ಧಂಖರ್ ರಾಜೀನಾಮೆಗೆ ಆಳವಾದ ಕಾರಣ ಇನ್ನೊಂದಿದೆ: ಕಾಂಗ್ರೆಸ್

Ravi Talawar
ಧಂಖರ್ ರಾಜೀನಾಮೆಗೆ ಆಳವಾದ ಕಾರಣ ಇನ್ನೊಂದಿದೆ: ಕಾಂಗ್ರೆಸ್
WhatsApp Group Join Now
Telegram Group Join Now

ನವದೆಹಲಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧಂಖರ್ ಅವರ ರಾಜೀನಾಮೆಗೆ ಆರೋಗ್ಯ ಸಮಸ್ಯೆ ಕಾರಣವಾದರೂ ಅದಕ್ಕಿಂತ ಆಳವಾದ ಕಾರಣ ಇನ್ನೊಂದಿದೆ ಎಂದು ಕಾಂಗ್ರೆಸ್​ ತಿಳಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ವಕ್ತಾರ ಜೈರಾಮ್​ ರಮೇಶ್​, ಅಧಿವೇಶನದ ಮೊದಲ ದಿನದಂದು ಸೋಮವಾರ ನಡೆದ ಎರಡನೇ ವ್ಯವಹಾರ ಸಲಹಾ ಸಮಿತಿಯಿಂದ ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಕಿರಣ್ ರಿಜಿಜು ಗೈರಾಗಿದ್ದರು. ಸೋಮವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4.30 ರ ನಡುವೆ ಏನೋ ಗಂಭೀರ ವಿಚಾರ ಸಂಭವಿಸಿದೆ. ಎರಡನೇ ಬಿಎಸಿಗೆ ಅವರು ಉದ್ದೇಶಪೂರ್ವಕವಾಗಿ ಗೈರುಹಾಜರಾಗಿದ್ದಾರೆ ಎಂದರು.

ಕಾಂಗ್ರೆಸ್​ ರಾಜ್ಯಸಭಾ ಸಂಸದ ವಿವೇಕ್​ ಥಂಕ್​ ಕೂಡ ಧಂಖರ್​ ರಾಜಕೀನಾಮೆ ಅನಿರೀಕ್ಷಿತ ಎಂದಿದ್ದಾರೆ. ನಿನ್ನೆ ರಾಜ್ಯಸಭಾ ಕಲಾಪದ ವೇಳೆ ಅವರು ಖುಷಿಯಾಗಿದ್ದಾರೆ. ನಿನ್ನೆಯ ಎರಡು ಮಹಾಭಿಯೋಗ ಗೊತ್ತುವಳಿಗಳನ್ನು (ನ್ಯಾಯಮೂರ್ತಿ ಯಾದವ್ ಮತ್ತು ವರ್ಮಾ) ಧಂಖರ್​ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರು ಎಂದು ಎಕ್ಸ್​ನಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article