ರಾಯಭಾಗ:ಶ್ರೀ ವಿವೇಕಾನಂದ ಕಲಾ ಮಂದಿರ ರಾಯಭಾಗದಲ್ಲಿ “ಜಲವರ್ಣ ಕಾರ್ಯಾಗಾರ” ಉದ್ಘಾಟನಾ ಸಮಾರಂಭವನ್ನು ಡಾ.ರಾಘವೇಂದ್ರ ಪತ್ತಾರ ರವರು ಉದ್ಘಾಟಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಗೂ ಉತ್ತಮ ಆರೋಗ್ಯಕ್ಕೆ ಬಣ್ಣದ ಚಿಕಿತ್ಸೆ ಉಪನ್ಯಾಸಕರಾಗಿ ಆಗಮಿಸಿದ ಡಾ ರಾಘವೇಂದ್ರ ಪತ್ತಾರ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಬಣ್ಣ ಚಿಕಿತ್ಸೆಯ ಮೂಲಕ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುವ ಒಂದು ಪರ್ಯಾಯ ಚಿಕಿತ್ಸಾ ವಿಧಾನವಾಗಿದೆ.
ಪ್ರತಿಯೊಂದು ಬಣ್ಣವು ತನ್ನದೇ ಆದ ವಿಶಿಷ್ಟ ಕಂಪನ ಆವರ್ತನವನ್ನು ಹೊಂದಿರುತ್ತದೆ.ಅದು ಮಾನವನ ಮನಸ್ಸು ಮತ್ತು ದೇಹದ ಮೇಲೆ ವಿವಿಧ ಪರಿಣಾಮಗಳನ್ನು ಬೀರುತ್ತದೆ.ವಿಭಿನ್ನ ಬಣ್ಣಗಳು ಮಾನಸಿಕ ಖಿನ್ನತೆ, ಒತ್ತಡ, ಆತಂಕ, ನಿದ್ರಾಹೀನತೆ, ದೈಹಿಕ ನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.ಬಣ್ಣಗಳು ನಿಮ್ಮ ಮನಸ್ಥಿತಿ ಮತ್ತು ಯೋಗಕ್ಷೇಮದ ಬಗ್ಗೆ ಬಣ್ಣ ಚಿಕಿತ್ಸೆಯಿಂದ ಮುಕ್ತಗೊಳಿಸಬಹುದಾಗಿದೆ ಎಂದು ಹೇಳಿದರು.
ಎಸ್ ಪಿ ಎಂ ಸಂಸ್ಥೆಯ ರಾಯಬಾಗದ ಅಧ್ಯಕ್ಷರು ಹಾಗೂ ಮಾಜಿ ಸಂಸದರು ಬ್ಯಾರಿಸ್ಟರ್ ಶ್ರೀ ಅಮರಸಿಂಹ ಪಾಟೀಲ ರವರು ಮಾತನಾಡಿ ಬಣ್ಣದ ಚಿಕಿತ್ಸೆಯ ಲಾಭವನ್ನು ಪಡೆಯಲು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪಿ ವಿ ಬಡಿಗೇರ,ಪಿ ಆಯ್ ಪತ್ತಾರ,ಡಾ ಪಿ ಬಿ ಗವಾನಿ ಪ್ರಾಚಾರ್ಯರು,ಸಂತೋಷ ಸಂಗನಾಳೆ,ನಧಾಪ್,ಕರಿಹೊಳ್ಳಿ,ಬಿಎಸ್ಸಿ ನರ್ಸಿಂಗ್ ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.