ಬಳ್ಳಾರಿ 30 – ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಉದ್ದೇಶ ಕೇವಲ ಸ್ವ ಸಹಾಯ ಸಂಘದ ಸದಸ್ಯರಿಗೆ ಬ್ಯಾಂಕಿಂಗ್ ವ್ಯವಹಾರ ಮಾಡುವುದಲ್ಲದೆ. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಅಂಗವೈಕಲ್ಯ ಹೊಂದಿದವರಿಗೆ ಸಹಾಯ ಮಾಡುವುದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಶ್ರೀ ಅಕ್ಕಿ ಕೃಷ್ಣಮೂರ್ತಿ ಸಂಗನಕಲ್ಲು ಹಸಿರು ಸೇನಾ ಜಿಲ್ಲಾಧ್ಯಕ್ಷರು ಫಲಾನುಭವಿಗಳಿಗೆ ವಿಲ್ ಚೇರ್ ವಿತರಣೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬಳ್ಳಾರಿ ಹೊರ ವಲಯದ ಸಂಗನಕಲ್ಲು ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜನಮಂಗಳ ಕಾರ್ಯಕ್ರಮದ ಮೂಲಕ ಸಂಗನಕಲ್ಲು ಗ್ರಾಮದ ನಿವಾಸಿಗಳಾದ ರುದ್ರಮುನಿ ಯವರು ಅನಾರೋಗ್ಯದಿಂದ ಅಂಗವೈಕಲ್ಯಕ್ಕೆ ಬಲಿಯಾಗಿ ಎರಡು ಕಾಲು ಕಳೆದುಕೊಂಡ ಸದಸ್ಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಿಲ್ ಚೇರ್ ವಿತರಣೆ ಮಾಡಲಾಯಿತು ಹಾಗೂ ಅದೆ ಗ್ರಾಮದ ಪುಟ್ಟ ಬಾಲಕ ರಾಘವೇಂದ್ರ ಎರಡು ಕಾಲುಗಳಲ್ಲಿ ಸ್ವಾದಿನತೆಯನ್ನು ಕಳೆದುಕೊಂಡ ಇವರಿಗೆ ವಾಕರ್ ಸ್ಟೀಕ್ ವಿತರಣೆ ಮಾಡಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಸ್ವ ಸಹಾಯ ಸಂಘಗಳ ಮೂಲಕ ಆರ್ಥಿಕ ನೆರವು ಅಸಹಾಯಕರಿಗೆ ನೆರವು ನೀಡುವ ಕೆಲಸವನ್ನು ಮಾಡುತ್ತಾ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಪ್ರಗತಿಪರ ರೈತರು, ಹಸಿರು ಸೇನಾ ಸಂಘದ ಜಿಲ್ಲಾಧ್ಯಕ್ಷರು ಅಕ್ಕಿ ಕೃಷ್ಣಮೂರ್ತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು,
ಬಸವರಾಜ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಂಜೂರಾತಿ ಯಾದ ನಾಲ್ಕು ಜನ ಫಲಾನುಭವಿಗಳಾದ ರುದ್ರಮುನಿ ಸಂಗನಕಲ್ಲು, ರಾಘವೇಂದ್ರ ಸಂಗನಕಲ್ಲು ರಾಮಮೂರ್ತಿ ಕೊರ್ಲಗುಂದಿ, ಮಂಜುನಾಥ ಬಿಸರಹಳ್ಳಿ ಯವರು ಅಂಗವೈಕಲ್ಯಕೆ ತುತ್ತಾದ ಸದಸ್ಯರಿಗೆ ಸಲಕರಣೆಗಳನ್ನು ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವಿತರಣೆ ಮಾಡಲಾಯಿತು ಎಂದು ಬಳ್ಳಾರಿ-1 ತಾಲ್ಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು ಶ್ರೀ ಬಸವರಾಜ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀರಾಂಪುರ್ ವಲಯದ ಮೇಲ್ವಿಚಾರಕರು ಮಹೇಶ್ ಎಸ್, ಸಂಗನಕಲ್ಲು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು ಗೌರಮ್ಮ ಒಕ್ಕೂಟದ ಪದಾಧಿಕಾರಿಗಳು ಗ್ರಾಮದ ಹಿರಿಯರು, ಸ್ವ ಸಹಾಯ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು


