ಗರಗ ಗ್ರಾಮದಲ್ಲಿ ಪಿಓಪಿ ಗಣಪತಿ ವಿಗ್ರಗಳು ವಶಕ್ಕೆ; ಕ್ರಿಮಿನಲ್ ಪ್ರಕರಣ ದಾಖಲಿಸಲು ಡಿಸಿ ದಿವ್ಯ ಪ್ರಭು ಸೂಚನೆ

Ravi Talawar
ಗರಗ ಗ್ರಾಮದಲ್ಲಿ ಪಿಓಪಿ ಗಣಪತಿ ವಿಗ್ರಗಳು ವಶಕ್ಕೆ; ಕ್ರಿಮಿನಲ್ ಪ್ರಕರಣ ದಾಖಲಿಸಲು ಡಿಸಿ ದಿವ್ಯ ಪ್ರಭು ಸೂಚನೆ
WhatsApp Group Join Now
Telegram Group Join Now
ಧಾರವಾಡ :  ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿರುವ ಪಿಓಪಿ ಪತ್ತೆ ಕಾರ್ಯಪಡೆಯಿಂದ ಗರಗ ಗ್ರಾಮದಲ್ಲಿ ಇಂದು ಸಂಜೆ ದಿಢೀರ ದಾಳಿ ಮಾಡಿ, ಅಪಾರ ಪ್ರಮಾಣದ ಪಿಓಪಿ ಗಣಪತಿ ವಿಗ್ರಹಗಳನ್ನು ವಶಕ್ಕೆ ಪಡೆಯಲಾಗಿದೆ. ನಿಷೇಧಿತ ಪಿಓಪಿ ಗಣೇಶ ವಿಗ್ರಹಗಳ ದಾಸ್ತಾನು ಹೊಂದಿದ್ದ ಮಾಲೀಕನ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಕಾಯ್ದೆ  ಹಾಗೂ ಉಚ್ಚನ್ಯಾಯಲಯದ ಆದೇಶದ ಅನುಸಾರ ಕ್ರಮಿನಲ್ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಸರಿ ದಿವ್ಯ ಪ್ರಭು ಅವರು ತಿಳಿಸಿದರು.
 ಧಾರವಾಡ ನಗರದ ಕಲಾಭವನ ಮೈದಾನದಲ್ಲಿ, ದಾಳಿಯಲ್ಲಿ ವಶಪಡಿಸಿಕೊಂಡ ಪಿಓಪಿ ಗಣಪತಿ ವಿಗ್ರಹಗಳನ್ನು ದಾಸ್ತಾನಿಕರಿಸುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಳೆದ ವರ್ಷದಿಂದ ಜಿಲ್ಲೆಯಲ್ಲಿ ಪಿಓಪಿ ಗಣಪತಿ ವಿಗ್ರಹಗಳು ಜಿಲ್ಲೆಗೆ ಬರದಂತೆ ತಡೆಯಲು ಪೊಲೀಸ್ ಇಲಾಖೆಯಿಂದ ಜಿಲ್ಲೆಯ ಗಡಿ ಭಾಗದಲ್ಲಿ ಮತ್ತು ಮಹಾನಗರದ ಗಡಿಗಳಲ್ಲಿ  ಚೆಕ್ ಪೊಸ್ಟ್ ತೆರೆಯಲಾಗುತ್ತಿದೆ.
ಹಬ್ಬದ ಸಂದರ್ಭದಲ್ಲಿ ಇಂತಹ ಪಿಓಪಿ ವಿಗ್ರಹಗಳನ್ನು ಜಿಲ್ಲೆಯ ಪ್ರವೇಶಕ್ಕೆ ಹಾಗೂ ಮಾರಾಟಕ್ಕೆ ಅವಕಾಶವಾಗುವದಿಲ್ಲ ಎಮದು ಭಾವಿಸಿ, ಈಗಲೇ ಗ್ರಾಮೀಣ ಭಾಗದಲ್ಲಿ ಮತ್ತು ನಗರದ ಕೆಲವು ಪ್ರದೇಶಗಳಲ್ಲಿ ಪಿಓಪಿ ವಿಗ್ರಹ ಸಂಗ್ರಹ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ ಎಂದು ಅವರು ಹೇಳಿದರು.
