ಬಸವ ಜಯಂತಿ ಆಚರಣೆ: ನಾಳೆ ಬೆಳಗಾವಿಯಲ್ಲಿ ಭವ್ಯ ಮೆರವಣಿಗೆ

Ravi Talawar
ಬಸವ ಜಯಂತಿ ಆಚರಣೆ: ನಾಳೆ ಬೆಳಗಾವಿಯಲ್ಲಿ ಭವ್ಯ ಮೆರವಣಿಗೆ
WhatsApp Group Join Now
Telegram Group Join Now

ಬೆಳಗಾವಿ: ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ೮೯೨ ನೆಯ ಜಯಂತಿಯ ನಿಮಿತ್ತವಾಗಿ  ವಿಶ್ವಶಾಂತಿಗಾಗಿ ಬೆಳಗಾವಿ ನಗರದಲ್ಲಿ ಮೇ 4(ಇಂದು)ಭವ್ಯ ಮರವಣಿಗೆಯನ್ನು ಆಯೋಜಿಸಲಾಗಿದೆ. ಸಂಜೆ ೪-೦೦ ಗಂಟೆಗೆ  ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಶನಿವಾರಖೂಟ, ಗಣಪತಿಗಲ್ಲಿ, ಮಾರುತಿ ಬೀದಿ,ರಾಮದೇವಗಲ್ಲಿ,ಸಮಾದೇವಿಗಲ್ಲಿ ಕಾಲೇಜ್ ರಸ್ತೆಯ ಮೂಲಕ ಲಿಂಗರಾಜ ಮಹಾವಿದ್ಯಾಲಯ ಆವರಣದಲ್ಲಿ‌ ಮಹಾಪ್ರಸಾದದೊಂಡಿಗೆ ಮುಕ್ತಾಯವಾಗಲಿದೆ. ಈ ಮೆರವಣಿಗೆಯಲ್ಲಿ ವಿವಿಧ ಮಠಾಧೀಶರು,ಜನಪ್ರತಿನಿಧಿಗಳು,ನ್ಯಾಯವಾದಿಗಳು,ವ್ಯಾಪಾರಿ ಬಂಧುಗಳು ಸಾರ್ವಜನಿಕರು ವಿವಿಧ ಜಿಲ್ಲೆಗಳಿಂದ ಬರುತ್ತಿರುವ ಬಸವಾಭಿಮಾನಿಗಳು ಕುಟುಂಬಸಮೇತರಾಗಿ ಭಾಗವಹಿಸಲಿದ್ದಾರೆ.

ಕಾರಣ ಸರ್ವರೂ ಈ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿರಿ,  ಅಭೂತಪೂರ್ವ ಮೆರಬಣಿಗೆಯ ಮಾಡೋಣ ಬೆಳಗಾವಿಯಲ್ಲಿ  ಜಾತಿ ಧರ್ಮ, ಪರಿತಗಳನ್ನು ಒದಗಿಟ್ಟು ಸರ್ವ ಜಾತಿ,ಧರ್ಮಗಳ ಸಮಾಜ ಬಾಂಧವರು ಭಾಗವಹಿಸುತ್ತಿದ್ದಾರೆ. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ಎಂದು ಬಸವಜಯಂತಿ ಉತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

 

WhatsApp Group Join Now
Telegram Group Join Now
Share This Article