ರನ್ನ ಬೆಳಗಲಿ: ಆ.7., ಪಟ್ಟಣದ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ,ಪಟ್ಟಣದ ಹಿರಿಯರು ಜೊತೆ ಸೇರಿ ಗ್ಯಾರಂಟಿಗಳ ಹರಿಕಾರ, ನಾಡಿನ ಜನತೆಯ ಭಾಗ್ಯಧಾತ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ೭೮ನೇ ಹುಟ್ಟುಹಬ್ಬವನ್ನು ಪಟ್ಟದ ಮಹಾಲಕ್ಷ್ಮಿಗೆ ವಿಶೇ? ಪೂಜೆ ಸಲ್ಲಿಸುವುವದರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಆಚರಿಸಿದರು.
ಪಟ್ಟಣ ಪಂಚಾಯತ ಸದಸ್ಯರಾದ ಪ್ರವೀಣ ಪಾಟೀಲ ಕಾಂಗ್ರೆಸ್ ನೇತಾರ ದೀನ ದಲಿತರ ಏಳಿಗೆಗೆ ಶ್ರಮಿಸುವ ಅಹಿಂದ ವರ್ಗಗಳ ಶಕ್ತಿಯ ದಾತ,ನಮ್ಮ ಮುಖ್ಯಮಂತ್ರಿಗಳು. ಗ್ಯಾರೆಂಟಿಗಳ ಅನು?ನದಿಂದ ಬಡವರ ಮನೆಬಾಗಿಲಿಗೆ ಭಾಗ್ಯವನ್ನು ತಂದ ಭಾಗ್ಯದಾತರಾಗಿದ್ದಾರೆ.ಐದು ವ? ಮುಖ್ಯಮಂತ್ರಿಗಳಾಗಿ ಅಧಿಕಾರ ಪೂರೈಸಿ, ಮುಂದಿನ ಚುನಾವಣೆಯಲ್ಲಿ ಕೂಡ ಬಹುಮತ ಪಡೆದು ಮತ್ತೆ ಮುಖ್ಯಮಂತ್ರಿಗಳಾಗಿ ನಾಡಿನ ಸೇವೆ ಗೈಯಲು ಶ್ರೀ ಮಹಾಲಕ್ಷ್ಮೀ ದೇವಿ ಆಶೀರ್ವದಿಸಿಲೆಂದು ಪ್ರಾರ್ಥಿಸಿ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದೇವೆ ಎಂದು ತಿಳಿಸಿದರು.
ಪಟ್ಟಣ ಪಂಚಾಯತ ಸದಸ್ಯರಾದ ನೀಲಕಂಠ ಸೈದಾಪುರ,ಮುಬಾರಕ ಅತ್ತಾರ,ಮುತ್ತಪ್ಪ ನಾಯಕ, ಮುಖಂಡರಾದ ಸಂಗಪ್ಪ ಅಮಾತಿ,ಮುದಕಪ್ಪ ದೋಬಸಿ, ಚೆನ್ನಪ್ಪ ಜಾಲಿಕಟ್ಟಿ,ಲಕ್ಕಪ್ಪ ಹಂಚಿನಾಳ,ಪ್ರಕಾಶ ಕೊಣ್ಣೂರ, ಶಿವಯ್ಯ ಮೆಟಗುಡ್ಡ, ಯಮನಪ್ಪ ಪೂಜಾರಿ, ಮುತ್ತಪ್ಪ ಸಂಕ್ರಟ್ಟಿ,ಸವಿತಾ ಚವಲಿ,ಲಕ್ಕಪ್ಪ ಹಾರೂಗೇರಿ ಮಹಾದೇವ ಹಾದಿಮನಿ, ಮಲ್ಲಪ್ಪ ಹೊಸಪೇಟಿ, ಶಿವಾನಂದ ಗೌರಣ್ಣವರ, ಹನಮಂತ ಹೊರಟ್ಟಿ,
ಚಂದ್ರಶೇಖರ ನೀಲಣ್ಣವರ, ಹನಮಂತ ಹೊಸೂರ,ಸಾಗರ ಹವಾಲ್ದಾರ ಇನ್ನು ಮುಂತಾದವರು ಉಪಸ್ಥಿತರಿದ್ದರು.