ಸಚಿವ ಸಂಪುಟದಲ್ಲಿ ಹಲವು ಯೋಜನೆಗಳಿಗೆ ಅನುಮೋದನೆ

Ravi Talawar
ಸಚಿವ ಸಂಪುಟದಲ್ಲಿ ಹಲವು ಯೋಜನೆಗಳಿಗೆ ಅನುಮೋದನೆ
WhatsApp Group Join Now
Telegram Group Join Now

ಬೆಂಗಳೂರು, ಫೆಬ್ರವರಿ 21: ರಾಜ್ಯದಲ್ಲಿ ಈಗಾಗಲೇ ಕೈಗಾರಿಕಾ ನೀತಿ 2025-30 ಜಾರಿಗೊಳಿಸಲಾಗಿದೆ. ಇದಕ್ಕೆ ಅನುಮೋದನೆ ನೀಡುವ ಜೊತೆಗೆ ಸಾಕಷ್ಟು ಯೋಜನೆಗಳಿಗೆ ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಐಐಐಟಿ-ಬೆಂಗಳೂರಿನಲ್ಲಿ ಮೂಲಸೌಕರ್ಯ ವಿಸ್ತರಣೆ ಅನುದಾನ ಪೂರೈಕೆ ಒಳಗೊಂಡಂತೆ ವಿವಿಧ ಮೂಲ ಸೌಕರ್ಯ ಯೋಜನೆಗಳನ್ನು ಜಾರಿಗೆ ತರಲು ಅನುಮೋದನೆ ನೀಡಲಾಯಿತು.

ಒಂದು ವಾರದ ಹಿಂದಷ್ಟೇ ಇನ್ವೆಸ್ಟ್ ಕರ್ನಾಟಕ 2025 ಪೂರ್ಣಗೊಂಡಿದೆ. ಐಐಐಟಿ-ಬೆಂಗಳೂರು ಮೂಲ ಸೌಕರ್ಯ ಒದಗಿಸುವ ಒಟ್ಟು 817 ಕೋಟಿ ರೂ.ಯೋಜನೆಗೆ ಕರ್ನಾಟಕವು ಶೇ. 35 ರಷ್ಟು ಅಂದರೆ 285.95 ಕೋಟಿ ರೂ. ನೀಡುವುದಾಗಿ ಒಪ್ಪಿದೆ. ಇದನ್ನು ಮುಂದಿನ ತಿಂಗಳು ಮಂಡನೆ ಆಗಲಿರುವ ಕರ್ನಾಟಕ ಬಜೆಟ್ 2024-25ನಲ್ಲಿ ಘೋಷಿಸಲಿದೆ. ಬಾಕಿ ಮೊತ್ತವನ್ನು ಏಳು ವರ್ಷಗಳಲ್ಲಿ ನೀಡಲು ಸರ್ಕಾರ, ಸಂಪುಟವು ತೀರ್ಮಾನಿಸಿದೆ. ಬಾಕಿ ಹಣ ವಿವಿಧ ಮೂಲಗಳಿಂದ ಐಐಐಟಿ ಬೆಂಗಳೂರು ಪಡೆದುಕೊಳ್ಳಲು ಮುಂದಾಗಿದೆ ಎಂದು TNIE ವರದಿ ಮಾಡಿದೆ.

 

WhatsApp Group Join Now
Telegram Group Join Now
Share This Article