ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಜನ ಮಂಗಳ ಕಾರ್ಯಕ್ರಮ ಅಡಿಯಲ್ಲಿ ವಿಲ್ ಚೇರ್ ವಿತರಣೆ

Ravi Talawar
ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಜನ ಮಂಗಳ ಕಾರ್ಯಕ್ರಮ ಅಡಿಯಲ್ಲಿ ವಿಲ್ ಚೇರ್ ವಿತರಣೆ
WhatsApp Group Join Now
Telegram Group Join Now
ಹೊಸಪೇಟೆ:  .ಜನ ಮಂಗಳ ಕಾರ್ಯಕ್ರಮದ ಅಡಿಯಲ್ಲಿ  ತಾಲೂಕಿನ ಗಾಳೆಮ್ಮನಗುಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಿಪ್ಪೇಸ್ವಾಮಿ  ಹಾಗೂ ರಾಜೇಶ್ವರಿ ದಂಪತಿಗಳ ವಿಕಲಚೇತನ ಬಾಲಕ ಜೀವರಾಜ್ ಗೆ ವ್ಹಿಲ್ ಚೇರ್ ನೀಡಲಾಯಿತು.
 ಸಂಸ್ಥೆಯ ತಾಲೂಕಿನ ಯೋಜನಾಧಿಕಾರಿ ಮಾರುತಿ ಎಸ್. ವಿತರಿಸಿ ಶುಭ ಹಾರೈಸಿದರು ಸಂದರ್ಭದಲ್ಲಿ ಮಾತನಾಡಿದ.  ವಿಕಲ ಚೇತನರಿಗಾಗಿಯೇ ಜನ ಮಂಗಳ ಕಾರ್ಯಕ್ರಮವನ್ನು   ಪರಮಪೂಜ್ಯ ಡಾ. ವೀರೇಂದ್ರ ಹೆಗಡೆ  ಹುಟ್ಟು ಹಾಕಿದ್ದು , ಪೂಜ್ಯರಿಗೆ    ಸಾಮಾಜಿಕ ಕಳಕಳಿಇದೆ,   ಇದರಲ್ಲಿ ಯಾವುದೇ ಜಾತಿ, ಧರ್ಮ ,ಲಿಂಗ ,ವಯಸ್ಸು, ಭೇದಭಾವವಿಲ್ಲದೆ ಅವಶ್ಯವಿರುವ ಪ್ರತಿಯೊಬ್ಬ ವಿಕಲಚೇತನರಿಗೂ ವಿವಿಧ ಸಲಕರಣೆಗಳನ್ನು ಉಚಿತವಾಗಿ ಅವರು  ನೀಡುತ್ತಿದ್ದಾರೆ ಎಂದರು. ಇಂತಹ ಸೌಲಭ್ಯಗಳನ್ನು ಪಡೆಯುವ  ನಾವೆಲ್ಲ ಪರಮಪೂಜ್ಯರಿಗೆ ಆಭಾರಿಯಾಗಿರಬೇಕು ಎಂದರು .
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕ ರಘು ಸೇವಾ ಪ್ರತಿನಿಧಿ ವಿಜಯರೆಡ್ಡಿ ಸ್ವಸಹಾಯ ಸಂಘದ ಸದಸ್ಯರಾದ ದ್ರಾಕ್ಷಾಯಿಣಿ, ಕೊಟ್ರಮ್ಮ,ಶಾಂತಮ್ಮ, ಹನುಮಕ್ಕ ಗೌಶಿಯ ರೇಣುಕಾ ಇತರರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article