ಯರಗಟ್ಟಿ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಯಲ್ಲಿ ಕರವೇ ಸಂಘಟನೆ ಮಾಡಿ : ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್ ಗುಡುನಟ್ಟಿ ಕರೆ

Pratibha Boi
ಯರಗಟ್ಟಿ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಯಲ್ಲಿ ಕರವೇ ಸಂಘಟನೆ ಮಾಡಿ : ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್ ಗುಡುನಟ್ಟಿ ಕರೆ
WhatsApp Group Join Now
Telegram Group Join Now

ಯರಗಟ್ಟಿ : ಪಟ್ಟಣಕ್ಕೆ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ತಾಲೂಕಾ ಪದಾಧಿಕಾರಿಗಳು ಭೇಟಿ ಮಾಡಿ ಸಭೆ ನಡೆಸಿದರು.

ಸಭೆ ಉದ್ದೇಶಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಅಧ್ಯಕ್ಷ ದೀಪಕ್ ಗುಡಗನಟ್ಟಿ ಕರವೇ ಸಂಘಟನೆ ಮಾಡಲು ಒತ್ತು ನೀಡಿ ಮತ್ತು ಬರುವ ದಿನಮಾನಗಳಲ್ಲಿ ಯರಗಟ್ಟಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಘಟಕ ಪ್ರಾರಂಭ ಮಾಡುವ ಮುಖೆನ ಸಂಘಟನೆ ಮಾಡಬೇಕು ಎಂದು ಯರಗಟ್ಟಿ ತಾಲೂಕು ಮಟ್ಟದ ಕಾರ್ಯಕಾರಣಿ ಸಭೆಯಲ್ಲಿ ತಾಲೂಕು ಪದಾಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ರಾಜ್ಯ ಸಂಚಾಲಕರಾದ ಸುರೇಶ ಗೌವಣ್ಣವರ, ಜಿಲ್ಲಾ ಪ್ರದಾನ ಕಾರ್ಯದರ್ಶಿ ದಶರಥ ಬನೋಸಿ, ಜಿಲ್ಲಾ ಸಂಚಾಲಕರಾದ ಬಾಳು ಜಡಗಿ, ಹೊಳೆಪ್ಪ ಸುಲದಾಳ, ರಾಜು ನಾಸೀಪುಡಿ, ತಾಲೂಕು ಅಧ್ಯಕ್ಷ ರಫೀಕ್ ಡಿ ಕೆ, ಮಂಜು ಬಾವಿಹಾಳ, ಫಾರೂಕ್ ಅತ್ತಾರ, ಫೀರೋಜ ಖಾದ್ರಿ, ವಿಠ್ಠಲ ಹಾರುಗೋಪ್ಪ, ರಫೀಕ್ ಮುಂಬೈ, ಫೀರಸಾಬ ತಶೀಲ್ದಾರ, ಈರಣ್ಣ ಹುಲೂರ ಸೇರಿದಂತೆ ಅನೇಕ ಕರವೇ ಕಾರ್ಯಕರ್ತರು ಇದ್ದರು

 

WhatsApp Group Join Now
Telegram Group Join Now
Share This Article