ನೇಸರಗಿ: ಕೆ ಎಸ್ ಆರ್ ಟಿ ಸಿ ಸಂಸ್ಥೆಯ ನಿವೃತ್ತ ಎ ಟಿ ಐ, ಸಾರಿಗೆ ನಿಯಂತ್ರಕ, ಸಮೀಪದ ಮದನಬಾವಿ ಗ್ರಾಮದ ನಿವಾಸಿ ವೀರಪ್ಪ ದೂಳಪ್ಪ ಹುದ್ದಾರ (61) ಇವರು ಸೋಮವಾರದಂದು ಬೆಳಿಗ್ಗೆ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ನಿವೃತ್ತ, ಕಾರ್ಯನಿರತ ಕೆ ಎಸ್ ಆರ ಟಿ ಸಿ ಅಧಿಕಾರಿಗಳು, ಸಿಬ್ಬಂದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.