ಜೆ ಎಸ್ ಡಬ್ಲ್ಯೂ ಉದ್ಯೋಗ ನೀಡಿಕೆಯಲ್ಲಿ  ವಂಚನೆ: ಕಂಪನಿ, ಜಿಲ್ಲಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು 

Ravi Talawar
ಜೆ ಎಸ್ ಡಬ್ಲ್ಯೂ ಉದ್ಯೋಗ ನೀಡಿಕೆಯಲ್ಲಿ  ವಂಚನೆ: ಕಂಪನಿ, ಜಿಲ್ಲಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು 
WhatsApp Group Join Now
Telegram Group Join Now
 ಬಳ್ಳಾರಿ ಜೂನ್ 25.  ಯಾವುದೇ ಕೈಗಾರಿಕೆ ಅಥವಾ ಕಾರ್ಖಾನೆ ಸ್ಥಾಪನೆಯ ಸಂದರ್ಭದಲ್ಲಿ ಜಮೀನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಜಮೀನು ಮಾಲೀಕರಿಗೆ ಪರಿಹಾರ ಮತ್ತು ಉದ್ಯೋಗ ನೀಡಬೇಕೆಂಬ ನಿಯಮವಿದೆ, ಈ ರೀತಿಯಾಗಿ ಜೆ ಎಸ್ ಡಬ್ಲ್ಯೂ ಕಾರ್ಖಾನೆ ನಮ್ಮ ಜಮೀನನ್ನು ರಸ್ತೆಗಾಗಿ ವಶಪಡಿಸಿಕೊಂಡು ಇಂದಿಗೆ ಸುಮಾರು ಐದು ವರ್ಷಗಳಾಗಿವೆ, ನಮ್ಮ ಜಮೀನಿಗೆ ಕೇವಲ ಪರಿಹಾರವನ್ನು ಮಾತ್ರ  ನೀಡಿರುವ ಕಾರ್ಖಾನೆ ನಮ್ಮ ಕುಟುಂಬಕ್ಕೆ ಉದ್ಯೋಗವನ್ನು ನೀಡದೇ ವಂಚನೆ ಮಾಡುತ್ತಾ ಬರುತ್ತಿದೆ ಕಾರಣ ತಾವುಗಳು ನಮಗೆ ನ್ಯಾಯ ಕೊಡಿಸಬೇಕೆಂದು  ಕುಡುತಿನಿ ಗ್ರಾಮದ ಭೂಸಂತ್ರಸ್ತ ರೈತರು ಇಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು.
 ಕುಡುತಿನಿ ಗ್ರಾಮದ ಸುಮಾರು ಹತ್ತು ಕುಟುಂಬಗಳ ರೈತರು ಇಂದು ಲೋಕಾಯುಕ್ತ ಕಚೇರಿಗೆ  ದೂರ ಸಲ್ಲಿಸಿ ಮಾಧ್ಯಮದ ಜೊತೆ ಮಾತನಾಡಿ,  ಜಮೀನು ಕಳೆದುಕೊಂಡ ರೈತನ ಮಗ  ಸಿ ಆನಂದ್ ಕುಮಾರ್, ಜೆ ಎಸ್ ಡಬ್ಲ್ಯೂ ಕಾರ್ಖಾನೆ ನಮ್ಮ ಜಮೀನನ್ನು ವಶಪಡಿಸಿಕೊಂಡಿದ್ದು  ನಮ್ಮ ಕುಟುಂಬಕ್ಕೆ ಕೈಗಾರಿಕಾ ಕಾನೂನು ಪ್ರಕಾರ ಒಂದು ಉದ್ಯೋಗವನ್ನು ನೀಡಬೇಕಾಗಿರುತ್ತದೆ ಆ ಉದ್ಯೋಗಕ್ಕಾಗಿ ನಾವು ಪದೇ ಪದೇ  ಅಲೆದು ಅಲೆದು ನಮಗೆ ಸಾಕಾಗಿ ಹೋಗಿ ಮೇಲ್ಕಂಡ 10 ಕುಟುಂಬಗಳ ರೈತರ ಮನೆಗೆ ಒಂದರಂತೆ 10 ಉದ್ಯೋಗಗಳನ್ನು ಕೊಡಿಸಬೇಕೆಂದು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ದೂರನ್ನು ಸಲ್ಲಿಸಿಕೊಂಡಿದ್ದವು ನಮ್ಮ ದೂರಿನ ಅನ್ವಯ ಜಿಲ್ಲಾಧಿಕಾರಿಗಳು ಜಿಂದಾಲ್ ಕಾರ್ಖಾನೆಗೆ ಉದ್ಯೋಗ ನೀಡುವಂತೆ ಪತ್ರವನ್ನು ಸಹ ಬರೆದಿರುತ್ತಾರೆ ಈ ಪತ್ರಕ್ಕೆ ಕ್ಯಾರೆ ಎನ್ನದ ಜೆ ಎಸ್. ಡಬ್ಲ್ಯೂ ಅಧಿಕಾರಿಗಳು ಇಂದಿಗೂ ಸಹ ನಮಗೆ ಉದ್ಯೋಗವನ್ನು ನೀಡದೆ ಆಗ ಈಗ ಎಂದು ವಂಚಿಸುತ್ತಾ ಬರುತ್ತಿದ್ದಾರೆ.  ಜಿಲ್ಲಾಧಿಕಾರಿಗಳ ಆದೇಶಕ್ಕೂ  ಸಹ ಮಣಿಯದ ಜಿಂದಾಲ್ ಅಧಿಕಾರಿಗಳು ಇಲ್ಲಿಯವರೆಗೂ ನಮಗೆ ಉದ್ಯೋಗವನ್ನು ಒದಗಿಸಿರುವುದಿಲ್ಲ ಇದರಿಂದ ನಮ್ಮ ಕುಟುಂಬ ನಡೆಸುವುದು ಬಹಳ ದುಃಸ್ತರವಾಗಿದೆ.
