ಉತ್ತಮ ಕೃತಿಗಳನ್ನು ನೀಡಿದ ಡಾ. ಜೆ.ಪಿ.ದೊಡ್ಡಮನಿ ಕಾರ್ಯ ಶ್ರೇಷ್ಠ: ಡಾ.ವೀರಣ್ಣ ರಾಜೂರ

Ravi Talawar
ಉತ್ತಮ ಕೃತಿಗಳನ್ನು ನೀಡಿದ ಡಾ. ಜೆ.ಪಿ.ದೊಡ್ಡಮನಿ ಕಾರ್ಯ ಶ್ರೇಷ್ಠ:  ಡಾ.ವೀರಣ್ಣ ರಾಜೂರ
WhatsApp Group Join Now
Telegram Group Join Now

ಬೆಳಗಾವಿ: ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೃತಿಗಳನ್ನು ನೀಡಿದ ಡಾ. ಜೆ.ಪಿ.ದೊಡ್ಡಮನಿ ಕಾರ್ಯ ಶ್ರೇಷ್ಠವಾದುದು. ಅವರ ಅನುವಾದ ಜ್ಯೋತಿ, ಈ ಅಭಿನಂದನಾ ಗ್ರಂಥವು ಕೇವಲ ಒಂದು ಪುಸ್ತಕವಲ್ಲ. ಅವರ ಸಮಗ್ರ ವ್ಯಕ್ತಿತ್ವ ಅರ್ಥಮಾಡಿಕೊಳ್ಳುವ ಹೊತ್ತಿಗೆಯಾಗಿದೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ ಹೇಳಿದರು.

ಅಥಣಿಯ ಇಲ್ಲಿನ ಮೋಟಗಿ ಮಠದ ಅನುಭವ ಮಂಟಪ ವೇದಿಕೆಯಲ್ಲಿ ಭಾನುವಾರ ಡಾ.ಜೆ.ಪಿ.ದೊಡಮನಿ ಅಭಿನಂದನಾ ಸಮಿತಿ, ಅಥಣೀಶ ಯುವ ವೇದಿಕೆ ಹಾಗೂ ವಿವಿಧ ಸಾಹಿತ್ಯ ಸಂಘಗಳ ಆಶ್ರಯದಲ್ಲಿ ನಡೆದ ಸಾಹಿತಿ ಜೆ.ಪಿ.ದೊಡಮನಿ ಸಾಹಿತ್ಯ ಅವಲೋಕನ, ಅಭಿನಂದನೆ, ಅನುವಾದ ಜ್ಯೋತಿ, ಸಂಕೀರ್ಣ ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜೆ.ಪಿ.ದೊಡಮನಿ ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ, ಪ್ರವೃತ್ತಿಯಲ್ಲಿ ಸಾಹಿತ್ಯ ಕೃಷಿ ಮಾಡುವ ಮೂಲಕ ಬಹುಮುಖ ಸಾಧನೆ ತೋರಿ ಸಮಾಜದ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಸೃಜನಶೀಲ ಸಾಹಿತ್ಯ ಮತ್ತು ದಾರ್ಶನಿಕರ ಜೀವನ ಚರಿತ್ರೆ ಕನ್ನಡ ಭಾಷೆಯಲ್ಲಿ ಅನುವಾದಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಸಾವಿತ್ರಿಬಾಯಿ ಪುಲೆ, ಜ್ಯೋತಿಬಾಪುಲೆ, ಅಂಬೇಡ್ಕರ್, ಶಾಹುಮಹಾರಾಜ ಸೇರಿದಂತೆ ಇನ್ನಿತರ ಗ್ರಂಥಗಳನ್ನು ಅನುವಾದಿಸಿದ್ದಾರೆ. ಜೆಪಿ ದಂಪತಿ ನನ್ನ ಶಿಷ್ಯರಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಪ್ರಭಾ ಬೋರಗಾಂವಕರ ಒಲವ ಉಡುಗೊರೆ ಎಂಬ ಭಾವಗೀತೆಗಳ ಧ್ವನಿ ಸುರುಳಿ  ಬಿಡುಗಡೆಗೊಳಿಸಿ ಹಂಪಿ ಕನ್ನಡ ವಿವಿ ವಿಶ್ರಾಂತ ಉಪಕುಲಪತಿ ಡಾ. ಮುರಿಗೆಪ್ಪ ಮಾತನಾಡಿ, ಡಾ.ಜೆ.ಪಿ.ದೊಡಮನಿ, ಪ್ರಭಾ ಅವರ ಸಾಹಿತಿಕ ದಾಂಪತ್ಯ ಜೀವನ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಲೋಕಕ್ಕೆ ಮೌಲ್ಯವುತ ಗ್ರಂಥಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರದು ಅಪರೂಪದ ದಾಂಪತ್ಯ ಜೀವನ, ಅವರು ನಮ್ಮ ಶಿಷ್ಯರೆಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದರು.

ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಚಿತ್ತರಗಿ ಇಳಕಲ್ಲ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಸಾಹಿತಿ ದೊಡ ಮನೆಯವರ ಅಭಿನಂದನಾ ಸಮಾರಂಭವು ಒಂದು ಅನುಭಾವದ ವೇದಿಕೆಯಾಗಿದೆ. ವಿದ್ವಾಂಸ ಡಾ.ಕಲಬುರ್ಗಿಯವರ ಅರಿವಿನ ಸಂಸ್ಕಾರದಲ್ಲಿ ಜೆ.ಪಿಯವರು ಕ್ರಿಯಾಶೀಲ ಮೂರ್ತಿಗಳಾಗಿ ಬೆಳೆದಿದ್ದಾರೆ. ಅವರಿಂದ ಇನ್ನಷ್ಟು ಶ್ರೇಷ್ಠ ಗ್ರಂಥಗಳು ನಾಡಿಗೆ ದೇಶಕ್ಕೆ ಲೋಕಾರ್ಪಣೆಗೊಳ್ಳಲಿ ಎಂದು ಶುಭ ಹಾರೈಸಿದರು.

ಸಮಾರಂಭ ಉದ್ಘಾಟಿಸಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ದಾಂಪತ್ಯ ಜೀವನ ಸುಖಕರವಾಗಿರಲಿ, ಅವರಿಂದ ಇನ್ನಷ್ಟು ಶ್ರೇಷ್ಠ ವಾದ ಗ್ರಂಥಗಳು ಮೂಡಿಬರಲಿ ಎಂದರು.

ಧಾರವಾಡದ ವಿಶ್ರಾಂತ ಪ್ರಾಧ್ಯಾಪಕ ಡಾ.ಜೆ.ಎ. ಹಡಗಲಿ ಜೆಪಿ ಅವರ ಸಂಕೀರ್ಣ ಗ್ರಂಥಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಖ್ಯಾತ ಸಾಹಿತಿ ಡಾ.ವಿ.ಎಸ್.ಮಾಳಿ ದೊಡ್ಡನಿಯವರ ಒಟ್ಟು ಸಾಹಿತ್ಯ ಅವಲೋಕನ ಕುರಿತು ಮಾತನಾಡಿದರು. ಜಮಖಂಡಿ ಪ್ರಾಧ್ಯಾಪಕ ಡಾ. ವೈ.ವೈ.ಕೊಕ್ಕನವರ ಅಭಿನಂದನಾ ನುಡಿ ಆಡಿದರು.

ಅಭಿನಂದನಾ ಸಮಿತಿಯ ಸನ್ಮಾನ ಸ್ವೀಕರಿಸಿ ಡಾ. ಜೆ.ಪಿ.ದೊಡಮನಿ ಮಾತನಾಡಿ. ನನಗೆ ದಲಿತ ಎಂಬ ಭಾವನೆ ಎಲ್ಲಿಯೂ ಕಾಡಲಿಲ್ಲ, ಎಲ್ಲರೂ, ಎಲ್ಲ ಸಮಾಜದವರು ಆತ್ಮೀಯವಾಗಿ ಕಂಡಿದ್ದಾರೆ. ನಾನು ಕೂಡಾ ಮಾನವೀಯತೆ ಆಧಾರದ ಮೇಲೆ ಸಾಹಿತ್ಯ ರಚನೆ ಮಾಡಿದ್ದೇನೆ. ನನ್ನ ವಿದ್ಯಾರ್ಥಿ ಜೀವನದಲ್ಲಿ ನನ್ನ ಎಲ್ಲ ಗುರುಗಳು ಕೂಡಾ ಪ್ರೀತಿಯಿಂದ ಮಾರ್ಗದರ್ಶನ ಮಾಡಿದರು. ಮಠಗಳ ಆಶ್ರಯದಲ್ಲಿ ಬೆಳೆದ ನಾನು ಬಡತನ ಸಂಕಷ್ಟ ಎದುರಿಸಿ ಶಿಕ್ಷಣ ಮುಗಿಸಿದ್ದೇನೆ. ಪ್ರಭಾ ಅವಳನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದೇವೆ. ಅವರು ಸಾಹಿತಿಗಳಾಗಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ನಾನು ಏಳು ಗ್ರಂಥಗಳನ್ನು ರಚಿಸಿದ್ದೇನೆ ಎಂದರು.

ಸಂಘಟನೆ ಪದಾಧಿಕಾರಿಗಳು, ಅಭಿಮಾನಿಗಳು, ದೊಡಮನಿ ಬಂಧುಗಳು ಡಾ.ಜೆ.ಪಿ ದೊಡಮನಿ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ವೇಳೆ ಮಹೇಶ ಕಾಂಬಳೆ ಮತ್ತು ಸಂಗಡಿಗರು ಭಾವಗೀತೆಗಳನ್ನು ಪ್ರಸ್ತುತಪಡಿಸಿದ್ದರು. ಸಾಹಿತಿ, ಶಿಕ್ಷಕಿ ಪ್ರಭಾ ಬೋರಗಾಂವಕರ ಸ್ವಾಗತಿಸಿದರು. ಡಾ.ಪ್ರಿಯಂವದಾ ಹುಲಗಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರಾಮಣ್ಣದೊಡ್ಡನಿಂಗಪ್ಪಗೋಳನಿರೂಪಿಸಿದರು. ಡಾ. ದುರ್ಗಪ್ಪ ದೊಡ್ಡಮನಿ ವಂದಿಸಿದರು.

WhatsApp Group Join Now
Telegram Group Join Now
Share This Article