ಮನುಷ್ಯನ ವ್ಯಕ್ತಿತ್ವ ರೂಪಿಸಲು ಬಸವಾದಿ ಶರಣರ ವಚನಗಳು ಅವಶ್ಯ: ಡಾ. ತೋಂಟದ ಸಿದ್ಧರಾಮ ಶ್ರೀಗಳು

Ravi Talawar
ಮನುಷ್ಯನ ವ್ಯಕ್ತಿತ್ವ ರೂಪಿಸಲು ಬಸವಾದಿ ಶರಣರ ವಚನಗಳು ಅವಶ್ಯ: ಡಾ. ತೋಂಟದ ಸಿದ್ಧರಾಮ ಶ್ರೀಗಳು
WhatsApp Group Join Now
Telegram Group Join Now

ಗದಗ,20 : ಬಸವಾದಿ ಶಿವಶರಣರ ವಚನಗಳನ್ನು ಹೆಚ್ಚು ಹೆಚ್ಚು ಓದಿದಾಗ, ಅರ್ಥೈಸಿಕೊಂಡಾಗ, ಆ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಪ್ರಗತಿಪಥದತ್ತ ಸಾಗುತ್ತೇವೆ. ಮನುಷ್ಯನ ವ್ಯಕ್ತಿತ್ವ ರೂಪಿಸಲು ಬಸವಾದಿ ಶರಣರ ವಚನಗಳು ಬಹಳ ಅವಶ್ಯ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು
ಮಾತನಾಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೬೯೩ನೆಯ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪ್ರಜಾಪ್ರಭುತ್ವ ಯುಗದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರತಿಪಾಧಿಸುವಕ್ಕೆ ಹಿಂದೇಟು ಹಾಕುತ್ತಿದ್ದೇ ವೆ. ೧೨  ನೇ ಶತಮಾನದಲ್ಲಿ ಬಸವಣ್ಣನವರು ಪ್ರಭುತ್ವದ ಕಾಲದಲ್ಲಿ ಪ್ರಜಾಸತ್ಮಾತ್ಮಕ ಮೌಲ್ಯಗಳನ್ನು ಜನರಿಗೆ ತಿಳಿಸಿಕೊಡುತ್ತಿದ್ದರು. ಸಮಾಜದಲ್ಲಿ ಸಮಾನತೆಗಾಗಿ, ರಾಷ್ಟ್ರವನ್ನು ಸಮೃದ್ಧವಾಗಿ ಬೆಳೆಸುವದಕ್ಕಾಗಿ, ಜನರು ಸಂತೃಪ್ತಿಯಿಂದ ಬಾಳುವುದಕ್ಕಾಗಿ ಬೇಕಾಗಿರುವ ಮೌಲ್ಯಗಳನ್ನು ಬಸವಣ್ಣನವರು ನೀಡಿದ್ದಾರೆ. ೧೨ ನೇ ಶತಮಾನದಲ್ಲಿ ನಡೆಸಿದ ಸಮಾಜೋಧಾರ್ಮಿಕ
ಚಳುವಳಿ ಜಾಗತಿಕ ಇತಿಹಾಸದಲ್ಲಿಯೇ ಮಹತ್ವಪೂರ್ಣವಾದ ಚಳುವಳಿಯಾಗಿದೆ. ಹೆಣ್ಣುಮಕ್ಕಳನ್ನು  ಗೌರವಿಸಿ, ವಿಶೇಷ  ಸ್ಥಾನಮಾನವನ್ನು ಕಲ್ಪಿಸಿ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದವರು ಬಸವಣ್ಣನವರು ಎಂದು ಪೂಜ್ಯರು ಮಾತನಾಡಿದರು.

ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಪ್ರಗತಿಪರ ಚಿಂತಕರು, ಕೊಪ್ಪಳ ಅವರು ಉಪನ್ಯಾಸ ನೀಡಿ, ಭಾರತ ಬಹುಸಂಸ್ಕೃತಿ, ಬಹುಧರ್ಮಗಳ, ಬಹುಭಾಷೆಗಳ, ಬಹು ಆಹಾರ ಪದ್ಧತಿಗಳ, ಬಹು ವಸ್ತ್ರಪದ್ಧತಿಗಳ ದೇಶ. ಈ ಮೇಲು-ಕೀಳು ಭಾವನೆಗಳು ಹೋಗಬೇಕಾದರೆ ಪ್ರತಿಯೊಬ್ಬರು ಸತ್ಯಶುದ್ಧ ಕಾಯಕ ಮಾಡಬೇಕು. ಕಾಯಕದಿಂದ ಗಳಿಸಿ ಉಳಿತಾಯವಾದ ಹೆಚ್ಚಿನ ಹಣವನ್ನು ಸಮಾಜಕ್ಕೆ ಉಪಯೋಗಿಸಬೇಕು ಎಂದು ಬಸವಣ್ಣನವರು ಹೇಳಿದ್ದಾರೆ. ಇದನ್ನೇ ದಾಸೋಹ ಎಂದು ಕರೆದರು.

ಹೆಚ್ಚುವರಿ ದ್ರವ್ಯ, ಹಣ ವ್ಯಕ್ತಿಯನ್ನು ನಾಶ ಮಾಡುತ್ತದೆ. ನಮ್ಮ ನಮ್ಮ ಧಾರ್ಮಿಕ ವಿಚಾರಗಳನ್ನು ಇಟ್ಟುಕೊಂಡು, ಅನ್ಯಧರ್ಮದ ಜೊತೆಗೆ ಸೌಹಾರ್ಧಯುತ ಸಂಬಂಧವನ್ನು ಇಟ್ಟುಕೊಳ್ಳಬೇಕು. ಜನ ಪ್ರಗತಿಯ ಕಡೆಗೆ ಸಾಗಬೇಕು ಎಂದು ಮಾತನಾಡಿದರು.

ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ  ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ನಿಮಿತ್ತ ಶ್ರೀ ಮಹೇಶ ಗದಗ ಪ್ರಾಂಶುಪಾಲರು ಸನಾ ನರ್ಸಿಂಗ್ ಮಹಾವಿದ್ಯಾಲಯ ಹುಬ್ಬಳ್ಳಿ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನಿಮಿತ್ತ  ಕು. ಸಮೃದ್ಧಿ ಶ್ರೀಧರ ಸಿದ್ಲಿಂಗ್ ಲೋಯೋಲಾ ಪ್ರೌಢಶಾಲೆ, ಗದಗ ಅವರನ್ನು ಪೂಜ್ಯರು ಸಂಮಾನಿಸಿದರು. ಮುಖ್ಯಅತಿಥಿಗಳಾಗಿ ಅಶ್ರಫ್‌ಅಲಿ ಬಸೀರ್ ಅಹ್ಮದ್, ಸಾಮಾಜಿಕ ಕಾರ್ಯಕರ್ತರು
ಉದ್ದಿಮೆದಾರರು ಹುಬ್ಬಳ್ಳಿ ಅವರು ಭಾಗವಹಿಸಿದ್ದರು.

ಮೃತ್ಯುಂಜಯ ಹಿರೇಮಠ ಮತ್ತು ಗುರುನಾಥ ಸುತಾರ ತಂಡದವರು ವಚನ ಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಕು. ಹರ್ಷಿತ ಶಿವಾನಂದ ಪಟ್ಟಣಶೆಟ್ಟಿ, ವಚನ ಚಿಂತನೆಯನ್ನು ಕು. ಶಿವನಾಗರಾಜ ಅಶೋಕ ಆಸಂಗಿ ಇವರು ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು  ವಹಿಸಕೊಂಡಿದ್ದ ಡಾ. ಯು.ವಿ. ಪುರದ ಹೆಸರಾಂತ ಆಯುರ್ವೇದ ವೈದ್ಯರು, ವಿಶ್ರಾಂತ ಪ್ರಾಚಾರ್ಯರು ಹಾಗೂ ಪರಿವಾರ ಗದಗ ಅವರನ್ನು ಪೂಜ್ಯರು ಸಂಮಾನಿಸಿದರು.

ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ,
ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್‌ರಾದ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article