ಘಟಪ್ರಭಾ.ಕರ್ನಾಟಕ ರಕ್ಷಣಾ ವೇದಿಕೆ ಸತತ ಪ್ರಯತ್ನದ ಹಿನ್ನೆಲೆಯಲ್ಲಿ ದೂಪದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದೈಹಿಕ ಶಿಕ್ಷಕರನ್ನು ನಿಯೋಜಿಸಿದ ಶಾಸಕರಾದ ರಮೇಶ ಜಾರಕಿಹೊಳಿಯವರಿಗೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕರವೇ ಹರ್ಷ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ನೂತನವಾಗಿ ನಿಯೋಜನೆಗೊಂಡ ರೆಡ್ಡಿ ಅವರಿಗೆ ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ಈ ಕಾರ್ಯಕ್ರಮ ಉದ್ದೇಶಿಸಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷ ರವಿ ನಾವಿ ಮಾತನಾಡಿ ಹಿಂದೆ ವಿ ಟಿ ಸೋಮಕ್ಕನವರ ದೈಹಿಕ ಶಿಕ್ಷಕರು ಇದ್ದ ಕ್ರೀಡೆಯ ಗತವೈಭವವನ್ನು ನೂತನ ದೈಹಿಕ ಶಿಕ್ಷಕರು ಮರಳಿ ತರಬೇಕೆಂದು ಕಿವಿ ಮಾತು ಹೇಳಿದರು. ಈ ಸಂಧರ್ಭದಲ್ಲಿ ಕರವೇ ರೆಹಮಾನ ಮೊಕಾಶಿ ತಾಲ್ಲೂಕು ಅಧ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ, ಲಗಮಣ್ಣಾ ನಾಗನ್ನವರ, ದರೆಪ್ಪಾ ಮಗದುಮ, ಪ್ರಕಾಶ ಮುತ್ತೆಪ್ಪಗೋಳ,ಗಜಪ್ಪ ಗಾಡಿವಡ್ಡರ, ಅಶೋಕ ಗಾಡಿವಡ್ಡರ,ಮುಖ್ಯೋಪಾಧ್ಯಾಯ ಹೊಸಮನಿ ಗುರುಗಳು ಸೇರಿದಂತೆ ಶಾಲಾ ಶಿಕ್ಷಕರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.