ಪ್ರಥಮ ಶ್ರಾವಣ ಸೋಮವಾರದಂದು ಸಂಭ್ರಮದ ನವಗ್ರಹ ಪೂಜಾ, ಪ್ರಸಾದ ಕಾರ್ಯಕ್ರಮ

Ravi Talawar
ಪ್ರಥಮ ಶ್ರಾವಣ ಸೋಮವಾರದಂದು ಸಂಭ್ರಮದ ನವಗ್ರಹ ಪೂಜಾ, ಪ್ರಸಾದ ಕಾರ್ಯಕ್ರಮ
WhatsApp Group Join Now
Telegram Group Join Now
ನೇಸರಗಿ: ಶರಣರಿಗೆ ಶ್ರಾವಣ ಭಕ್ತಿ ಭಾವದ ಮಾಸ ಈ ಮಾಸದಲ್ಲಿ ತಾಲೂಕಿನ  ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಹತ್ತಿರ ಇರುವ ನವಗ್ರಹ ದೇವಸ್ಥಾನದಲ್ಲಿ ಬೆಳ್ಳಿಗ್ಗೆ ಅಭಿಷೇಕ, ಮಹಾಪೂಜೆ, ಮಂಗಳಾರತಿ, ಮಹಾಪ್ರಸಾದದೊಂದಿಗೆ ಸಡಗರ, ಸoಭ್ರಮದಿಂದ ಭಕ್ತಿ ಭಾವದಿಂದ ನೆರವೇರಿತು.
ಈ ಸಂದರ್ಭದಲ್ಲಿ ನೇಸರಗಿ ಗ್ರಾಮಕ್ಕೆ ಕೀರ್ತಿ ತಂದು ಶ್ರೀಲಂಕಾ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ವಿಶೇಷ ಚೇತನರ ಸಿಟ್ಟಿಂಗ ಥ್ರೋ ಬಾಲ್ ಪಂದ್ಯಾವಳಿಯಲ್ಲಿ  ಫೈನಲನಲ್ಲಿ ಶ್ರೀಲಂಕಾ ತಂಡ ಸೋಲಿಸಿ ಪ್ರಥಮ ಪ್ರಶಸ್ತಿ ಪಡೆದ ಭಾರತ ರಾಷ್ಟ್ರೀಯ ತಂಡದ ಸದಸ್ಯರಾದ ಈರಪ್ಪ ಹೊಂಡಪ್ಪನವರ ಇವರನ್ನು ಸನ್ಮಾನಿಸಲಾಯಿತು.
 ಈ ನವಗ್ರಹ ಪೂಜಾ ಕಾರ್ಯಕ್ರಮದಲ್ಲಿ ಮಹಾದೇವ ಮೆಣಸಿಕಾಯಿ, ರಾಮು ಚೋಭಾರಿ, ಗಂಗಪ್ಪ ಗಲಭಿ, ಈರಪ್ಪ ಮೂಲಿಮನಿ, ಸಿದ್ದಪ್ಪ ಮದವಾಲ, ನಾಗರಾಜ ಮಾಳನ್ನವರ, ಶಿವಾನಂದ ಮಾಳನ್ನವರ,ಬಾಳಪ್ಪ ನಾಗನೂರ, ಬಸು ಹೊಂಡಪ್ಪನವರ,ವಿಷ್ಣು ಮೂಲಿಮನಿ, ಮಲ್ಲಿಕಾರ್ಜುನ ಸೋಮಣ್ಣವರ, ವಿನಾಯಕ ಮಾಸ್ತಮರಡಿ, ಬಸು ಮೆಣಸಿನಕಾಯಿ, ಪ್ರದೀಪ ಮುತವಾಡ, ಅಡಿವಪ್ಪ ಮಾಳನ್ನವರ, ಪ್ರಕಾಶ ತಳವಾರ, ಮಹಾಂತೇಶ ಮೆಣಸಿನಕಾಯಿ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸದಸ್ಯರು,ಗ್ರಾ ಪಂ. ಸದಸ್ಯರು, ನೇಸರಗಿ, ಸುತ್ತಮುತ್ತಲಿನ ಗ್ರಾಮಸ್ಥರು ನವಗ್ರಹ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article