2019ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್​ ನನ್ನ ಕಾರಿನ ಮೇಲೆ ಗುಂಡಿನ ದಾಳಿಗೆ ಯತ್ನ

Ravi Talawar
2019ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್​ ನನ್ನ ಕಾರಿನ ಮೇಲೆ ಗುಂಡಿನ ದಾಳಿಗೆ ಯತ್ನ
WhatsApp Group Join Now
Telegram Group Join Now

ದೆಹಲಿ,17: 2019ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್​ ನನ್ನ ಕಾರಿನ ಮೇಲೆ ಗುಂಡಿನ ದಾಳಿಗೆ ಯತ್ನಿಸಿತ್ತು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಇದು ನಾನು ಕಾಂಗ್ರೆಸ್​ ಮೇಲೆ ಮಾಡುತ್ತಿರುವ ಆರೋಪ ಎಂದು ಭಾವಿಸಬೇಡಿ, ಪತ್ರಕರ್ತರಿಗೂ ಈ ವಿಷಯ ತಿಳಿದಿದೆ, ಗಾಂಧಿ ಕುಟುಂಬದ ಭಯ ಮತದಾರರಿಗೆ ಮಾತ್ರವಲ್ಲ ಪತ್ರಕರ್ತರಿಗೂ ಇತ್ತು ಎಂದರು.

ಈ ಹಿಂದೆ ಅಮೇಥಿಯಲ್ಲಿ ಬೂತ್ ವಶಪಡಿಸಿಕೊಳ್ಳುವಿಕೆ ಹಾಗೂ ರಾಜಕೀಯ ಹಿಂಸಾಚಾರ ನಡೆದಿದೆ ಎಂದು ಆರೋಪಿಸಿದ ಅವರು, ಈ ಘಟನೆಗಳು ವರದಿಯಾಗದಂತೆ ಗಾಂಧಿ ಕುಟುಂಬ ನೋಡಿಕೊಂಡಿದೆ. ಬಿಜೆಪಿ ಸಂಸದೆ ಮೇನಕಾ ಗಾಂಧಿ ಮೇಲೂ ಕಾಂಗ್ರೆಸ್​ ಗೂಂಡಾಗಳು ಹಲ್ಲೆ ನಡೆಸಿದ್ದರು.

ರಾಜೀವ್ ಗಾಂಧಿ ವಿರುದ್ಧ ಅಮೇಥಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸುಲಭವಾಗಿರಲಿಲ್ಲ, ಕಾಂಗ್ರೆಸ್​ನಿಂದ ಹಲ್ಲೆಗೊಳಗಾಗಿದ್ದರು.

ಗ್ಲಾಮರ್ ಪ್ರಪಂಚದಿಂದ ರಾಜಕೀಯಕ್ಕೆ ಪ್ರವೇಶಿಸಲು ತಾನು ನಡೆಸಿದ ಹೋರಾಟದ ಬಗ್ಗೆ ಮಾತನಾಡುತ್ತಾ, ರಾಹುಲ್​ ಗಾಂಧಿ ರೀತಿಯ ಹಿನ್ನೆಲೆ ಹೊಂದಿಲ್ಲ ಎಂದರು. ಮುಲಾಯಂ ಸಿಂಗ್ ಯಾದವ್ ಅವರ ನೆರವಿನಿಂದ 2014ರಲ್ಲೂ ರಾಹುಲ್ ಕೇವಲ 1.07 ಲಕ್ಷ ಮತಗಳಿಂದ ಗೆದ್ದಿದ್ದರು ಎಂದು ಹೇಳಿದರು.

WhatsApp Group Join Now
Telegram Group Join Now
Share This Article