ಕುಕನೂರು. ಸ್ವತಂತ್ರ ಹೋರಾಟಗಾರ ದೇಶದ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ. ದೇಶಕ್ಕೆ ನೀಡಿರುವ ಕೊಡುಗೆ ಅಪಾರ ಎಂದು. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ.ಕಳಕಪ್ಪ ಕಂಬಳಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬಾಬು ಜಗಜೀವನರಾಮ್ ಅವರ 119ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಅಂದು ಜಗಜೀವನ ರಾಮ್ ಅವರ ಹಲವು ಕಷ್ಟಗಳನ್ನು ಅನುಭವಿಸಿ ಅನೇಕ ಸವಾಲುಗಳನ್ನು ಎದುರಿಸಿ ಸಮಾಜದಲ್ಲಿ ತಮ್ಮದೇ ಆದ ಸ್ಥಾನ ಪಡೆದುಕೊಂಡರು. ದೇಶದ ಉನ್ನತ ಹುದ್ದೆ ಉಪ ಪ್ರಧಾನಮಂತ್ರಿ ಸ್ಥಾನ ಅಲಂಕರಿಸಿ ಹಸಿರು ಕ್ರಾಂತಿ ಹರಿಕಾರರಾಗಿ ಖ್ಯಾತಿ ಪಡೆದರು
ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮತ್ತು ಅವರ ಕೋಡಿಗೆ ಅಪಾರ. ಅವರಂತೆ ಯುವಕರು ರಾಜಕೀಯದಲ್ಲಿ ಬೆಳೆದು ಮುಂದೆ ಬರಬೇಕು ಒಗ್ಗಟ್ಟಾಗಿ ಇದ್ದು ಪ್ರತಿಯೊಬ್ಬ ಮಹಾನ ನಾಯಕರ ಆದರ್ಶಗಳನ್ನು ಯುವಕರು ಪಾಲಿಸಬೇಕು. ಎಂದು ಹೇಳಿದರು. ತಹಸಿಲ್ದಾರ್ ಬಸವರಾಜ ಮಾತನಾಡಿ. ಜಗಜೀವನ ರಾಮ್. ಅವರು ಮೇಲು ಕೀಳು ಎಂಬ ತಾರತಮ್ಯ ಜಾತಿ ಪದ್ಧತಿ ಆಸ್ಪೃಶ್ಯತೆಯನ್ನು ತೊಡೆದು ಹಾಕಲು ಶ್ರಮಿಸಿದರು. ಸಾಮಾಜಿಕ ಬದಲಾವಣೆಗಾಗಿ ಹೋರಾಡಿದರು. ಶೋಷಿತ ಪರವಾಗಿ ದನಿ ಎತ್ತಿದ ಅವರು. ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ
ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಲೀಲಾವತಿ ಮುಧೋಳ ಉಪಾಧ್ಯಕ್ಷರಾದ ಮಂಜುಳಾ ಕಲ್ಮನಿ ತಾಲೂಕ ಪಂಚಾಯಿತಿ ಸಂತೋಷ್ ಪಾಟೀಲ್ ಬಿರಾದರ್ ಸಮಾಜ ಕಲ್ಯಾಣ ಇಲಾಖೆ ನಿಲಯ ಪಾಲಕ್ ವಿಜಯ್ ಕುಮಾರ್ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಮುಖಂಡರಾದ ರಾಮಣ್ಣ ಬಂಕದಮನಿ ಯಮನೂರಪ್ಪ ಗೊರಲೆಕೊಪ್ಪ ಪರಶುರಾಮ್ ಶಂಕ್ರಣ್ಣನವರು ಶಾಸ್ತ್ರಿ. ಶಿವಪ್ಪ ಭಂಡಾರಿ ಬಸವರಾಜ್ ಬೂದುಗುಂಪಿ ನಿಂಗಪ್ಪ ಬರಲೇ ಕೊಪ್ಪ ಲಕ್ಷ್ಮಣ್ ಬಾರಿಗಿಡದ ಮಾಂತೇಶ್ ಆರುಬೆರಳಿನ ಶಂಕರ್ ಭಂಡಾರಿ ಲಕ್ಷ್ಮಣ ಕಾಳಿ ನಿಂಗರಾಜ್ ಅಪ್ಪು ವೀರೇಶ್ ಭಂಡಾರಿ ಶ್ರೀಧರ್ ಭಂಡಾರಿ ಇತರರು ಇದ್ದರು


