ಗೋಕಾಕ : ಇಲ್ಲಿನ ಶ್ರೀ ವಿವೇಕಾನಂದ ಯೋಗ ಕೇಂದ್ರದ ಯೋಗ ಗುರು ಆನಂದ ಸೋರಗಾಂವಿ ಅವರ ಮಾರ್ಗದರ್ಶನದಲ್ಲಿ ಸುಮಾರು ಮೂರು ವರ್ಷಗಳಿಂದ ಯೋಗ ತರಬೇತಿ ಪಡೆಯುತ್ತಿರುವ ಕು. ಅರಣ್ಯ ಲ ಹೋನಕೇರಿ ಹಾಗೂ ಕು ಪದ್ಮಶ್ರೀ ಲ ಹೋನಕೇರಿ ಇವರಿಗೆ ಮೂಡಲಗಿ ತಾಲೂಕಿನ ಶಿವಾಪೂರ (ಹ )ಗ್ರಾಮದ ಸ ಹಿ ಪ್ರಾ ಶಾಲೆಯಲ್ಲಿ ನಡೆದ ಕನ್ನಡ ಜಾನಪದ ಪರಿಷತ್ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅನೇಕ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿದನ್ನು ಗಮನಿಸಿ ಬಾಲಯೋಗ ಪ್ರಪಂಚ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಬಾಲಶೇಖರ ಬಂದಿ,ಜನಪದ ಕಲಾವಿದ ಶಬ್ಬಿರ ಡಾಂಗೆ,ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ. ಕಜಾಪ ಜಿಲ್ಲಾಧ್ಯಕ್ಷ ಮೋಹನ ಗುಂಡ್ಲುರ ಸೇರಿದಂತೆ ಅನೇರು ಇದ್ದರು.