ಬಸವ ಜಯಂತಿಯನ್ನು  ಭಕ್ತಿಪೂರ್ವಕವಾಗಿ ಆಚರಿಸಲು ಚರ್ಚೆ

MK HasiruKranti
ಬಸವ ಜಯಂತಿಯನ್ನು  ಭಕ್ತಿಪೂರ್ವಕವಾಗಿ ಆಚರಿಸಲು ಚರ್ಚೆ
WhatsApp Group Join Now
Telegram Group Join Now
ಬಳ್ಳಾರಿ, ಏ.04.:  ನಗರದಲ್ಲಿ ಏ.20 ರಂದು ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಕುರಿತು ಪೂರ್ವ ಭಾವಿ ಸಭೆ ನಗರದ ರಾಷ್ಟ್ರೀಯ ಬಸವದಳದ ಸಭಾಂಗಣದಲ್ಲಿ ನಿನ್ನೆ ಸಂಜೆ ನಡೆಯಿತು.
ಬಸವ ಜಯಂತಿಯನ್ನು ನಗರದಲ್ಲಿ ಈ ಮೊದಲು ಶರಣ ಸಕ್ಕರೆ ಕರಡೀಶ ಚೌಕಿಯಲ್ಲಿ  ವೀರಶೈವ ಯುವಕ ಸಂಘ ದಿಂದ ಆಚರಿಸುತ್ತಾ ಬಂದಿತ್ತು. 1988 ರಿಂದ  ರಾಷ್ಟ್ರೀಯ ಬಸವ ದಳ ಮಾಡುತ್ತಾ ಬಂದಿದೆ.
ಈ ವರ್ಷ ಏ.10 ರಿಂದ ಬಸವ ಜಯಂತಿ ವರೆಗೆ ಪ್ರತಿದಿನ ಸಂಜೆ ಇಲ್ಲಿ ಪ್ರವಚನ ಮಾಡಲಿದೆ. ಜೊತೆಗೆ ಆರೋಗ್ಯ ತಪಾಸಣಾ ಶಿಬಿರ ಮೊದಲಾದ ಸಾಮಜ ಸೇವಾ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಿದೆಂದು  ಸಭೆಗೆ ರವಿಶಂಕರ್ ಅವರು ತಿಳಿಸಿದರು.
ಏ.19 ರಂದು ಸಮಾಜದವರೆಲ್ಲ ಬಸವ ದಳದಲ್ಲಿ ಸೇರಿ ಕಾರ್ಯಕ್ರಮದ ಮೂಲಕ ಪ್ರಸಾದ ವ್ಯವಸ್ಥೆ ಮಾಡುವ ಚಿಂತನೆ ಇದೆಂದರು.
ಸಭೆಯಲ್ಲಿ ವೀರೇಶ್ ಗಂಗಾವತಿ ಅವರು ಮಾತನಾಡಿ,ಅಲ್ಲಂ ಪ್ರಶಾಂತ್ ಅವರು ಪ್ರಸಾದ ವ್ಯವಸ್ಥೆ ಮಾಡಲಿದ್ದಾರೆ.ನಗರದ ಸಂಗನಕಲ್ಲು ರಸ್ತೆಯ ಕೆಇಬಿ ಸರ್ಕಲ್ ಗೆ ಬಸವೇಶ್ವರ ಸರ್ಕಲ್  ಎಂದು ಕಳೆದ ವರ್ಷ ಪೂಜೆ ಮಾಡಿ ನಾಮಕರಣ ಮಾಡಲಾಗಿತ್ತು. ಅಂದು ಪಾಲ್ಗೊಂಡಿದ್ದ ನಮ್ಮ ಜನ ಪ್ರತಿನಿಧಿಗಳು ಇಲ್ಲಿ ಒಂದು ವರೆ ಕೋಟಿ ರೂ ವೆಚ್ಚದಲ್ಲಿ ಅಶ್ವಾರೂಡ ಬಸವೇಶ್ವರ ಪುತ್ಥಳಿ ಸ್ಥಾಪಿಸಲಿದೆಂದು ಹೇಳಿದ್ದರು.  ಆದರೆ ಈ ವರೆಗೆ ಆಗಲಿಲ್ಲ. ದಾನಿಗಳು ಬಸವ ಪುತ್ಥಳಿ ಮಾಡಲು ಎರೆಡು ಲಕ್ಷ ರೂ ನೀಡಿದ್ದಾರೆ. ಸರ್ಕಾರದಿಂದ ಆಗದಿದ್ದರೆ ಸಮಾಜದಿಂದಲೇ ಮಾಡಲು ಮುಂದಾಗಬೇಕೆಂಬ ಅಭಿಪ್ರಾಯ ತಿಳಿಸಿದರು.
ಕೇಣಿ ಬಸಪ್ಪ ಅವರು ಮಾತನಾಡಿ, ಬಸವ ಜಯಂತಿ ಸಮಾರಂಭದ ಪ್ರಸಾದ ವ್ಯವಸ್ಥೆಗೆ 50 ಸಾವಿರ ರೂ ದೇಣಿಗೆ ನೀಡುವುದಾಗಿ ಹೇಳಿದರು.
ಹತ್ತು ದಿನಗಳ ಕಾಲ ನಗರದ ಹಲವುಕಡೆ ಭಾವಚಿತ್ರದೊಂದಿಗೆ ತೆರಳಿ ಬಸವ ಜಯಂತಿಯ ಆಚರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಸಹ ಚರ್ಚೆ ನಡೆಯಿತು.
WhatsApp Group Join Now
Telegram Group Join Now
Share This Article