ಯರಗಟ್ಟಿ,ಜೂ,೧೯: ಹಿಂದೂ-ಮುಸ್ಲಿಂಮರ ಭಾವೈಕ್ಯದ ಕೇಂದ್ರ ಹಾಗೂ ಪವಿತ್ರ ಸ್ಥಳವಾಗಿರುವ ಪಟ್ಟಣದ ಬಾಬಾಬುಡನ್ ಶಾವಲಿ ದರ್ಗಾದ ಉರುಸ ಗಂಧೋತ್ಸವ ಬುಧವಾರ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು.
ಗಂಧೋತ್ಸವ ಕಾರ್ಯಕ್ರಮ ನಡೆಯಿತು. ಹಿಂದೂ-ಮುಸ್ಲಿಂ ಯುವಕರು ನಡೆಸಿದ ಮೆರವಣಿಗೆಯಲ್ಲಿ ತಮಟೆ ವಾದನ ಗಮನ ಸೆಳೆಯಿತು. ಕುರಾನ್ ಪಠಣ, ತಮಟೆ ವಾದನದ ಮೂಲಕ ಮೆರವಣಿಗೆಸಾಗಿತು.ಈ ದರ್ಗಾ ತಾಲೂಕಿನಲ್ಲಿ ಪ್ರಸಿದ್ಧವಾಗಿದೆ. ಪ್ರತಿವ? ಇಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಗಂಧೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಜನರು ಭಾಗವಹಿಸುತ್ತಾರೆ.ದರ್ಗಾವನ್ನು ವಿವಿಧ ಪು?ಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ದರ್ಗಾದಲ್ಲಿ ಹೊಸ ಚಾದರ್ಗಳು ಕಣ್ಣು ಕೋರೈಸುತ್ತಿದ್ದವು. ವಿದ್ಯುತ್ ದೀಪಗಳು ಜಗಮಗಿಸುತ್ತಿದ್ದವುಈ ವೇಳೆ ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಪ. ಪಂ. ಸದಸ್ಯ ಸಲೀಂಬೇಗ ಜಮಾದಾರ, ನಿಖಿಲ ಪಾಟೀಲ, ಕಾಶೀಮ ಹೊರಟ್ಟಿ, ಫೀರೊಜ ಖಾದ್ರಿ, ಫಾರುಕ್ ಅತ್ತಾರ, ಇಮಾಮಸಾಬ ಹುಸೇನಸಾಬ ಹುಸೇನಸಾಬ,ದಿಲಾವರನಾಯ್ಕರ, ಮೌಲಾಲಿ ಮುಲ್ಲಾ, ರಫೀಕ ಡಿ ಕೆ, ದಿವಾನಸಾಬ ಸಿಕ್ಕಲಗಿ, ರಫೀಕ ಜಂಗುನ್ನವರ, ನಜೀರ್ ನದಾಫ ಸೇರಿದಂತೆ ಅನೇಕರು ಇದ್ದರು.
ಹಿಂದೂ ಮುಸ್ಲಿಮರ ಭಾವೈಕ್ಯದ ಕೇಂದ್ರ- ಬಾಬಾಬುಡನ್ ಶಾವಲಿ ದರ್ಗಾದ ಉರುಸ ಗಂಧೋತ್ಸವಕ್ಕೆ ಚಾಲನೆ
