್‌ಗೆ ಸೇರಿದ 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ಎಎಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಮೂಲಸೌಕರ್ಯಗಳ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಸೌರಭ್​ ಭಾರದ್ವಾಜ್​ ಭಾಗಿಯಾಗಿದ್ದಾರೆ ಎಂದು ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ಆರೋಪ ಮಾಡಿದ್ದರು.

ಮೂಲಗಳ ಪ್ರಕಾರ, ದೆಹಲಿ ಆಸ್ಪತ್ರೆ ನಿರ್ಮಾಣದ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ದೆಹಲಿ-ಎನ್​ಸಿಆರ್‌ನ​ 13 ಸ್ಥಳಗಳಲ್ಲಿ ಇ.ಡಿ. ಶೋಧ ನಡೆಸುತ್ತಿದೆ.

ಜಿಎನ್​ಸಿಟಿಡಿ ಆರೋಗ್ಯ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಸೌರಭ್ ಭಾರದ್ವಾಜ್, ಮಾಜಿ ಆರೋಗ್ಯ ಸಚಿವರು, ಖಾಸಗಿ ಗುತ್ತಿಗೆದಾರರು ಮತ್ತು ಅಪರಿಚಿತ ಅಧಿಕಾರಿಗಳ ವಿರುದ್ಧ ದೆಹಲಿ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್​ಐಆರ್​ ದಾಖಲಿಸಿತ್ತು.

WhatsApp Group Join Now
Telegram Group Join Now
Share This Article