ಜಮಖಂಡಿ: ನಗರದ ಕುಡಚಿ ರಸ್ತೆಯಲ್ಲಿರುವ ತಾಲೂಕಾಡತ ಸೌಧದ ಸಭಾಭವನದಲ್ಲಿ ಮಂಗಳವಾರ ವೀರಮಾತೆ ದಿಟ್ಟ ಹೋರಾಟಗಾರ್ತಿ ಚಿತ್ರದುರ್ಗದ ಓನಕೆ ಓಬವ್ವ ಜಯಂತಿ ಕಾರ್ಯಕ್ರಮ ಸಂಭ್ರಮದಿAದ ಆಚರಿಸಲಾಯಿತು.
ಇತಿಹಾಸ ಅಧ್ಯಾಪಕ ಡಾ.ಎನ್.ವಿ.ಅಸ್ಕಿ, ನ್ಯಾಯವಾದಿ ನಿಂಗಪ್ಪ ಗಸ್ತಿ ಮಾತನಾಡಿದರು. ಜಯಂತಿ ಆಚರಣೆಯ ಸಂದರ್ಭದಲ್ಲಿ ದಿಟ್ಟ ಹೋರಾಟಗಾರ್ತಿ ಓನಕೆ ಓಬವ್ವ ಛದ್ಮವೇಷ ಧರಿಸಿದ ವಿದ್ಯಾರ್ಥಿನಿಯರು ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ನ್ಯಾಯವಾದಿ ಎಸ್.ಬಿ.ಕಾಳೆ, ಪರುಶರಾಮ ಬಿಸನಾಳ, ರಮೇಶ ಆಲಬಾಳ, ಶಿರಸ್ತೆದಾರರಾದ ಬಿ.ಎಸ್.ಸಿಂಧೂರ, ಎಂ.ಎಸ್.ಚಲವಾದಿ, ಜಿ.ಎಸ್.ಹೊಸಗೇರಿ ಸಹಿತ ಹಲವರು ಇದ್ದರು.
ಪೋಟೋ: ಜಮಖಂಡಿ: ನಗರದ ತಾಲೂಕಾಡತ ಸೌಧದ ಸಭಾಭವನದಲ್ಲಿ ಮಂಗಳವಾರ ವೀರಮಾತೆ ದಿಟ್ಟ ಹೋರಾಟಗಾರ್ತಿ ಚಿತ್ರದುರ್ಗದ ಓನಕೆ ಓಬವ್ವ ಜಯಂತಿ ಕಾರ್ಯಕ್ರಮ ಸಂಭ್ರಮದಿAದ ಆಚರಿಸಲಾಯಿತು.


