ಚಿಕ್ಕಮಣೂರದ ಭೀಮ ನಗರ ಸರಕಾರಿ ಶಾಲೆಯ ದುಸ್ಥಿತಿ

Pratibha Boi
ಚಿಕ್ಕಮಣೂರದ ಭೀಮ ನಗರ ಸರಕಾರಿ ಶಾಲೆಯ ದುಸ್ಥಿತಿ
WhatsApp Group Join Now
Telegram Group Join Now

ಇಂಡಿ : ತಾಲೂಕಿನ ಚಿಕ್ಕಮಣೂರದ ಭೀಮ ನಗರ ಸರಕಾರಿ ಶಾಲೆಯ ಸ್ಥಿತಿ ದುಸ್ಥಿತಿಯಲ್ಲಿದೆ. ಇಲ್ಲಿ ಒಂದರಿಂದ ಏಳನೆಯ ತರಗತಿಯ ವರೆಗೆ ವರ್ಗಗಳು ಇವೆ. ಈ ಶಾಲೆಯಲ್ಲಿ ೧೦೫ ಮಕ್ಕಳು ಓದುತ್ತಿದ್ದಾರೆ.
ಇಲ್ಲಿ ಆರು ಕೊಠಡಿಗಳಿವೆ. ಅದರಲ್ಲಿ ಒಂದು ಮಾತ್ರ ಒಳ್ಳೆಯ ಸ್ಥಿತಿಯಲ್ಲಿದ್ದು ಎರಡು ಕೋಣೆಗಳು ಪೂರ್ಣವಾಗಿ ಬಿದ್ದಿವೆ. ಮತ್ತು ಎರಡು ಕೋಣೆಗಳು ಮಳೆ ಬಂದರೆ ಸಂಪೂರ್ಣ ಸೋರುತ್ತಿವೆ. ಒಂದು ಮೇಲ್ಛಾವಣೆಯಿಂದ ಸಿಮೆಂಟ ಉದುರಿ ಬಿಳುತ್ತಿದೆ. ಹೀಗಾಗಿ ಒಂದೇ ಕೋಣೆಯಲ್ಲಿ ಮಾತ್ರ ಎಲ್ಲ ವಿದ್ಯಾರ್ಥಿಗಳು ಓದುವ ಅನಿವಾರ್ಯತೆ ಎದುರಾಗಿದೆ.
ಒಂದು ಕೋಣೆಯಲ್ಲಿ ತರಗತಿಗಳು ತೆಗೆದುಕೊಂಡು ಎರಡು ತರಗತಿಗಳಿಗೆ ಕೋಣೆಗೆ ಹತ್ತಿದ ಕಂಪೌಂಡದಲ್ಲಿ ಮತ್ತು ಎರಡು ತರಗತಿಗಳಿಗೆ ಗಿಡದ ಕೆಳಗೆ ತರಗತಿ ನಡೆಸುತ್ತಿದ್ದಾರೆ.
ಇಲ್ಲಿ ಮಳೆಯಾದರೆ ಮೊದಲು ಶಿಕ್ಷಕರು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುತ್ತಾರೆ.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಗಡ್ಡಿಲಿಂಗ ಪೂಜಾರಿ ಶಾಲೆಗೆ ಕೋಣೆ ಕಟ್ಟಿಸಿ ಕೊಡುವಂತೆ ಗ್ರಾ.ಪಂ ಅಧ್ಯಕ್ಷರಿಗೆ, ಗ್ರಾ.ಪಂ ಪಿಡಿಒ, ತಾಪಂ ಇಒ ಮತ್ತು ಶಿಕ್ಷಣ ಇಲಾಖೆ ಅಧಿಕಾರಿ ಹಲವಾರು ಬಾರಿ ಮನವಿ ಮಾಡಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ.
ಕೋಟ್
ಈ ಶಾಲೆಗೆ ಕೋಣೆಗಳನ್ನು ಕಟ್ಟಿಸಿ ಕೋಡಬೇಕು. ಇಲ್ಲದಿದ್ದರೆ ಎಲ್ಲ ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಪಾಲಕರ ಜೊತೆ ಗ್ರಾಮಸ್ಥರ ಸಹಕಾರದೊಂದಿಗೆ ಶಾಲೆಯ ಎದುರು ಇಲ್ಲವೆ ಶಿಕ್ಷಣ ಇಲಾಖೆ ಎದುರು ಧರಣಿ ಸತ್ಯಾಗ್ರಹ ಮಾಡಲಾಗುವದು.
ಗಡ್ಡಿಲಿಂಗ ಪೂಜಾರಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಸರಕಾರಿ ಪ್ರೌಢಶಾಲೆ ಭೀಮ ನಗರ ಚಿಕ್ಕಮಣೂರ
ಕೋಟ್
ಈ ಹಿಂದಿನ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಹಲವಾರು ಬಾರಿ ಲಿಖಿತ ಮತ್ತು ಮೌಖಿಕ ಮನವಿ ಮಾಡಿದ್ದೇವೆ. ಅವರು ಸೌಜನ್ಯಕ್ಕೂ ಶಾಲೆಯ ಪರಿಸ್ಥಿಯ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯದೇ ಇರುವದು ಅತ್ಯಂತ ದುರ್ದೈವ.
ಬಾದಶಹಾ ಶೇಖ ಎಸ್.ಡಿ.ಎಂ.ಸಿ ಸದಸ್ಯರು ಸರಕಾರಿ ಪ್ರೌಢಶಾಲೆ ಭೀಮ ನಗರ ಚಿಕ್ಕಮಣೂರ
ಫೋಟೊ ಕ್ಯಾಫ್ಸನ್ ೧೭ ಇಂಡಿ ೦೧ : ಇಂಡಿ ತಾಲೂಕಿನ ಭೀಮ ನಗರ ಶಾಲೆಯ ಸ್ಥಿತಿ

WhatsApp Group Join Now
Telegram Group Join Now
Share This Article