14ರಂದು ಅಂಬೇಡ್ಕರ್ ಹಬ್ಬ ಆಚರಣೆಗೆ ತೀರ್ಮಾನ

MK HasiruKranti
14ರಂದು ಅಂಬೇಡ್ಕರ್ ಹಬ್ಬ ಆಚರಣೆಗೆ ತೀರ್ಮಾನ
WhatsApp Group Join Now
Telegram Group Join Now
ಮುದ್ದೇಬಿಹಾಳ: ಏ.14ರಂದು ಸಾರ್ವತ್ರಿಕವಾಗಿ ಆಚರಿಸಲ್ಪಡುವ ಸಂವಿಧಾನ ಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವವನ್ನು ಮುದ್ದೇಬಿಹಾಳ ನಗರದಲ್ಲಿ ಅಂಬೇಡ್ಕರ್ ಹಬ್ಬವನ್ನಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಛಲವಾದಿ ಸಮಾಜದ ಮುಖಂಡರ ನೇತೃತ್ವದಲ್ಲಿ ಎಲ್ಲ ದಲಿತ ಸಮುದಾಯಗಳ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮ ಈ ಭಾಗಕ್ಕೆ ವಿಶೇಷವಾಗಿರಲಿದೆ ಎಂದು ದಲಿತ ಸಂಘಟನೆಗಳ ಮುಖಂಡರಾದ ಹರೀಶ ನಾಟೀಕಾರ, ವೈ.ಎಚ್.ವಿಜಯಕರ್, ಚನ್ನಪ್ಪ ವಿಜಯಕರ್ ಇನ್ನಿತರರು ತಿಳಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ರವಿವಾರ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು ಪ್ರತಿ ವರ್ಷವೂ ಅಂಬೇಡ್ಕರ್ ಅವರ ಜಯಂತ್ಯೋತ್ಸವವನ್ನು ಸಡಗರದಿಂದ ಆಚರಿಸುತ್ತೇವೆ. ಈ ಬಾರಿ ವಿಶೇಷವಾಗಿರಲಿ ಎಂದು ಹಬ್ಬದ ಮೆರುಗು ಕೊಡಲು ತೀರ್ಮನಿಸಿದ್ದೇವೆ. ಪಿಯುಸಿ ಮತ್ತು ಇನ್ನಿತರ ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡಿದವರು, ವಿವಿಧ ಕ್ಷೇತ್ರಗಳ ಸಾಧಕರು ಸೇರಿ ಹಲವರನ್ನು ಗೌರವಿಸಲಾಗುತ್ತದೆ. ಸಾರ್ವಜನಿಕರಿಗೆ ಅನ್ನದಾಸೋಹವನ್ನೂ ಏರ್ಪಡಿಸಲಾಗುತ್ತದೆ ಎಂದರು. ಅಂದು ಬೆಳಿಗ್ಗೆ 7ಕ್ಕೆ ಅಂಬೇಡ್ಕರ್ ವೃತ್ತದಲ್ಲಿರುವ ಡಾ|ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಹಬ್ಬದ ಕಳೆಗೆ ಚಾಲನೆ ನೀಡಲಾಗುತ್ತದೆ. ಬೆಳಿಗ್ಗೆ 9 ರಿಂದ ಸಂಜೆ 6 ಘಂಟೆಯವರೆಗೂ ಪುರಸಭೆ ಎದುರಿಗೆ ಸಾರ್ವಜನಿಕರಿಗೆ ದಾಸೋಹ ಇರಲಿದೆ. ಮದ್ಯಾಹ್ನ 3 ಘಂಟೆಗೆ ನೇತಾಜಿನಗರದಿಂದ ದ್ಯಾಮವ್ವನ ಗುಡಿ, ಬಸವೇಶ್ವರ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಡಾ|ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಲಿದೆ. ನೇತ್ರ ಮತ್ತು ಆರೋಗ್ಯ ಉಚಿತ ತಪಾಸಣೆ ಶಿಬಿರ ಇರಲಿದೆ. ರಾತ್ರಿ 8ಕ್ಕೆ ಸನ್ಮಾನ ಸಮಾರಂಭ ಗಣ್ಯರ ಸಮ್ಮುಖ ನೆರವೇರಲಿದೆ ಎಂದರು. ಈ ಸಂದರ್ಭ ಮುಖಂಡರಾದ ಸಾಬಣ್ಣ ಅಜಮನಿ, ಶಿವಪುತ್ರಪ್ಪ ಅಜಮನಿ, ಶ್ರೀಕಾಂತ ಚಲವಾದಿ, ಶಿವು ಶಿವಪೂರ, ಪ್ರಶಾಂತ ಕಾಳೆ, ಯಲ್ಲಪ್ಪ ಅಜಮನಿ, ಮಹಾಂತೇಶ ಚಲವಾದಿ, ಪಾವಡಪ್ಪ ದೊಡಮನಿ, ಶಂಕರ ಅಜಮನಿ, ಪ್ರಕಾಶ್ ಸರೂರ, ದೇವರಾಜ ಹಂಗರಗಿ, ಮಂಜು ತಿಳಗೂಳ, ವಿಕ್ರಮ್ ಮುದ್ದೇಬಿಹಾಳ, ಶಶಿಕುಮಾರ ಹಂಗರಗಿ, ರಾಜು ಬಿ.ಎನ್., ಮಂಜು ಚಲವಾದಿ ಸೇರಿ ಹಲವರು ಇದ್ದರು.
WhatsApp Group Join Now
Telegram Group Join Now
Share This Article