ಶಾಲಾ ಪ್ರಾರಂಭೋತ್ಸವ : ಅಕ್ಷರಬಂಡಿಯೊಂದಿಗೆ ವಿವಿಧ ವಾದ್ಯಮೇಳ, ಕುಂಭಮೇಳದ ಮೂಲಕ ಮಕ್ಕಳ ಪ್ರಭಾತಫೇರಿ

Hasiru Kranti
ಶಾಲಾ ಪ್ರಾರಂಭೋತ್ಸವ : ಅಕ್ಷರಬಂಡಿಯೊಂದಿಗೆ ವಿವಿಧ ವಾದ್ಯಮೇಳ, ಕುಂಭಮೇಳದ ಮೂಲಕ ಮಕ್ಕಳ ಪ್ರಭಾತಫೇರಿ
WhatsApp Group Join Now
Telegram Group Join Now

ಸವದತ್ತಿ: ತಾಲೂಕಿನ ಬೆಟಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶಾಲಾ ಪ್ರಾರಂಭೋತ್ಸವ ಅಕ್ಷರಬಂಡಿಯೊಂದಿಗೆ ವಿವಿಧ ವಾದ್ಯಮೇಳದ ಮೂಲಕ ಕುಂಭಮೇಳದ ಮೂಲಕ ಮಕ್ಕಳ ಪ್ರಭಾತಫೇರಿಯೊಂದಿಗೆ ಆರಂಭಗೊಂಡಿತು.

ನಂತರ ಮಕ್ಕಳಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಲಾಯಿತು.
ವೇದಿಕೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಮವಸ್ತ್ರ ಪುಸ್ತಕ ಗಳನ್ನು ಬಿಸಿಯೂಟ ಸಾಂಕೇತಿಕವಾಗಿ ವಿತರಿಸುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಶ್ವತ್ಥ ವೈದ್ಯ “ಶಿಕ್ಷಣದ ಶಕ್ತಿಯಿಂದ ಜ್ಞಾನದ ಬೆಳಕು ಹೆಚ್ಚಾಗಲಿ: ಶಿಕ್ಷಣವೇ ಶಕ್ತಿ, ಶಿಕ್ಷಣ ಕಲಿತ ವ್ಯಕ್ತಿ ತನ್ನ ಜೀವನವನ್ನು ಉತ್ತಮವಾಗಿ ನಿರ್ವಹಿಸಿ, ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವರು.

ಶಾಲೆಗಳು ಶಿಕ್ಷಣ ನೀಡುವ ಕೇಂದ್ರಗಳಾಗಿದ್ದು, ಅರ್ಹ ವಯಸ್ಸಿನ ಮಕ್ಕಳನ್ನು ಶಾಲೆಗೆ ಸೇರಿಸಿ, ನಿಯಮಿತವಾಗಿ ಶಾಲೆಗೆ ಕಳುಹಿಸಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಎನ್ ಟಿ ಎಸ್ ಸಿ ಹಾಗೂ ಎನ್ ಎಂ ಎಂ ಎಸ್ ಪ್ರತಿಭಾ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

“ಮಕ್ಕಳಿಗೆ ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಸ್ಕಾಲಶಿಫ್, ಶೂಸಾಕ್ಸ್, ಬಿಸಿಯೂಟವನ್ನು ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸರಕಾರದ ಯೋಜನೆಗಳನ್ನು ತಿಳಿಸಿ ಸರಕಾರಿ ಶಾಲೆಯಲ್ಲಿ ಓದಿದ ಮಕ್ಕಳ ಸಾಧನೆಗಳನ್ನು ತಿಳಿಸುತ್ತಾ ಎಲ್ಲರೂ ತಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಓದಿಸಿರಿ ಎಂದು ತಿಳಿಸಿದರು.

ಈ ವೇಳೆ ಯುವದುರೀಣ ಅಶ್ವತ್ಥ ವೈದ್ಯ. ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ. ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ದಂಡಿನ ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ, ಸಾಮಾಜಿಕ ವಲಯ ಅರಣ್ಯಾಧಿಕಾರಿ ನೇಹಾ ತೊರಗಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯ ಸುನಿತಾ ಪಾಟೀಲ, ಪಿಡಿಓ ಸುಧೀರ್ ಪತ್ತಾರ. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ,ಎನ್,ಬ್ಯಾಳಿ.ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ,ಎನ್, ಕಾಜಗಾರ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ ಕುರಿ.ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ವ್ಹಿ ಸಿ ಹಿರೇಮಠ, ಮಾರುತಿ ಕರಡಿಗುಡ್ಡ, ಶಿಕ್ಷಣ ಸಂಯೋಜಕ ಅರ್ಜುನ ಕಾಮನ್ನವರ.ವೈ ಬಿ ಕಡಕೋಳ, ಕುಶಾಲ್ ಮುದ್ದಾಪುರ, ಮಹೇಶ್ ತೇಗೂರ, ಮಲ್ಲಪ್ಪ ಕುರಿ, ಉದಯ ಸಿಂಗಾರಗೊಪ್ಪ, ಶ್ರೀನಿವಾಸ ತಿಮ್ಮಾಪುರ, ನಾಗಪ್ಪ ಮಾಕಾಳಿ,ರತ್ನಾ ಸೇತಸನದಿ,ಎಪ್ ಜಿ ನವಲಗುಂದ,ಪ್ರಶಾಂತ ಹಂಪನ್ನವರ ಸೇರಿದಂತೆ ಗ್ರಾಮದ ಹಿರಿಯರು ಗ್ರಾಮ ಪಂಚಾಯಿತಿ ಸದಸ್ಯ ರು. ಮಕ್ಕಳ ಪಾಲಕರು ಶಾಲಾ ಶಿಕ್ಷಕ ಶಿಕ್ಷಕಿಯರು ಪ್ರಭಾತಫೇರಿಯಲ್ಲಿ ಪಾಲ್ಗೊಂಡಿದ್ದರು.

ರಾಘವೇಂದ್ರ ಕೊಳದೂರ ನಿರೂಪಿಸಿದರು. ಶಾಲಾ ಮಕ್ಕಳಿಂದ ಪ್ರಾರ್ಥನೆ ಜರುಗಿತು. ಉದಯ ಸಿಂಗಾರಗೊಪ್ಪ ಸ್ವಾಗತಿಸಿದರು. ಕುಶಾಲ್ ಮುದ್ದಾಪುರ ವಂದಿಸಿದರು.

WhatsApp Group Join Now
Telegram Group Join Now
Share This Article