ಕಾಂಗ್ರೆಸ್ ಸರ್ಕಾರ ಎಸ್.ಟಿ. ಅನುದಾನ ದುರ್ಬಳಕೆ: ಬಿಜೆಪಿ  ಬೃಹತ್ ಪ್ರತಿಭಟನೆ

Ravi Talawar
ಕಾಂಗ್ರೆಸ್ ಸರ್ಕಾರ ಎಸ್.ಟಿ. ಅನುದಾನ ದುರ್ಬಳಕೆ:  ಬಿಜೆಪಿ  ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now
ಬೆಳಗಾವಿ. ಎಸ್ ಟಿ ಸಮುದಾಯಕ್ಕೆ ಮೀಸಲಾಗಿದ್ದ ಅನುದಾನವನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದ್ದು ದಲಿತರಿಗೆ ಅನ್ಯಾಯ ಮಾಡಿದ್ದೂ ಅದಕ್ಕಾಗಿ  ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕೆಂದು  ಬೆಳಗಾವಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷರಾದ  ಶುಭಾಸ  ಪಾಟೀಲ ಹೇಳಿದರು.
      ಅವರು ಶುಕ್ರವಾರದಂದು ನಡೆದ ಎಸ್ ಟಿ ಸಮುಧಾಯದ ಅನುಧಾನವನ್ನು ದುರುಪಯೋಗ ಪಡೆದುಕೊಂಡು ದಲಿತರ ಅನುದಾನವನ್ನು ಬೇರೆಯವರಿಗೆ ಕೊಟ್ಟು ಅವಮಾಣಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದ ಸರ್ದಾರ ಗ್ರೌಂಡನಲ್ಲಿ ಆಯೋಜಿಸಲಾಗಿದ್ದ  ಬಿಜೆಪಿ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
    ಈ ವೇಳೆ   ಮಾಜಿ ಶಾಸಕ ಸಂಜಯ್ ಪಾಟೀಲ ಮಾತನಾಡಿ ಎಸ್ ಟಿ ನಿಗಮದಲ್ಲಿನ ಹಣವನ್ನು ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಮತ್ತು ಅಧಿಕಾರಿಗಳು ಸೇರಿ ಲೂಟಿ ಹೊಡೆದಿದ್ದಾರೆ ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ಮಾತನಾಡಿ ಕಾಂಗ್ರೆಸ್ ಪಕ್ಷವು ಪರಿಶಿಷ್ಟ ಜಾತಿ ಮತ್ತು ಪಂಗಡ  ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ ಕಾಂಗ್ರೆಸ್ ಸರ್ಕಾರ ಎಂದರೆ ಜನರ ದುಡ್ಡನ್ನು ಲೂಟಿ ಮಾಡುವ ಸರ್ಕಾರ ಎಂದು ಹೇಳಿದರು.
      ಈ ಸಂದರ್ಭದಲ್ಲಿ ಮಹಾನಗರ ಜಿಲ್ಲಾಧ್ಯಕ್ಷರಾದ ಶ್ರೀಮತಿ ಗೀತಾ ಸುತಾರ, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ, ಸತೀಶ ಅಪ್ಪಾಜಿಗೊಳ ,ಶಾಸಕರಾದ ವಿಠ್ಠಲ್ ಹಲಗೆಕರ, ಮಾಜಿ ಶಾಸಕರಾದ  ಮಹಾಂತೇಶ ದೊಡಗೌಡರ, ಡಾ.ವಿಶ್ವನಾಥ ಪಾಟೀಲ,  ಮಹಾದೇವಪ್ಪ ಯಾದವಾಡ , ಎಂ ಬಿ ಜಿರಲಿ,  ರಾಜೇಶ್ ನೆರಲಿ, ಎಸ್ ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ, ಬಸವರಾಜ ಹುಂದ್ರಿ,  ಡಾ.  ರವಿ ಪಾಟೀಲ್,  ಲಕ್ಷ್ಮಣ ತಪಶಿ, ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಯಲ್ಲಪ್ಪ ಕುರಿ ಪ್ರಮುಖ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article