ಬಳ್ಳಾರಿ,ಜೂ೧೯.:ಕಾಂಗ್ರೆಸ್ ಮುಖಂಡರಾದ ಹೆಚ್.ಚಂದ್ರಕಲಾ ಅವರು ತಮ್ಮ ಜನ್ಮದಿನವನ್ನು ಈ ಬಾರಿ ವಿಭಿನ್ನ ರೀತಿಯಲ್ಲಿ ಆಚರಿಸಿದರು. ಸಾಮಾಜಿಕ ಜವಾಬ್ದಾರಿ ಮತ್ತು ಮನುಷ್ಯತ್ವದ ಸೂಚನೆಯಾಗಿ ಅವರು ಬಳ್ಳಾರಿ ನಗರದ ಗಾಂಧಿನಗರದಲ್ಲಿರುವ ಸೂರ್ಯನಿವಾಸ್ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಹಿರಿಯ ನಾಗರಿಕರ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.ಈ ವೇಳೆ ವೃದ್ಧರಿಗೆ,ಹಣ್ಣು, ಸಿಹಿ ತಿಂಡಿಗಳನ್ನು ವಿತರಿಸಿ ಅನ್ನ ಸಂತರ್ಪಣೆ ನೆರವೇರಿಸಲಾಯಿತು .
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಕಲಾ “ನಮ್ಮ ಜೀವನದಲ್ಲಿ ಈ ದಿನಗಳು ವಿಶೇಷ. ಆದರೆ ಜೀವನದ ಮೂಲ ಅರ್ಥವನ್ನು ಗ್ರಹಿಸಲು, ನಾವು ಸಮಾಜದ ಬಗೆಗೆ ಹೊಣೆಗಾರಿಕೆಯಿಂದಿರಬೇಕು. ಹಿರಿಯರ ಆಶೀರ್ವಾದ ಪಡೆಯುವುದರಿಂದ ಆ ದಿನ ನಿಜವಾದ ಆಚರಣೆ ಆಗುತ್ತದೆ.“ಬುದ್ದಿಮತ್ತೆಯ,ಅನುಭವದ ಪ್ರತೀಕವಾಗಿರುವ ಹಿರಿಯರ ಆಶೀರ್ವಾದವಿದೆಂದರೆ ಅದು ನಮ್ಮ ಜೀವನಕ್ಕೆ ಆಶಾಕಿರಣ” ಎಂದು ಹೆಚ್.ಚಂದ್ರಕಳ ಅಭಿಪ್ರಾಯ ಪಟ್ಟರು .
ಈ ಸಂದರ್ಭದಲ್ಲಿ ಆಶ್ರಮದ ವ್ಯವಸ್ಥಾಪಕರು ಮಾತನಾಡುತ್ತಾ, ಚಂದ್ರಕಳ ಅವರು ಕೆಲವು ವರ್ಷಗಳಿಂದಲೇ ನಮ್ಮ ಆಶ್ರಮಕ್ಕೆ ಆಗಾಗ ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷದಂತೆ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸಿದ್ದು ನಮಗೆ ಸಂತೋಷದ ಸಂಗತಿ,”ಎಂದು ಹರ್ಷ ವ್ಯಕ್ತಪಡಿಸಿದರುಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಆರ್. ಗುರುಮೂರ್ತಿ,ಕರ್ನಾಟಕ ಬಹುಜನ ದಲಿತ ಹೋರಾಟ ಸಮಿತಿ ಸಂಘಟನೆಯ ಸಂಸ್ಥಾಪಕರಾಧ್ಯಕ್ಷರಾದ ರಾಜೇಶ್, ಸಮಾಜ ಸೇವಕರು ಭಾವಿ ಶಾಸಕರಾದ,ಜಿ.ಕೆ.ಸ್ವಾಮಿ(ವಿಜಯ್) ಕರಾಟೆ ತರಬೇತುದಾರರಾದ ಕಟ್ಟೆ ಸ್ವಾಮಿ,ಕೆಪಿಎಸ್ ಸಂಘಟನೆಯ ರಾಜ್ಯಾಧ್ಯಕ್ಷರಾದ ರತ್ನಯ್ಯ,ಮಾನಪ್ಪ, ದಲಿತ ಮುಖಂಡರಾದ ಭಂಡಾರಿ ಶ್ರೀನಿವಾಸ್,ಶ್ರೀಧರ ಶೆಟ್ಟಿ, ಕರ್ನಾಟಕ ಪದವೀಧರ ವೇದಿಕೆ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೆ.ಕೆ.ಹಾಳ್ ಗೋವರ್ಧನ,ಅಸ್ಲಾಂ ಭಾಷ,ಕುಸುಮ,ಯುವರಾಜ, ಸ್ನೇಹಿತರು ಸೇರಿದಂತೆ ಇನ್ನಿತರರಿದ್ದರು.
ವೃದ್ಧಾಶ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಚಂದ್ರಕಳ ಜನ್ಮದಿನಾಚರಣೆ
