ಅಥಣಿ: ತಾಲೂಕಿನ ಹಡಪದ ಸಮಾಜದ ಅಧ್ಯಕ್ಷರು ಹಾಗೂ ಶಿವಯೋಗಿ ಮುರುಘೇಂದ್ರ ಸ್ವಾಮಿ ಅರ್ಬನ್ ಕೋ-ಆಪ್. ಬ್ಯಾಂಕ್ ಲಿ. ಅಥಣಿ ಇದರ ನಿರ್ದೇಶಕರಾದ ಶಿವಾನಂದ ಹುನ್ನೂರ ಅವರು ಬೆಳಗಾವಿ ಜಿಲ್ಲಾ ಹಡಪದ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾಗವಾಡದಲ್ಲಿ ನಡೆದ ಹಡಪದ ಸಮಾಜ ಬಾಂಧವರು, ಸಮಾಜದ ಮುಖಂಡರ ಸಭೆಯಲ್ಲಿ ಶಿವಾನಂದ ಹುನ್ನೂರ ಅವರ ಸಾಮಾಜಿಕ ಸೇವೆ ಹಾಗೂ ಹಡಪದ ಸಮಾಜದ ಸಂಘಟನಾ ಕೆಲಸ ಕಾರ್ಯಗಳನ್ನು ಗುರುತಿಸಿ ಸಮಾಜದ ಇನ್ನಷ್ಟು ಏಳ್ಗೆ ಹಾಗೂ ಸಮಾಜದ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶಿವಾನಂದ ಹುನ್ನೂರ ಅವರನ್ನು ಬೆಳಗಾವಿ ಜಿಲ್ಲಾ ಹಡಪದ ಸಮಾಜ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಗೌರವಾಧ್ಯಕ್ಷರಾಗಿ ಸುರೇಶ ಹಡಪದ, ಉಪಾಧ್ಯಕ್ಷರಾಗಿ ಸಂತೋಷ ನಾವಲಗೆರ, ಮತ್ತು ರಾಜು ನಾವಿ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಕುರ್ಲಿ, ಖಜಾಂಚಿಯಾಗಿ ಸಾತಗೌಡ ನಾವಿ, ಕಾರ್ಯಾಧ್ಯಕ್ಷರಾಗಿ ನಾಗಪ್ಪ ಹಡಪದ ಮತ್ತು ಸೋಮು ನಾವಲಗಿ ಇವರು ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಹಡಪದ ಸಮಾಜದ ಪ್ರಮುಖರು, ರಾಜ್ಯ ಹಾಗೂ ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು
ಬೆಳಗಾವಿ ಜಿಲ್ಲಾ ಹಡಪದ ಸಮಾಜದ ಅಧ್ಯಕ್ಷರಾಗಿ ಅಥಣಿಯ ಶಿವಾನಂದ ಹುನ್ನೂರ ಆಯ್ಕೆ
