ಬೆಳಗಾವಿಯ ೪- ನಗರದ ಗುರುಪ್ರಸಾದ ಕಾಲೋನಿಯ ದತ್ತ ಮಂದಿರದಲ್ಲಿ ಇತ್ತೀಚೆಗೆ ಆರು ದಿನಗಳ ಕಾಲ ಅತಿ ರುದ್ರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎರಡು ದಶಕಗಳ ನಂತರ ನಡೆದ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಎಪ್ಪತ್ತಕ್ಕೂ ಹೆಚ್ಚು ರುದ್ರ ಪಾಠಕರು ಪಾಲ್ಗೊಂಡಿದ್ದರು. ಪ್ರತಿದಿ ಐದು ಗಂಟೆಗಳ ಕಾಲ ರುದ್ರ ಪಠಣವನ್ನು ಮಾಡಿದರು.
ಚಂದ್ರಶೇಖರ ಜೋಶಿ ಹಾಗೂ ಬೋಂದ್ರೆ ಗುರುಗಳು ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹೋಮ ಹವನ ರುದ್ರ ಸ್ವಾಹಾಕಾರ ಕಾರ್ಯಕ್ರಮಗಳು ನೆರವೇರಿದವು . ಸಾಗರ ಕೆರೂರ, ದರ್ಶನ ಕುಲಕರ್ಣಿ, ವಿನಾಯಕ ಒಡೆಯರ. ಸಂತೋಷಾಚಾರ್ಯ ಜೋಶಿ , ವಿನಾಯಕ ಮುತಾಲಿಕ ದೇಸಾಯಿ , ಯೋಗೇಶ್, ಗಣೇಶ್ ಫಡಕೆ, ಸಂಜೀವ ಕುಲಕರ್ಣಿ, ಚಿದಂಬರ ಮುನವಳ್ಳಿ , ರಮೇಶ ದೀಕ್ಷಿತ್, ಶಾರ್ದೂಲ ಗುರೂಜಿ , ಭಾವು ಜೋಶಿ , ಅರ್ಚಕರಾದ ಮಹೇಶ್ ಹಿರೇಹಳ್ಳಿ ,. ಉದ್ಯೋಗಪತಿ ಶ್ರೀ ರವಿ ಕಾಟವಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಳಗಾವಿಯ ವಿಪ್ರವೃಂದದವರೇ ಒಬ್ಬರಿಗೊಬ್ಬರ ಸಹಕಾರದಿಂದ ಈ ಅನುಷ್ಠಾನ ಮಾಡಿದ್ದು ವಿಶೇಷವಾಗಿತ್ತು. ಸಮಸ್ತ ಭಕ್ತ ಜನರ ದುಃಖಗಳು ದೂರಾಗಿ ನೆಮ್ಮದಿ ಸಿಗಲಿ. ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
-೦-೦-೦-
ವಿಶ್ವಶಾಂತಿಗಾಗಿ ಅತಿ ರುದ್ರ ಕಾರ್ಯಕ್ರಮ


