ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸಕ್ಕೆ ಚಾಲನೆ

Hasiru Kranti
ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸಕ್ಕೆ ಚಾಲನೆ
WhatsApp Group Join Now
Telegram Group Join Now

ಕುಡಚಿ; ಸಮೀಪದ ಕೃಷ್ಣಾ ತೀರದ ಶಿರಗೂರ ಗ್ರಾಮದಲ್ಲಿ, ವಿಶ್ವಶಾಂತಿ ಆತ್ಮಶಾಂತಿ ಧರ್ಮಪ್ರಭಾವನಾ ಬಹು ಪುಣ್ಯ ಸಂಪಾದನಾರ್ಥ, ಶ್ರೀ ಮುದ್ದೇವಾಧಿದೇವ ೧೦೦೮ ಭ, ಮೂಲನಾಯಕ ಆದಿನಾಥ ತಿರ್ಥಂಕರ ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬ ತಥಾ ಶಿಖರಸ್ಥ ಸಿಂಹಾಸನೋಪರಿ ಶ್ರೀ೧೦೦೮ ಭ, ಶಾಂತಿನಾಥ ತಿರ್ಥಂಕರ ಜಿನಬಿಂಬಗಳ, ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸಕ್ಕೆ, ಸೋಮವಾರ ಚಾಲನೆ ನೀಡಿಲಾಯಿತು.
ಪ ಪೂ, ಶ್ರೀ ೧೦೮ ಡಾ; ಬಾಲಾಚಾರ್ಯ ವಿಭೂಷಣ ಸಿದ್ದಸೇನ ಮುನಿ ಮಹಾರಾಜರು ದಿವ್ಯ ಸಾನಿಧ್ಯದಲ್ಲಿ, ಬೆಳಗ್ಗೆ ನಾಂದಿ ಮಂಗಲ, ವಾಧ್ಯಘೋಷ ಆಚಾರ್ಯ ನಿಯಂತ್ರಣ ಪ್ರತಿಷ್ಠಾಚಾರ್ಯ ಪ್ರತಿಜ್ಞೆ, ಇಂದ್ರ ಪ್ರತಿಷ್ಠಾ, ಆನೆಯ ಮೇಲೆ ಯಜಮಾನರ ಆಗಮನ, ಧ್ವಜಾರೋಹಣ, ಮಂಟಪ್ ಉದ್ಘಾಟನೆ, ಮಂಟಪ ವೇದಿ ಪ್ರತಿಷ್ಠಾ, ಮಂಗಲ ಕುಂಭ ತರುವುದು, ಪೀಠಯಂತ್ರಾರಾಧನ, ಧಾಮಸಂಪ್ರೋಷಣೆ, ಮಂದಿರ ಶುದ್ಧಿ, ನವಗ್ರಹ ಹೋಮ.
ಆರಾಧನ ಮಹಾಯಾಗ ಮಂಡಲ ಆರಾಧನಾ, ಮೃತ್ತಿಕಾಸಂಗ್ರಹ, ಅಂಕುರಾರೋಫಣ, ಆನೆ ಮೇಲೆ ಭದ್ರ ಕುಂಭ ತರುವುದು, ಜಲಯಾತ್ರಾ ಮಹೋತ್ಸವ. ಸುವರ್ಣ ಮುತೈದೆಯರಿಂದ ಪಂಚಕುಂಭ ವಿನ್ಯಾಸ, ಶಾಂತಿ ಹೋಮ. ಗರ್ಭ ಕಲ್ಯಾಣ ಮಹೋತ್ಸವ, ಗರ್ಭ ಸಂಸ್ಕಾರ ವಿಧಿ ಸೇರಿ ವಿವಿಧ ಕಾರ್ಯಕ್ರಮಗಳು ನಡೆದವು.
ಪ ಪೂ, ಶ್ರೀ ೧೦೮ ಡಾ; ಬಾಲಾಚಾರ್ಯ ಜಿನಧರ್ಮ ವಿಭೂಷಣ ಸಿದ್ದಸೇನ ಮುನಿ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿ, ಮಾತನಾಡಿದ ಅವರು ಭಕ್ತಿಯಿಂದ ಶ್ರೀ ಭಗವಾನ ತಿರ್ಥಂಕರರ ಸೇವೆ ದ್ಯಾನ ಮಾಡಿದರೆ ಕಷ್ಟಗಳು ದೂರಾಗಿ ಮನುಷ್ಯನಿಗೆ ಸುಖ ಶಾಂತಿ ಸಿಗುತ್ತದೆ ಎಂದು ತಿಳಿಸುತ್ತಾ, ಇವತ್ತಿನ ಕಾಲದಲ್ಲಿ ಸಂಸ್ಕಾರ ಬಹಳ ಮುಖ್ಯವಾಗಿದ್ದು, ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕೇಂದು ತಿಳಿಸಿದರು.
ದಕ್ಷಿಣ ಭಾರತ ಜೈನ ಸಭೆ ಉಪಾಧ್ಯಕ್ಷ ಅಭಿನಂದ ಪಾಟೀಲ, ಹಾಗೂ ಉತ್ತಮ ಪಾಟೀಲ ಮಹಾಮಹೋತ್ಸವಕ್ಕೆ ಚಾಲನೆ ನೀಡಿದರು,
ಪ ಪೂ, ಸ್ವಸ್ತಿ ಶ್ರೀ ಜಗದ್ಗುರು ಲಕ್ಷ್ಮೀಸೇನ ಭಟ್ಟಾರಕರು ಭಾಗ ವಹಿಸಿ ಮಾತನಾಡಿದರು. ಅಭಿನಂದನ ಪಾಟೀಲ, ವಿನಯಶ್ರೀ ಪಾಟೀಲ, ಉತ್ತಮ ಪಾಟೀಲ, ಧನಶ್ರೀ ಪಾಟೀಲ, ಭರತೇಶ ಪಾಟೀಲ, ಗೊಮ್ಮಟೇಶ ಪಾಟೀಲ, ಧನ್ಯಕುಮಾರ ಪಾಟೀಲ, ಸುರೇಶ ನಾಂದ್ರೆ, ರಮೇಶ ಐನಾಪೂರೆ, ರಾವಸಾಬ ನಾಂದ್ರೆ, ದೀಲಿಪ ಅಕ್ಕೂಳೆ ಹಾಗೂ
ಶಿರಗೂರ ಗ್ರಾಮದ ಶ್ರೀ ೧೦೦೮ ಭ, ಆಧಿನಾಥ ತೀರ್ಥಂಕರರ ಜೈನ ಬಸದಿ ಟ್ರಸ್ಟ ಕಮೀಟಿ, ಹಾಗೂ ಶ್ರೀ ಚಕ್ರೇಶ್ವರಿ ಮಹಿಳಾ ಮಂಡಳ, ಶ್ರೀ ಆದಿನಾಥ ಯುವಕ ಮಂಡಳ ಸದಸ್ಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article