*ಗರಗ ಗ್ರಾಮದಲ್ಲಿ 184 ಪಿಓಪಿ ವಿಗ್ರಹ ವಶಕ್ಕೆ:* ಸಾರ್ವಜನಿಕರು ಕರೆ ಮಾಡಿ ನನಗೆ ಮಾಹಿತಿ ನೀಡಿದ್ದರಿಂದ, ಇಂದು ಮಧ್ಯಾಹ್ನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ, ಗ್ರಾಮ ಪಂಚಾಯತ, ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ರಚಿಸಿ, ಈ ಕಾರ್ಯಪಡೆ ಮೂಲಕ ದಿಡೀರ್ ದಾಳಿ ಮಾಡಲು ಸೂಚಿಸಲಾಗಿತ್ತು.
ಅದರಂತೆ ಕಾರ್ಯಪಡೆಯ ಸದಸ್ಯರು ಗರಗ ಗ್ರಾಮದ ವಿನಾಯಕ ಕಾಳಪ್ಪ ಪತ್ತಾರ ಎಂಬುವರ ಮಾಲೀಕತ್ವದಲ್ಲಿ ದೊಡ್ಡ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಸುಮಾರು 184 ಪಿಓಪಿ ಗಣಪತಿ ವಿಗ್ರಹಗಳನ್ನು ದಾಸ್ತಿಕರಿಸಿ, ಅವುಗಳಿಗೆ ಪೈನಲ್ ಚ್ ಅಪ್ ಮತ್ತು ರಾಸಾಯನಿಕ ಮಿಶ್ರಿತ ಬಣ್ಣ ಮಾಡುವ ಕಾರ್ಯ ಮಾಡಲಾಗುತಿತ್ತು. ಈ ಸಂದರ್ಬದಲ್ಲಿ ದಿಢೀರ್ ದಾಳಿ ಮಾಡಿದ ನಮ್ಮ ಕಾರ್ಯಪಡೆಯ ಸದಸ್ಯರು ಗರಗ ಗ್ರಾಮದ ಶಿವೋಜಿ ಬಡಾವಣೆಯಲ್ಲಿ 75 ವಿಗ್ರಹಗಳು ಮತ್ತು ಸಂಗೊಳ್ಳಿ ರಾಯಣ್ಣ ಬಡಾವಣೆಯಲ್ಲಿ 109  ವಿಗ್ರಹಗಳು ದೊರೆತಿದ್ದು, ವಶಕ್ಕೆ ಪಡೆಯಲಾಗಿದೆ. ಆರೋಪಿ ವಿನಾಯಕ ಪತ್ತಾರ ಎಂಬುವವರು ಪಿಓಪಿ ವಿಗ್ರಹಗಳ ಸಗಟು ಮತ್ತು ಬಿಡಿ ಮಾರಾಟಗಾರರು ಆಗಿದ್ದಾರೆ ಎಂಬುದು ತಿಳಿದು ಬಂದಿದೆ.
 ಮತ್ತು ಈ ಎಲ್ಲ ಪಿಓಪಿ ವಿಗ್ರಹಗಳನ್ನು ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದಿಂದ ತರಲಾಗಿತ್ತು ಎಂದು ಆರೋಪಿ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾನೆ. ಈ ಕುರಿತು ಸೂಕ್ತ ತನಿಖೆ ಮಾಡಿ, ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ವಶಪಡಿಸಿಕೊಂಡ ಪಿಓಪಿ ಗಣಪತಿ ವಿಗ್ರಹಗಳನ್ನು ಒಂದು ಲಾರಿ, ಒಂದು ಟಿಪ್ಪರ ಮತ್ತು ಒಂದು ಟ್ರ್ಯಾಕ್ಟರ್ ದಲ್ಲಿ ತೆಗೆದುಕೊಂಡು ಬಂದು ಕಲಾಭವನದಲ್ಲಿ ಶೇಖರಿಸಲಾಗಿದೆ.