 ಜಿಲ್ಲಾಧಿಕಾರಿಗಳು ಸಹ ನಮಗೆ ನ್ಯಾಯ ಒದಗಿಸಿ ಕೊಡದೆ ನಿರ್ಲಕ್ಷ್ಯ ಧೋರಣೆ ತಳೆದಿರುತ್ತಾರೆ, ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿ, ಡಿ ವೈ ಎಸ್‌ಪಿ  ಇವರುಗಳು ಜಿಂದಾಲ್ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ನಮಗೆ ಅನುಮಾನ ಉಂಟು ಮಾಡಿದೆ ಎಂದು ಅವರು ಅನುಮಾನವನ್ನು ವ್ಯಕ್ತಪಡಿಸಿದರು.
  ಕಾರಣ ನಮ್ಮ ಕುಟುಂಬಕ್ಕೆ ಉದ್ಯೋಗವನ್ನು ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮತ್ತು ಜಿಂದಾಲ್ ಕಾರ್ಖಾನೆ ಅಧಿಕಾರಿಗಳ ವಿರುದ್ಧ 10 ಕುಟುಂಬಗಳ ಸದಸ್ಯರು ಇಂದು ಲೋಕಾಯುಕ್ತ ಕಚೇರಿಯಲ್ಲಿ ದೂರು ಸಲ್ಲಿಸಿದರು. ದೂರನ್ನು ಪಡೆದುಕೊಂಡ ಲೋಕಾಯುಕ್ತ ಅಧಿಕಾರಿಗಳು ಈ ದೂರು ಜಿಲ್ಲಾಧಿಕಾರಿಗಳ ಮೇಲೆ ಇರುವುದರಿಂದ ನಾವು ವಿಚಾರಣೆ ನಡೆಸಲು ಅವಕಾಶವಿಲ್ಲ ನಿಮ್ಮ ದೂರನ್ನು ರಾಜ್ಯ ಲೋಕಾಯುಕ್ತರಿಗೆ ರವಾನಿಸಿ ತಮಗೆ ನ್ಯಾಯ ಕೊಡಿಸುವದಾಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ತಿಳಿಸಿದರು.
 ಇದಕ್ಕೂ ಮುನ್ನ ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ನಾವು ಜಿಂದಾಲ್ ಕಾರ್ಖಾನೆ ಅಧಿಕಾರಿಗಳ ವಿರುದ್ಧ ದೂರನ್ನು ದಾಖಲಿಸುತ್ತೇವೆ . ಈ ದೂರಿನ ಅನ್ವಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ನಮಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ.  ನಮಗೆ ನ್ಯಾಯ ಕೊಡಿಸುವಂತೆ ಕುಡುತಿನಿ  ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತೇವೆ ಆಗ ಎಫ್ಐರ್ ಕೂಡ ದಾಖಲಾಗಿರುತ್ತದೆ. ಎಫ್ ಐ ಆರ್ ನೋಂದಣಿಯಾಗಿ ಹಲವು ದಿನ ಕಳೆದರೂ ಸಹ ಇಲ್ಲಿಯವರೆಗೆ ಪೊಲೀಸರು ಜಿಂದಾಲ್ ಅಧಿಕಾರಿಗಳನ್ನು ಬಂಧಿಸಿರುವುದಿಲ್ಲ, ಮತ್ತು ಎಫ್ ಐ ಆರ್ ಆದ ಅಧಿಕಾರಿಗಳು ಬೇಲ್  ತೆಗೆದುಕೊಳ್ಳದೆ ರಾಜಾರೋಷವಾಗಿ  ಸಮಾಜದಲ್ಲಿ ತಿರುಗಾಡುತ್ತಿದ್ದಾರೆ, ಅಷ್ಟೇ ಅಲ್ಲದೆ ಒಂದು ತಿಂಗಳ ಒಳಗೆ ಎಫ್ ಐ ಆರ್ ದಾಖಲಾದ ವ್ಯಕ್ತಿಗಳಿಗೆ ಬಿ ರಿಪೋರ್ಟ್ ಹಾಕಿ ಮೊಕದ್ದಮೆಯನ್ನು ಮುಕ್ತಾಯಗೊಳಿಸಿರುತ್ತಾರೆ.   ಇದು ದಲಿತರನ್ನು ಕಡೆಗಣಿಸುವ ಪೊಲೀಸರ ದೌರ್ಜನ್ಯವೇ ಸರಿ. ಆದ್ದರಿಂದ ತಾವುಗಳು ಈ ವಿಷಯದ ಬಗ್ಗೆ ದೂರ ದಾಖಲಿಸಿಕೊಂಡು ನಮಗೆ ನ್ಯಾಯ ಕೊಡಿಸಬೇಕೆಂದು ಈ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದರಾಜು  ಅವರನ್ನು ಮನವಿ ಮಾಡಿದರು.
WhatsApp Group Join Now
Telegram Group Join Now
Share This Article