ಸಹಕಾರ ಸಂಘಗಳು ಸಾಮಾಜಿಕ ಕಾರ್ಯಮಾಡಬೇಕು – ನ್ಯಾಯವಾದಿ ಪಿ ಆರ್ ಚೌಗಲಾ.

Hasiru Kranti
ಸಹಕಾರ ಸಂಘಗಳು ಸಾಮಾಜಿಕ ಕಾರ್ಯಮಾಡಬೇಕು – ನ್ಯಾಯವಾದಿ ಪಿ ಆರ್ ಚೌಗಲಾ.
WhatsApp Group Join Now
Telegram Group Join Now

ಹುಕ್ಕೇರಿ : ಸಹಕಾರಿ ಸಂಘಗಳ ಸಾಮಾಜಿಕ ವಾಗಿ ಕಾರ್ಯ ನಿರ್ವಹಿಸ ಬೇಕು ಎಂದು ಹಿರಿಯ ನ್ಯಾಯವಾದಿ , ಹುಲ್ಲೋಳಿ ಅರಿಹಂತ ಸಹಕಾರಿ ಸಂಘದ ನಿರ್ದೆಶಕ ಪಿ ಆರ್ ಚೌಗಲಾ ಹೇಳಿದರು.

ಹುಕ್ಕೇರಿ ತಾಲೂಕಿನ ಹುಲ್ಲೋಳಿ ಸಹಕಾರಿ ಸಂಘವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಾ ಸಂಸ್ಥೆಯ ಮೂಲಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೋತೆಗೆ ವಿಶೇಷ ಶಿಬಿರಗಳನ್ನು ಆಯೋಜಿಸಿ ಅತ್ಯುತ್ತಮ ಸಹಕಾರಿ ಸಂಘ ಎಂದು ಗುರುತಿಸಿದೆ ಕಾರಣ ಸಹಕಾರಿ ಸಂಸ್ಥೆಯ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸ ಬೇಕು ಎಂದರು.

ಮಾದ್ಯಮಗಳೊಂದಿಗೆ ಮಾತನಾಡಿದ ಸಂಸ್ಥೆಯ ಅದ್ಯಕ್ಷ ಭರಮಪ್ಪಾ ಚೌಗಲಾ ಸಹಕಾರಿ ಸಂಸ್ಥೆಗಳು ಪ್ರಗತಿ ಪಥದಲ್ಲಿ ಸಾಗಲು ಗ್ರಾಹಕರ‌ ಮತ್ತು ಸಿಬ್ಬಂದಿಗಳ ಕಾರ್ಯದೊಂದಿಗೆ ಪತ್ರಿಕಾ ಮಾದ್ಯಮಗಳ ಸಲಹೆ ಸೂಚನೆಗಳು ಸಹ ಅವಶ್ಯಕವಾಗಿವೆ ಎಂದರು.

ನಿರ್ದೆಶಕ ರವಿಂದ್ರ ಚೌಗಲಾ ಮಾತನಾಡಿ ಆಡಳಿತ ಮಂಡಳಿ ಸಭೆಗಳನ್ನು ಜರುಗಿಸಿ ಸಾಲದ ಸತ್ಯಾ ಸತ್ಯತೆ ಅರಿತು ಸಾಲ ನೀಡಿದರೆ ಮಾತ್ರ ಸಂಸ್ಥೆಗಳು ಉಳಿಯಲು ಸಾಧ್ಯ, ಏಕಪಕ್ಷೀಯವಾಗಿ ನಿರ್ಣಯ ಅಪಾಯಕಾರಿ ಎಂದರು.

ಉಪಾಧ್ಯಕ್ಷ ಬಾಹುಬಲಿ ನಾಗನೂರಿ ಮಾತನಾಡಿ ಸಂಸ್ಥೆಯ ಪ್ರಗತಿ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ರಾಮಪ್ಪಾ ಗೊಟೂರಿ, ಜಿನ್ನಪ್ಪಾ ಸಪ್ತಸಾಗರ, ಅಶೋಕ ಚೌಗಲಾ, ಪ್ರಕಾಶ ಚೌಗಲಾ, ಮಾಯಪ್ಪಾ ಹೊಳೆಪ್ಪಗೋಳ, ಬಸವರಾಜ ಪಾಟೀಲ, ಬಾಳಪ್ಪಾ ಸಂಕೇಶ್ವರಿ, ಅರುಣ ಚೌಗಲಾ ಹಾಗೂ ಪ್ರಧಾನ ಕಾರ್ಯದರ್ಶಿ ಆನಂದ ಚೌಗಲಾ, ವ್ಯವಸ್ಥಾಪಕರಾದ ಮಹಾವೀರ ಚೌಗಲಾ, ಅಜೀತ ಸಪ್ತಸಾಗರ,ಕಲಗೌಡಾ ಪಾಟೀಲ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article