ಈ ಕುರಿತು ಮುಂದಿನ ದಿನಗಳಲ್ಲಿ ನಿಯಮಾನುಸಾರ ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
*ಪೂಜೆಗೆ ಮಣ್ಣಿನ ಗಣಪತಿ ಬಳಸಲು ಸಾರ್ವಜನಿಕರಲ್ಲಿ ಡಿಸಿ ಮನವಿ*: ಮಣ್ಣಿನ ಗಣಪತಿ ಪೂಜೆಗೆ ಶ್ರೇಷ್ಠ ಮತ್ತು ಪರಿಸರ ಸ್ನೇಹಿ ಆಗಿರುತ್ತದೆ. ಮುಂಬರುವ ಗಣೇಶ ಚತುರ್ಥಿಯಲ್ಲಿ ಗಣೇಶ ಪೂಜೆಗಾಗಿ ಸಾರ್ವಜನಿಕರು ಹಾಗೂ ಗಣೇಶ ಉತ್ಸವ ಸಮಿತಿಗಳು, ಮಂಡಳಗಳು ಮಣ್ಣಿನ ಗಣಪತಿಗಳನ್ನು ಬಳಸಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮನವಿ ಮಾಡಿದರು.
ಪಿಓಪಿ ಗಣೇಶ ವಿಗ್ರಹಗಳು ಪರಿಸರಕ್ಕೆ ಹಾನಿಕಾರಕವಾಗಿವೆ. ಅವು ನೀರಿನಲ್ಲಿ‌ ಕರಗದೆ ಮಣ್ಣು, ಜಲ, ಜಲಮೂಲಗಳನ್ನು ಮಲೀನ ಮಾಡುತ್ತವೆ. ಆದ್ದರಿಂದ ಸಾರ್ವಜನಿಕರು ಪಿಓಪಿ ವಿಗ್ರಹಗಳನ್ನು ತಿರಸ್ಕರಿಸಬೇಕು ಎಂದು ಹೇಳಿದರು.
*ಕಾರ್ಯಪಡೆಗಳಿಂದ ಕಾರ್ಯಾಚರಣೆ:* ಗಣೇಶ ಹಬ್ಬ ಸಮೀಪಿಸುತ್ತಿರುವದರಿಂದ ವಿವಿಧ ಇಲಾಖೆಗಳ ಸಮನ್ವಯ ಸಭೆ ಜರುಗಿಸಿ, ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದ ಕಾರ್ಯಪಡೆಗಳನ್ನು ಕ್ರಿಯಾಶೀಲ ಗೊಳಿಸಲಾಗುತ್ತದೆ.
ಸಾರ್ವಜನಿಕರ ಮಾಹಿತಿ, ಅನಿರೀಕ್ಷಿತ ಭೇಟಿ, ದಿಢೀರ್ ದಾಳಿ ಮೂಲಕ ನಿಷೇಧಿತ ಪಿಓಪಿ ಗಣೇಶ ವಿಗ್ರಹ ಕಙಡುಬಂದಲ್ಲಿ ವಶಕ್ಕೆ ಪಡೆಯಲಾಗುತ್ತದೆ ಎಂದು ಅವರು ಹೇಳಿದರು.
ಮಹಾನಗರಪಾಲಿಕೆ, ನಗರ, ಪ್ಟಣ ಮತ್ತು ಗ್ರಾಮ ಮ್ಟದಲ್ಲಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಈಗಿನಿಂದಲೇ ಹಮ್ಮಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ ಎಂದು ಜಿಲ್ಲಾ್ಇಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಹಿರಿಯ ಅಧಿಕಾರಿ  ಜಗದೀಶ ಐ.ಎಚ್ ಅವರು, ಮಾತನಾಡಿ ಇಂದಿನ ದಾಳಿಯ ವಿವರ ತಿಳಿಸಿದರು.
ಈ ಸಂದರ್ಭದಲ್ಲಿ ಗರಗ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಶಿಧರ ಗಂಧದ, ಮಹಾನಗರಪಾಲಿಕೆ ಕಂದಾಯ ಅಧಿಕಾರಿ ಗಂಗಾಧರ ಮನಕಟ್ಟಿಮಠ, ಗರಗ ಪಿಎಸ್ ಐ ಸಿದ್ರಾಮ ಉನ್ನದ, ಗ್ರಾಮ ಆಡಳಿತ ಅಧಿಕಾರಿ ಮಹೇಶ ನಾಗವ್ವನವರ,  ಕರ್ನಾಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿಗಳಾದ ಮುನಾಫ್ ಸೌದಾಗರ, ಶಶಿಧರ ಕೋಡಿಹಳ್ಳಿ, ವಿಠ್ಠಲ ದಂಡಿಗದಾಸರ ಸೇರಿದಂತೆ ಇತರರು ಇದ್ದರು.
WhatsApp Group Join Now
Telegram Group Join Now
Share This Article