ಖಾನಾಪುರ. ತಾಲೂಕಿನ ದೇವಲತ್ತಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭವು ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಬಿಳಿಕಿ, ಅವರೊಳ್ಳಿ ರುದ್ರಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಚನ್ನಬಸವ ದೇವರು ಕಾರ್ಯಕ್ರಮ ಕುರಿತು ಮಾತನಾಡುತ್ತಾ ಮನುಷ್ಯನಿಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಸಂಸ್ಕಾರವು ಅಷ್ಟೇ ಮುಖ್ಯ. ಶಿಕ್ಷಣ ನಮ್ಮನ್ನು ಬುದ್ಧಿವಂತರನ್ನಾಗಿ ಮಾಡಿದರೆ ಸಂಸ್ಕಾರ ವಿನಯವಂತರನ್ನಾಗಿ ಮಾಡುತ್ತದೆ. ವಿನಯವಂತರಾಗಿ ನಿಮ್ಮ ತಂದೆ ತಾಯಿಗೆ ಹಾಗೂ ನೀವು ಕಲಿತ ಶಾಲೆ, ಊರಿನ ಹೆಸರಿಗೆ ಕೀರ್ತಿಯನ್ನು ತರಬೇಕು ಎಂದರು. ಎಸ್ಡಿಎಂಸಿ ಅಧ್ಯಕ್ಷರಾದ ಜಯವಂತ ನಿಡಗಲಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸಂಸ್ಥೆಯ ಯೋಜನಾಧಿಕಾರಿಗಳಾದ ಗಣಪತಿ ನಾಯಕ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಾಬುರಾವ್ ಚಚಡಿರವರು ಅತಿಥಿಗಳಾಗಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಮಹತ್ವವನ್ನು ನೀಡುತ್ತಿದ್ದೇವೆ. ಅದರ ಪೂರಕವಾಗಿ ಎಲ್ಲ ಶಿಕ್ಷಕರಿಗೂ ಕೂಡ ಹೊಸ ಹೊಸ ತರಬೇತಿಯನ್ನು ನೀಡಲಾಗುತ್ತಿದೆ. ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಗ್ರಾಮದ ಜನತೆಗೆ ಕಿವಿ ಮಾತನ್ನು ಹೇಳಿದರು. ಗ್ರಾಮದ ನಿವೃತ್ತ ಪ್ರಾಚಾರ್ಯರನ್ನ ಪ್ರಧಾನ ಶಿಕ್ಷಕರನ್ನ, ಶಿಕ್ಷಕರನ್ನ ಮತ್ತು ಕಳೆದ ಸಾಲಿನ ಎಸೆಸೆಲ್ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮುಖ್ಯೋಪಾಧ್ಯಾಯರಾದ ಅಯ್ ಎಮ್ ಹೊನ್ನನವರ ಸ್ವಾಗತಿಸಿದರು, ಸರ್ವ ಶಿಕ್ಷಕಿರಾದ ಶ್ರೀಮತಿ ಸಕ್ಕುಬಾಯಿ ಸಾಲುಂಕೆ ವಂದಿಸಿದರು, ಶ್ರೀಮತಿ ರಾಜಶ್ರೀ ಕರಿಮುದಕ್ಕನವರ ಕಾರ್ಯಕ್ರಮವನ್ನು ನಿರೂಪಿದರು.


